ಶಾಸಕ ಚಂದ್ರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ರೈತ ರೇವಣ್ಣ ಅಗ್ರಹ.
ಹೊಳಲ್ಕೆರೆ : ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ತಾಳಿಕಟ್ಟೆ ರೈತ ರೇವಣ್ಣ ಎಂಬುವವರು ಕಳೆದ ಎರಡು ದಿನಗಳಿಂದ ಹೊಳಲ್ಕೆರೆ ತಾಲ್ಲೂಕು ಕಚೇರಿ ಬಳಿ ಉಪವಾಸ ಸತ್ಯಗ್ರಹ ಆರಂಭಿಸಿದ್ದಾರೆ.
ಇನ್ನೂ ಸೋಮವಾರ ದಿಂದ ಉಪವಾಸ ಸತ್ಯಾಗ್ರಹವನ್ನು ಮಧ್ಯಾಹ್ನ 12 ಗಂಟೆಗೆ ನಡೆಡಸಿದ ಅವರು ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ ವಡೆರಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯವರು ತಾಳಿಕಟ್ಟೆ ಗ್ರಾಮದ ವಡೇರಹಳ್ಳಿ ಕೆರೆ ಅಭಿವೃದ್ಧಿಯಾಗದೆ 60 ಲಕ್ಷ ರೂಪಾಯಿಗಳನ್ನು ಅಕ್ರಮ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಚಳ್ಳಕೆರೆ ತಾಲ್ಲೂಕು ಗುತ್ತಿಗೆದಾರ ಮತ್ತು AEE ಇವರ ವಿರುದ್ಧ ಸರ್ಕಾರ ಮತ್ತು ಜಿಲ್ಲಾಡಳಿತ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಮತ್ತು ಇವರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಶಾಸಕರಾದ ಚಂದ್ರಪ್ಪನವರು ನೈತಿಕ ಹೊಣೆಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಉಪವಾಸ ಸತ್ಯಗ್ರಹ ಆರಂಭಿಸಿ ಒತ್ತಾಯಿಸಿದರು.
ಈಗಾಗಲೆ ಕೆರೆ ಅಭಿವೃದ್ಧಿ ಹೆಸರಿನಲ್ಲಿ. ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹಲವಾರು ಭಾರಿ ಇಲಾಖೆ ಮತ್ತು ಶಾಸಕರ ಗಮನಕ್ಕೆ ತಂದರು ಕ್ರಮ ವಹಿಸುತ್ತಿಲ್ಲ. ಇಲಾಖೆ ಅಧಿಕಾರಿಗಳು, ಜನಪ್ರತಿಗಳು, ಗುತ್ತಿಗೆದಾರರು ಕೆರೆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಕ್ಷೇತ್ರದ ಕಲ್ಯಾಣ ಶ್ರಮಿಸಬೇಕಿದ್ದ ಶಾಸಕರು ಈ ಬಗ್ಗೆ ಮಾತನಾಡದೆ ಮೌನವಾಗಿದ್ದಾರೆ. ಅಕ್ರಮ ಕುರಿತು ಕ್ರಮ ವಹಿಸುತ್ತಿಲ್ಲ. ಜನಪ್ರತಿನಿಧಿಯಾಗಿ ಇಲಾಖೆ ಭ್ರಷ್ಟಾಚಾರ ವಿರೋಧ ಮಾಡದೆ ಅವರ ಪರವಾನಗಿ ನಿಂತಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030