ಗೋವಿಂದ ಗಿರಿ ತಾಂಡ: ಶ್ರೀದೇನಾ ಮಹಾರಾಜ್ ದೇವಸ್ಥಾನ ಉದ್ಘಾಟನೆ…!!!

Listen to this article

ಗೋವಿಂದ ಗಿರಿ ತಾಂಡ: ಶ್ರೀದೇನಾ ಮಹಾರಾಜ್ ದೇವಸ್ಥಾನ ಉದ್ಘಾಟನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಪಂಚಾಯ್ತಿ ವ್ಯಾಪ್ತಿ 20ನೇ ವಾರ್ಡ್ ಗೋವಿಂದಗಿರಿ ತಾಂಡಾದಲ್ಲಿ, ಶ್ರೀದೇನಾ ಮಹಾರಾಜ್ ನೂತನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಫೆ22ರಂದು ಜರುಗಿತು. ಕಾರ್ಯಕ್ರಮದ ಮನ್ನದಿನದ ರಾತ್ರಿಯಿಂದ ನೂತನ ದೇವಸ್ಥಾನವನ್ನು, ವಿದ್ಯುತ್ ದೀಪಗಳಿಂದ ಹಾಗೂ ಹಸಿರು ತೋರಣಗಳಿಂದ ಹಾಗೂ ವಿವಿದ ಹೂವು ಮಾಲೆಗಳಿಂದ ಅಲಂಕರಿಸಲಾಗಿತ್ತು. ಸಂಜೆಯಿಂದ ರಾತ್ರಿ ಹಾಗೂ ತಡರಾತ್ರಿಯವರೆಗೆ, ಮಕ್ಕಳು ಮಹಿಳೆಯರು ಯುವಕರು ಹಾಡುಗಳನ್ನು ಹಾಡುತ್ತಾ ಕುಣಿದು ಕುಪ್ಪಳಿಸಿ ಮನೋರಂಜಿಸಿದರು. ಉದ್ಘಾಟನಾ ದಿನದಂದು ತಾಂಡಾದ ಭಕ್ತರೆಲ್ಲರೂ ಸೇರಿ ದೇವಸ್ಥಾನದಲ್ಲಿ, ವಿವಿದ ಧಾರ್ಮಿಕ ವಿದಿವಿಧಾನಗಳನ್ನು ಆಚರಿಸಿದರು ಹಾಗೂ ನಿಯಮಾನುಸಾರ ಕಳಸಾರೋಹಣ ನೆರವೇರಿಸಿದರು. ಪುರೋಹೊತರ ಸಮೂಹವು ಧಾರ್ಮಿಕ ನಿಯಮಾನುಸಾರ, ಹೋಮ ಹವನಗಳನ್ನು ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರು, ಮಾಜಿ ಸದಸ್ಯರು ಹಾಗೂ ವಿವಿದ ಜನಪ್ರತಿನಿಧಿಗಳು. ತಾಂಡ ಸೇರಿದಂತೆ ವಿವಿದ ತಾಂಡಾಗಳ ಸಮುದಾಯದ ಅಸಂಖ್ಯಾತ ಭಕ್ತರು, ಗೋವಿಂದ ಗಿರಿ ತಾಂಡಾದ ಸರ್ವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend