ಕೂಡ್ಲಿಗಿ:ಕಾಡ್ಗತ್ತಲಲ್ಲಿ ಪ್ರಮುಖ ರಸ್ಥೆ-ವಂದೇ ಮಾತರಂ ಆಕ್ರೊಶ…!!!

Listen to this article

ಕೂಡ್ಲಿಗಿ:ಕಾಡ್ಗತ್ತಲಲ್ಲಿ ಪ್ರಮುಖ ರಸ್ಥೆ-ವಂದೇ ಮಾತರಂ ಆಕ್ರೊಶ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೊಟ್ಟೂರು ರಸ್ತೆಯ ಬೀದಿ ದೀಪಗಳು ಹಲವು ದಿನಗಳಿಂದ ಬೆಳಗುತಿಲ್ಲ,ಕಾಡ್ಗತ್ತಲು ಆವರಿಸಿದೆ ಕ್ರಿಮಿಕೀಟಗಳೇ ಹೆಚ್ಚಿರುವ ಈ ವಲಯದಲ್ಲಿ ಕಾಡ್ಗತ್ತಲು ಆವರಿಸಿದೆ.ಶ್ರೀವಾಲ್ಮೀಕಿ ಭವನಕ್ಕೆ ಸಂಪರ್ಕಕ್ಕೆ ಕಲ್ಪಿಸುವ ಈ ರಸ್ತೆ ನಿತ್ಯ ರಾತ್ರಿ ಕಾಡ್ಗತ್ತಲಿನಿಂದ ಕೂಡಿರುತ್ತದೆ,ಸಂಬಂಧಿಸಿದಂತೆ ಪಪಂ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದರೂ ಪ್ರಯೊಜನವಾಗಿಲ್ಲ. ಈ ವಿಷಯದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿರ್ಲಕ್ಷ್ಯ ಧೋರಣೆ ಹಾಗೂ ವಾರ್ಡಿನ ಪಪಂ ಸದಸ್ಯರ ಅಸಹಕಾರ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನು ವಂದೇ ಮಾತರಂ ಜಾಗೃತಿ ವೇದಿಕೆ ನಗರ ಘಟಕ ತೀವ್ರವಾಗಿ ಖಂಡಿಸಿದ್ದು ನಿರ್ಲಕ್ಷ್ಯ ದೋರಣೆ ವಿರುದ್ದ ವೇದಿಕೆ ಪದಾಧಿಕಾರಿಗಳು ‍ಆಕ್ರೋಶ ವ್ಯಕ್ತಪಡಿಸಿದ್ದಾರೆ, ಶೀಘ್ರದಲ್ಲೇ ದುರಸ್ಥೆಗೊಳಿಸಬೇಕೆಂದು ಈ ವೇದಿಕೆ ಮೂಲಕ ಒತ್ತಾಯಿಸಿದೆ. ಈ ದುರಾವಸ್ಥೆ
ಪಟ್ಟಣದ ಪ್ರತಿಷ್ಠೆ ಯನ್ನ ಅಣಕಿಸುವಂತಿದೆ ಪಪಂ ಮುಖ್ಯಾಧಿಕಾರಿ ಕಾರ್ಯದಕ್ಷತೆಯನ್ನ ಪ್ರೆಶ್ನಿಸುವಂತಿದ್ದು,ಕ್ರಿಮಿ ಕೀಟಗಳೇ ಎತೇಚ್ಚವಾಗಿರುವ ಮುಳ್ಳು ಕಳ್ಳಿಗಳುಳ್ಳ ವಲಯವಾಗಿದೆ.
ಇಂತಹ ದುಸ್ಥಿತಿಯಲ್ಲಿ
ಸಾರ್ವಜನಿಕರು ಕತ್ತಲಲ್ಲಿ ಸಂಚರಿಸಬೇಕಿದೆ.ಜೀವವನ್ನ ಕೈಯಲ್ಲಿಡಿದುಕೊಂಡೇ ಸಂಚರಿಸಬೇಕಿದೆ ಪ್ರಮುಖ ರಸ್ಥೆಯ ಗತಿ ಹೀಗಾದರೆ ಹೇಗೆ..!?, ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಲಿದೆ.ಸಂಬಂಧಿಸಿದಂತೆ ಶೀಘ್ರವೇ ಪಪಂ ಮುಖ್ಯಾಧಿಕಾರಿ ವಿದ್ಯತ್ ಕಂಬದಲ್ಲಿರುವ ಬಲ್ಪಗಳನ್ನು ಹತ್ತಿಸುವಲ್ಲಿ. ಜವಾಬ್ದಾರಿ ಕಾರ್ಯಮಾಡಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ನಗರ ಘಟಕ ಈ ಮೂಲಕ ಪಪಂ ಅಧಿಕಾರಿಗೆ ಒತ್ತಾಯಿಸಿದೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend