ಜನಚೈತನ್ಯ ಯಾತ್ರೆ ಇಂದು ನಗರಕ್ಕೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ದ ಎರಡನೇ ಹಂತದ ಜನಚೈತನ್ಯ ಯಾತ್ರೆಯು ಎಂದು ಕಲಬುರ್ಗಿಗೆ ಬರಲಿದೆ ಎಂದು ಪಕ್ಷದ ರಾಜ್ಯಾ ಸಂಘಟನಾ ಕಾರ್ಯದರ್ಶಿ ಸಾಯಿಬಣ್ಣ ಜಮಾದಾರ್ ಅವರು ಹೇಳಿದರು. ನಗರದ ಹುಮ್ನಾಬಾದ್ ವರ್ತುಲ ರಸ್ತೆ ಹತ್ತಿರದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಆರಂಭವಾಗುವುದು ಯಾತ್ರೆಯು ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಯಾತ್ರೆಯು ಮಾರ್ಗಮಧ್ಯೆ ತಶಿಲ್ದಾರ್ ಕಚೇರಿ. ಪ್ರಾದೇಶಿಕ ಸಂಚಾರ ಕಚೇರಿ ( ಆರ್ ಟಿ ಓ ) ಪೊಲೀಸ್ ಠಾಣೆಗಳ ಹತ್ತಿರ ತೆರಳಿ ಲಂಚ ಮುಕ್ತ ಅಭಿಯಾನ ಕೈಗೊಳ್ಳುವುದು. ಜನರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು…
ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030