ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯ ದೇವಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶಕ್ತಿ ದೇವತೆ ಶ್ರೀ ದೊಡ್ಡಮ್ಮ ಹಾಗೂ ಕರಿಯಮ್ಮ ದೇವಿಯವರ ರಥೋತ್ಸವ ಶನಿವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿತು ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು, ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಲೆಂದು ಉತ್ತುತ್ತಿ,ಹೂವು, ಬಾಳೆಹಣ್ಣು,ಚಿಲ್ಲರೆ ಹಣವನ್ನು ರಥಕ್ಕೆ ಸಮರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಮಂಗಳವಾರದ ಮದಣಗಿತ್ತಿ ಶಾಸ್ತ್ರದಿಂದ ಪ್ರಾರಂಭಗೊಂಡು ಬುಧವಾರ ಬೇವಿನ ಸೀರೆ ಕಾರ್ಯಕ್ರಮ ಶನಿವಾರ ರಥೋತ್ಸವ ಹಾಗೂ ಭಾನುವಾರ ಸಿಡಿ ಉತ್ಸವ ಕಾರ್ಯಕ್ರಮವು ಅತ್ಯಂತ ವಿಜ್ರಮಣಿಯಿಂದ ನೆರವೇರಲಿದ್ದು ಪಕ್ಕದ ಗಾಳಿ ರಂಗಯ್ಯನ ಹಟ್ಟಿ ಗುತ್ತಿಕಟ್ಟೆ ಕಲ್ಲಹಳ್ಳಿ ಜಂತಿಕೊಳಲು ಕುಂಬಾರಗಟ್ಟೆ ಕೃಷ್ಣಾಪುರ ಹೇರೂರು ಗ್ರಾಮದಿಂದ ಹೆಚ್ಚು ಭಕ್ತರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಇದೇ ಸಂದರ್ಭದಲ್ಲಿ ಪಟ್ಟದ ಪೂಜಾರಿ ಇಂದ ನಡೆದ ಸೋಮದೇವರ ಕುಣಿತ ಸೇರಿದ್ದ ಭಕ್ತರ ಕಣ್ಮನ ಸೆಳೆಯಿತು…
ವರದಿ. ಪಾಲದೀಪ್ ಯಾದವ್, ಹೊಸದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030