ಆಲೂರು ಆಸ್ಪತ್ರೆಯ ಬಳಿ ಗಿಡ ನೆಡುವ ಕಾರ್ಯಕ್ರಮ,
ಹೊಸಹಳ್ಳಿ ಹೋಬಳಿಯ ಆಲೂರಿನ ಪುನೀತ್ ಅಭಿಮಾನಿ ಬಳಗದ ಯುವಕರು ಆಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಯುವಕರು ಹಮ್ಮಿಕೊಂಡಿದ್ದರು, ಪುನೀತ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗು ಕನ್ನಡ ನಾಡಿಗೆ ಮರೆಯಲಾಗದ ನೋವಾಗಿದ್ದು ಅವರ ನೆನಪಿಗೋಸ್ಕರ ಗಿಡವನ್ನು ಬೆಳೆಸುವುದರ ಮೂಲಕ ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲಿಯೂ ಬರಲಿ ಎನ್ನುವ ಉದ್ದೇಶದಿಂದ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಮಾಜಕ್ಕೆ ಏನಾದರೂ ಒಂದು ಒಳಿತನ್ನು ಮಾಡುವ ಹಂಬಲ ಇರಬೇಕೆಂದು ಈ ಸಂದರ್ಭದಲ್ಲಿ ಯುವಕರು ತಿಳಿಸುತ್ತಾ ಗಿಡವನ್ನು ನೆಟ್ಟು ನೀರನ್ನು ಹಾಕುವುದರ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕಲ್ಲೇಶ್ , ಪುನೀತ್ ಅಭಿಮಾನಿ ಬಳಗದ ಪ್ರಮುಖರಾದ ಕೊಟ್ರೇಶ್ ಹಾಗೂ ಯುವಕರ ತಂಡ ಈ ಸಂದರ್ಭದಲ್ಲಿ ಇದ್ದರು..
ವರದಿ. ವಿರೇಶ್. ಕೆ. ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030