ಕೂಡ್ಲಿಗಿ ತಾಲೂಕು  ಆಸ್ಪತ್ರೆಯನ್ನು ಉನ್ನತೀಕರಿಸಿ ಅಭಿವೃದ್ಧಿಗೆ ಒತ್ತು ಕೊಡುವೆ ಶಾಸಕ ಡಾ.‌ ಶ್ರೀನಿವಾಸ್. ಎನ್. ಟಿ…!!!

Listen to this article

ಮಹಿಳಾ  ಕಾರ್ಯಕರ್ತರಿಗೆ ಆರೋಗ್ಯ  ಶಿಬಿರ ಉದ್ಘಾಟನೆ ;  ತಾಲೂಕು  ಆಸ್ಪತ್ರೆಯನ್ನು ಉನ್ನತೀಕರಿಸಿ ಅಭಿವೃದ್ಧಿಗೆ ಒತ್ತು ಕೊಡುವೆ .  ಶಾಸಕ – ಡಾ.‌ ಶ್ರೀನಿವಾಸ್. ಎನ್. ಟಿ.

ಬೆಂಗಳೂರು ಕಿದ್ವಾಯಿ ಸಹಯೋಗ,  ಕೂಡ್ಲಿಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಸಹಕಾರದೊಂದಿಗೆ ” ಮಹಿಳಾ ದಿನಾಚರಣೆ   ” ಅಂಗವಾಗಿ  ದಿ.11-03-24 ರಂದು  ಪಟ್ಟಣದ ಸರ್ಕಾರಿ  ಆಸ್ಪತ್ರೆ ಆವರಣದಲ್ಲಿ  ಮಾನ್ಯಶಾಸಕರು  ಅಂಗನವಾಡಿ ಮತ್ತು  ಆಶಾಕಾರ್ಯಕರ್ತರು ,  ನಸ್೯ಗಳಿಗೆ ಅಸಾಂಕ್ರಾಮಿಕ ಖಾಯಿಲೆಗಳ ಪತ್ತೆ –  ಚಿಕಿತ್ಸಾ  ಶಿಬಿರ ಹಮ್ಮಿಕೊಂಡಿರುವುದನ್ನು  ಉದ್ಘಾಟಿಸಿದ ಬಳಿಕ   ಮಾತನಾಡಿದರು.
ಮಹಿಳಾ ಕಾರ್ಯಕರ್ತರ  ಆರೋಗ್ಯಕ್ಕಾಗಿ  ಒತ್ತು ಕೊಡಲು ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕ್ಷೇತ್ರದ ಉಪ ಆರೋಗ್ಯ ಕೇಂದ್ರಗಳ  ಅಭಿವೃದ್ಧಿಗೆ ಒತ್ತು ಕೊಡುವೆ.


ಖಾಸಗಿ  ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು  ಬಾಡಿಗೆ ಪಡೆದು ನಡೆಸುವುದನ್ನು  ತಪ್ಪಿಸುವೆ.
ಆಶಾ ಕಾರ್ಯಕರ್ತರ ಬೇಡಿಕೆಗಳ ಪರವಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವೆ.
ಕೂಡ್ಲಿಗಿ ಕ್ಷೇತ್ರದ  ಆಲೂರು, ಹೂಡೇಂ, ಬೆಳ್ಳಿಗಟ್ಟ, ತೂಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ  4 ಅಂಬ್ಯುಲೆನ್ಸ್ ವಾಹನಗಳ ಉದ್ಘಾಟನೆ.
ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಉನ್ನತೀಕರಿಸಿ ಗುಣಮಟ್ಟದ ಆರೋಗ್ಯಕ್ಕಾಗಿ ಒತ್ತು ಕೊಡುವೆ.
ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಇಲ್ಲಿಯೇ ವೈದರು  ಉಳಿಯುವಂತೆ ನೋಡಿಕೊಳ್ಳುವೆ.‌
ಈ ವೇಳೆ ವೈದ್ಯರು, ಮಹಿಳಾ ಆರೋಗ್ಯ ಕಾರ್ಯಕರ್ತರು , ಮುಖಂಡರು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend