ಸಮಾಜದ ಸರ್ವತೋಮುಖ ಆಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಶ್ರಮಿಸಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು…!!!

Listen to this article

ಹೊಳಲ್ಕೆರೆ : ಸಮಾಜದ ಸರ್ವತೋಮುಖ ಆಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಶ್ರಮಿಸಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಳಲ್ಕೆರೆ ಪಟ್ಟಣದ ಶಿವನಕೆರೆ ಹತ್ತಿರ ನಿರ್ಮಿಸಿರುವ ವಿಕಾಸ ಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ೧.೨೫ ಲಕ್ಷ ಕೋಟಿ ವರಬಾಕಿ ಇದೆ. ೪೫೦೦ ಸಂಘಗಳು ಎ ಗ್ರೇಡ್‌ನಲ್ಲಿವೆ. ಪ್ರತಿ ಸಂಘದ ಸದಸ್ಯರಿಗೆ ೧.೩೦ ಲಕ್ಷ ಲಾಭಾಂಶ ಬಂದಿದೆ. ಧರ್ಮಸ್ಥಳ ಯೋಜನೆ ಪ್ರಯೋಜನ ಪಡೆದ ಮಹಿಳೆಯರು ಇಂದು ಚಿನ್ನ ಖರೀದಿಸುವಷ್ಟು ಅರ್ಧಿಕ ಸದೃಢರು. ಸಮಾಜದ ಪ್ರತಿ ಕುಟುಂಬದ ಅಭ್ಯುದಯ ನಮ್ಮ ಕನಸಾಗಿದ್ದು, ಕುಟುಂಬ ನಿರ್ವಹಣೆೆಯ ಮಹಿಳೆಯನ್ನು ಅರ್ಥಿಕ ಮಂತ್ರಿಯನ್ನಾಗಿ ಮಾಡಲಾಗಿದೆ. ಯೋಜನೆ ಬಂಡವಾಳ ಕೊಡುತ್ತದೆ. ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡುತ್ತೆ, ಮಕ್ಕಳಿಗೆ ಶಿಕ್ಷಣ ನೀಡಲು ವೇತನ ನೀಡಿದೆ, ನಿಮ್ಮ ಗ್ರಾಮದ ಧರ್ಮಕೆಲಸಕ್ಕೆ ದೇಣಿಕೆ ವಿತರಿಸಿದೆ. ಕೆರೆಗಳ ಆಭಿವೃದ್ಧಿಗೆ ಒತ್ತು ನೀಡಿ, ಕೃಷಿಗೆ ಉತ್ತೇಜನ ಕೊಟ್ಟಿದೆ. ಇವೇಲ್ಲ ಬಂಡವಾಳ ದಿಂದ ಸಾಧ್ಯವಿಲ್ಲ. ಬಂಡವಾಳವನ್ನು ಸಂಘದ ಮಹಿಳೆಯರು ಮಾಡಿಕೊಂಡ ಸದ್ಭಳಕೆಯಿಂದ ಸಾಧ್ಯ, ಇನ್ನೋಷ್ಟು ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುತ್ತದೆ ಎಂದರು.

ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಿ ಮಾತನಾಡಿ, ಧರ್ಮಸ್ಥಳದ ಮಹಿಮೆ ಅರಿವಿಲ್ಲದೆ ಅಪ ಪ್ರ‍್ರಚಾರ ಸರಿಯಲ್ಲ. ಸರಕಾರದ ಮಾದರಿಯಲ್ಲಿ ಜನರ ಕಲ್ಯಾಣಕ್ಕೆ ಯೋಜನೆ ಕಳೆದ ೪೫ ವರ್ಷಗಳಿಂದ ಶ್ರಮಿಸುತ್ತಿದೆ. ಕೆರೆಗಳ ಅಭಿವೃದ್ಧಿ, ಕೃಷಿ ಪ್ರಗತಿ, ಸ್ವಯಂ ಉದ್ಯೋಗ ತರಬೇತಿ, ಮಹಿಳೆಯರಿಗೆ ಸಾಲಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.

ಮಾಜಿ ಸಚಿವ ಹೆಚ್.ಆಂಜನೇಯ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸಿ ಮಾತನಾಡಿ, ಸರಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ಧರ್ಮಸ್ಥಳ ಯೋಜನೆ ಕೈಗೊಂಡಿದೆ. ಪ್ರತಿ ಮನೆಯ ಮಹಿಳೆ ಯೋಜನೆಯ ಆರ್ಥಿಕ ನೆರವು ಪಡೆದು ಸಬಲೀಕರಣಗೊಂಡಿದ್ದಾಳೆ. ಇನ್ನು ಧರ್ಮಸ್ಥಳ ಎಂದರೇ ಅದೊಂದು ಸತ್ಯ ಸಂಧೇಶ, ಭಕ್ತಿ ಇದ್ದಂತೆ. ಜನರು ಧರ್ಮಸ್ಥಳದ ಹೆಸರು ಹೇಳಿದರೇ ಸಾಕು ತಪ್ಪು ಒಪ್ಪಿಕೊಳ್ಳುತ್ತಾರೆ. ಅಷ್ಟೊಂದು ಭಕ್ತಿ ನಂಬಿಕೆ ಜನರಲ್ಲಿದೆ. ಹಾಗಾಗಿ ಧರ್ಮಾಧಿಕಾರಿಗಳು ಇಲ್ಲಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಶಾಲೆ ಕಾಲೇಜು ಆಸ್ಪತ್ರೆ ಅರಂಭಿಸಬೇಕು. ಸಂಸ್ಥೆಗೆ ಸರಕಾರದಿಂದ ಜಮೀನು ಕೊಡಿಸುತ್ತೇವೆಂದು ಪೂಜ್ಯರಲ್ಲಿ ಮನವಿ ಮಾಡಿದರು.

ಸಂಸದ ಗೋವಿಂದ ಕಾರಜೋಳ ನಮ್ಮೂರು ನಮ್ಮ ಕೆರೆ ಪತ್ರ ವಿತರಿಸಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಸ್ಥೆ ಅಪಾರ ಕೊಡುಗೆ ನೀಡಿದೆ. ೪೫ ವರ್ಷ ಹಿಂದೆ ತೀವ್ರ ಬಡತನದ ಕಾಲದಲ್ಲಿ ಉಚಿತ ವಿವಾಹ ಕರ‍್ಯ ಕೈಗೊಂಡು ಬಡವರ ವಿವಾಹಕ್ಕೆ ಹೊಸ ಮುನ್ನುಡಿ ಬರೆದಿದೆ. ಪೂಜ್ಯರ ಕರ‍್ಯ ಸಾಧನೆ ಗಮನಿಸಿದ ಪ್ರಧಾನ ಮಂತ್ರಿಗಳು ರಾಜ್ಯ ಸಭೆಯಲ್ಲಿ ಸದಸ್ಯರನ್ನಾಗಿಸಿ ನೇಮಿಸಿ ಧರ್ಮಸ್ಥಳ ಯೋಜನೆ ಪ್ರಯೋಜನ ದೇಶಕ್ಕೆ ಸಿಕ್ಕುವಂತೆ ಮಾಡುತ್ತಿದ್ದಾರೆ. ಸರಕಾರದ ಮಾದರಿಯಲ್ಲಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಶ್ರೀಗಳ ಕರ‍್ಯ ಶ್ಘಾಘನೀಯ ಎಂದರು.

ಅಧ್ಯಕ್ಷತೆ ವಹಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹೆಗ್ಗಡೆರವರ ಕರ‍್ಯಸಾಧನೆ ನೋಡಿದ ಪ್ರಧಾನಿಗಳು ರಾಜ್ಯ ಸಭಾ ಸದಸ್ಯರನ್ನು ಮಾಡಿದ್ದರಿಂದ ರಾಜ್ಯ ಸಭಾದ ಘನತೆ ಹೆಚ್ಚಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಡೆಯವರ ಚಿಂತನೆಗಳನ್ನು ಸಹಕಾರಗೊಳಿಸಬೇಕು. ದೇಶ ಎಲ್ಲಾ ಜನರಿಗೆ ಧರ್ಮಸ್ಥಳ ಯೋಜನೆ ತಲುಪಿಸಲು ದೇಶದಾದ್ಯಂತ ವಿಸ್ತರಿಸಬೇಕು. ಆಗ ದೇಶ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೂತ್, ಕೆ.ಎಸ್.ನವೀನ್, ಬಿ.ಕೆ.ಸುಮಿತ್ರಕ್ಕ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ, ಮಾಜಿ ಅಧ್ಯಕ್ಷ ಆರ್.ಎ.ಆಶೋಕ್, ಬಿ.ಎಸ್.ರುದ್ರಪ್ಪ, ಮಾಜಿ ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರಾದ ಸೈಯದ್ ಸಜೀಲ್, ಸವಿತ ನರಸಿಂಹ ಖಟ್ರೂತ್, ಡಿ.ಎಸ್.ವಿಜಯ್, ಪಿ.ಆರ್.ಮಲ್ಲಿಕಾರ್ಜುನ್, ಮಸ್ಸೂರು, ಮಮತ ಜಯಸಿಂಹ ಖಾಟ್ರೂತ್, ಸುಧಾಬಸವರಾಜ್, ಪೂರ್ಣೀಮಾಬಸವರಾಜ್, ಶಭೀನ ಆಶ್ರಪ್ ವುಲ್ಲ, ಪಿ.ಹೆಚ್.ಮರುಗೇಶ್,ಬಿ.ವಸಂತರಾಜ್, ನಾಮ ನಿರ್ದೇಶಕ ಸದಸ್ಯರಾದ ಜಿ.ಹೆಚ್.ಬಸವರಾಜ್, ಮಜರ್ ವುಲ್ಲ ಖಾನ್, ಎಸ್.ಆರ್.ಮಂಜುನಾಥ, ಪ್ರಾಧೇಶಿಕ ನಿರ್ಧೇಶಕಿ ಗೀತಾ.ಬಿ. ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿ ಪ್ರಭಾಕರ್, ಜಿಲ್ಲಾ ಜನಜಾಗೃತಿ ವೇಧಿಕೆ ಅಧ್ಯಕ್ಷ ಓಂಕಾರಪ್ಪ, ಮಾಜಿ ಅಧ್ಯಕ್ಷ ಮಾರುತೇಶ್, ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಮತ್ತೀತರರು ಇದ್ದರು.

ಬಾಕ್ಸ್ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಕೆರಳ, ತಮಿಳುನಾಡು, ದೆಹಲಿಗೆ ವಿಸ್ತರಿಸಿದೆ. ಅಲ್ಲಿನ ಬ್ಯಾಂಕ್‌ಗಳು ಮಹಿಳೆಯರಿಗೆ ಸಾಲ ನೀಡುತ್ತಿಲ್ಲ. ನಾವು ಬ್ಯಾಂಕ್‌ಗಳಿಗೆ ಮಹಿಳೆಯರ ಪರವಾಗಿ ಜಾಮೀನು ನೀಡಿ ಸಂಘದ ಸದಸ್ಯರಿಗೆ ಅರ್ಥಿಕ ನೆರವು ನೀಡುತ್ತಿದ್ಧೆವೆ. ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ನೀಡಲು ದೇಶದ ೬೦೦ ಕಡೆಗಳಲ್ಲಿ ತರಬೇತಿ ಕೇಂದ್ರ ತೆರೆದಿದೆ ಎಂದರು.
ಡಾ.ಡಿ.ವೀರೇಂದ್ರ ಹೆಗ್ಗಡೆ
ಬಾಕ್ಸ್ : ಧರ್ಮಸ್ಥಳದಲ್ಲಿರುವ ಸತ್ಯ, ನ್ಯಾಯದ ಹಿನ್ನಲೆಯಲ್ಲಿ ಅನ್ಯಾಯಕ್ಕೆ ತುತ್ತಾದಾಗ ಜನರು ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಿ ಎಂದು ಹೇಳುತ್ತಾರೆ. ಅದರೇ ರಾಜಕಾರಣಿಗಳು ದೇವರನ್ನು ಬಿಟ್ಟಿಲ್ಲ. ಮತಕ್ಕೆ ಹಣ ಹಂಚುವಾಗ ಅದರಲ್ಲಿ ಮಂಜುನಾಥ ಸ್ವಾಮಿ ಪೋಟೋ ಇಟ್ಟು, ಮಾತು ತಪ್ಪಿದರೇ ಶಿಕ್ಷೆ ತಪ್ಪಿದಲ್ಲ ಎಂದು ಚೀಟಿ ಇಟ್ಟು ರಾಜಕಾರಣ ಮಾಡುತ್ತಿರುವವರಿಗೆ ಮಂಜುನಾಧ ಸ್ವಾಮಿ ಶಿಕ್ಷೆ ನೀಡಬೇಕು. ಹೆಚ್.ಆಂಜನೇಯ ಮಾಜಿ ಸಚಿವ
ಹೊಳಲ್ಕೆರೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ಮಿಸಿದ ವಿಕಾಸ ಸೌಧ ಕಟ್ಟಡವನ್ನು ಉದ್ಘಾಟಿಸಿ ಸಭಾ ಕರ‍್ಯಕ್ರಮದಲ್ಲಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ.

ಹೊಳಲ್ಕೆರೆಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿಕಾಸ ಸೌಧ ಉದ್ಘಾಟಿಸಲು ಆಗಮಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ವಿವಿಧ ಜಾನಪದ ಕಲಾ ತಂಡಗಳ ಜತೆ ಮೆರವಣಿಗೆ ನಡೆಸಲಾಗಿತ್ತು.


ಹೊಳಲ್ಕೆರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸರ್ವಜನಿಕರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend