ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಂತಮ್ಮನವರಿಗೆ ವೀಲ್ ಚೇರನ್ನು ನೀಡಿ ಅವರಿಗೆ ಸಾಂತ್ವನ ಹೇಳಲಾಯಿತು…!!!

Listen to this article

ಹೊಸದುರ್ಗ: ತಾಲೂಕಿನ ಹಾಲು ರಾಮೇಶ್ವರ ಯೋಜನಾ ಕಚೇರಿಯ ಮಾಡದಕೆರೆ ವಲಯದ ಕೆಂಕೆರೆ ಗ್ರಾಮದಲ್ಲಿ ಶಾಂತಮ್ಮ, ಎನ್ನುವ ಮಹಿಳೆ ಕಳೆದ ಎರಡು ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಂತಮ್ಮನವರಿಗೆ ವೀಲ್ ಚೇರನ್ನು ನೀಡಿ ಅವರಿಗೆ ಸಾಂತ್ವನ ಹೇಳಲಾಯಿತು. ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಚಂದ್ರಶೇಖರ್, ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಡೀ ರಾಜ್ಯದಲ್ಲಿ ಇಂತಹ ಅಂಗವಿಕಲರಿಗೆ. ವಿಕಲಚೇತನರಿಗೆ. ಇಂತಹ ಸಾಮಗ್ರಿಗಳನ್ನು ಪ್ರತಿನಿತ್ಯವೂ ರಾಜ್ಯದ ಮೂಲೆ ಮೂಲೆಯಲ್ಲಿ ನೀಡುತ್ತಿದೆ ಎಂದು ತಿಳಿಸಿದರು. ಅದರೊಟ್ಟಿಗೆ ಹೊಸದುರ್ಗ ತಾಲೂಕಿನಲ್ಲಿ 263 ಜನ ನಿರ್ಗತಿಕರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮಾಶಾಸನ ನೀಡುತ್ತಿರುವುದನ್ನು ತಿಳಿಸಿದರು. ಇಂತಹ ಪುಣ್ಯದ ಕಾರ್ಯವನ್ನು ಇಡೀ ರಾಜ್ಯದಂತ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಶ್ರೀ ಪರಮಪೂಜ್ಯ ರಾಜರಿಷಿ ಪದ್ಮಭೂಷಣ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಲಾಯಿತು. ಈ ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಹರೀಶ್, ವಲಯ ಮೇಲ್ವಿಚಾರಕರು ಶ್ರೀ ಸುಜಯ್, ಕೃಷಿ ಅಧಿಕಾರಿ ಉಮೇಶ್, ಸೇವಾಪ್ರತಿನಿಧಿ ಸಚಿನ್, ಚಿನ್ಮಯ್, ಗ್ರಾಮದ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು….

ವರದಿ. ಪಾಲದೀಪ್ ಯಾದವ್ ಹಕ್ಕಿತಿಮ್ಮಯ್ಯನಹಟ್ಟಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend