ಇಟ್ಟಿಗಿಯ”ಸಮಾಜಸೇವೆ ನಮ್ಮ ಗುರಿ”ಎಂಬ ತಂಡದಿಂದ ಆಹಾರ ಕಿಟ್ ವಿತರಣೆ.
ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಅದೊಂದು ಯುವಕರ ತಂಡ ಕಳೆದ ಐದು ತಿಂಗಳಿಂದ ಊರಿನ ವಯೋವೃದ್ದರಿಗೆ ಮತ್ತು ವಿಧವೆಯರಿಗೆ ಹಾಗೂ ಕಡು ಬಡವರಿಗೆ ಆಹಾರ ಧಾನ್ಯಗಳ ಜೋಳ,ಅಕ್ಕಿ,ಬೆಲ್ಲ,ಕೊಬ್ಬರಿ ಎಣ್ಣೆ,ಸಾಬೂನು,ಎಣ್ಣೆ,ಗೋಧಿ ಇನ್ನಿತರ ದಿನಸಿಗಳನ್ನು ನೀಡುತ್ತಾ ಬಂದಿದೆ.ಇಲ್ಲಿಯವರೆಗೆ ಪ್ರತಿ ತಿಂಗಳಿಗೆ ಐದು ಕುಟುಂಬದಂತೆ ಕಳೆದ ಐದು ತಿಂಗಳಿನಿಂದ ಇಲ್ಲಿಯವರೆಗೂ ಆಹಾರ ಕಿಟ್ಗಳನ್ನು ನೀಡುತ್ತಾ ಬಂದಿದೆ.ಸುಮಾರು ಐವತ್ತಕ್ಕೂ ಹೆಚ್ಚು ಸದಸ್ಯರಿರುವ *’ಸಮಾಜ ಸೇವೆ ನಮ್ಮಗುರಿ’ತಂಡದಲ್ಲಿ ಪ್ರತಿಯೊಬ್ಬ ಸದಸ್ಯರು ತಿಂಗಳಿಗೆ ತಲಾ 300 ರೂಪಾಯಿಗಳಂತೆ ಹಣ ಹಾಕಿಕೊಂಡು, ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ* ಎಂಬ ಧ್ಯೇಯದೊಂದಿಗೆ ಸಮಾಜ ಸೇವೆ ಮಾಡುತ್ತ ಊರಿನ ಹಿರಿಯ ನಿಸ್ಸಾಯಕ ಜೀವಗಳಿಗೆ ಆಶ್ರಯವಾಗಿದ್ದಾರೆಂದರೆ ಅತಿಶಯೋಕ್ತಿ ಅಲ್ಲ.ಇಲ್ಲಿಯವರೆಗೆ ಹಲವು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ ಅವರಿಗೆ ಅಹಾರ ಧಾನ್ಯಗಳನ್ನು ಪಡೆದುಕೊಂಡವರಿಂದ ‘ನೂರಾರು ಕಾಲ ಸುಖವಾಗಿ ಬಾಳಿ’ಎಂದು ಹಾರೈಸಿಕೊಂಡಿದ್ದಾರೆ.ಪತ್ರಿಕೆಯೊಂದಿಗೆ ಮಾತಾನಾಡಿದ ಸದಸ್ಯ ಸಹೋದರೊಬ್ಬರು ಸಂಕುಚಿತ ವಿಚಾರಗಳಿಂದ ವ್ಯಕ್ತಿತ್ವ ಕ್ಷೀಣಿಸುತ್ತದೆ. ವಿಶಾಲ ಮನೋಭಾವನೆಯಿಂದ ಮಾಡಿದ ಕಾರ್ಯಕ್ಕೆ ಸದಾ ಯಶಸ್ಸು ಹಾಗೂ ಜನಮನ್ನಣೆ ಸಿಗುತ್ತದೆ. ಸಮಾಜ ಸೇವೆ ಜೀವನದ ಉಸಿರಾಗಬೇಕು ಎಂದು ಹೇಳಿದರು.ಅದಲ್ಲದೆ ತಾವು ಸಹಾಯ ಮಾಡುವದರೊಂದಿಗೆ ಇನ್ನೊಬ್ಬರಿಗೆ ಸಹಾಯ ಮಾಡಲು ಪ್ರೇರೆಪಿಸಿದರೆ ಅದಕ್ಕಿಂತ ಪುಣ್ಯ ಬೇರೊಂದಿಲ್ಲ ಎಂದರು.ಸ್ವಲ್ಪ ಸಹಾಯ ಮಾಡಿದರೆ ಸಾಕು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡು ಮೆರೆಯುವವರ ಈ ಕಾಲದಲ್ಲಿ ಅವರ ಈ ಸಮಾಜಸೇವೆಯನ್ನು ಸುದ್ದಿ ಮಾಡೊದು ಕೂಡ ಅವರಿಗೆ ಇಷ್ಟವಿದ್ದಿಲ್ಲ ಮತ್ತೆ ನಮ್ಮ ಮನವಿಗೆ ಸ್ಪಂದಿಸಿ ಸುದ್ದಿ ಮಾಡಿ ಅಂತ ಹೇಳಿರುತ್ತಾರೆ. ಆದ್ದರಿಂದಲೆ ಇಲ್ಲಿ ಸದಸ್ಯ ಹಾಗು ಫಲಾನುಭವಿಗಳ ಹೆಸರುಗಳನ್ನು ತಿಳಿಸಲಾಗಿಲ್ಲ. ನಾವಾಯಿತು ನಮ್ಮ ಮನೆಯಾಯಿತು ಎನ್ನುವ ಈ ಕಾಲದಲ್ಲಿ ಇಂತಹವರು ಸಿಗುವುದು ತುಂಬಾ ಅಪರೂಪ. ಇಂತವರಿಂದ ಇನ್ನೂ ನಾಲ್ಕು ಜನ ಸಮಾಜಸೇವೆಗೆ ಮುಂದಾಗಿ ಕೈಲಾಗದವರ ಜೀವನ ನಡೆಸಲು ಆಶ್ರಯವಾಗಲೆನ್ನುವುದೊಂದೆ ನಮ್ಮ ಪತ್ರಿಕೆಯ ಆಶಯ.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030