ಭರದಿಂದ ಸಿದ್ದತೆ ನಡೆಯುತ್ತಿದೆ ದುಮ್ಮಿ ಜುಂಜಪ್ಪ ಜಾತ್ರೆ
ಹೊಳಲ್ಕೆರೆ. ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿ ಶ್ರೀ ಜುಂಜಪ್ಪ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ ಡಿಸೆಂಬರ್ 16 ರಿಂದ 18 ರ ವರೆಗೆ ಮೂರು ದಿನಗಳಕಾಲ ಅದ್ದೂರಿ ಜಾತ್ರೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ, ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಜಾತ್ರೆಗೆ ಆಗಮಿಸಲಿದ್ದಾರೆ. ದುಮ್ಮಿಗೊಲ್ಲರಹಟ್ಟಿಯಲ್ಲಿ ಪವಾಡ ಪುರುಷ
ಜುಂಜಪ್ಪಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಹೊಂದಿದ್ದು, ಸುಣ್ಣ ಬಣ್ಣ ವಿದ್ಯತ್ ದ್ವೀಪಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗುತ್ತದೆ. ವಿಶೇಷವಾಗಿ ಈ ಭಾರಿ ಜುಂಜಪ್ಪ ಸ್ವಾಮಿಯ ದರ್ಶನವನ್ನು ಪಡೆಯಲು ಸರಧಿ ಸಾಲುಗಳಲ್ಲಿ ಸ್ವಾಮಿಯ ದರ್ಶನವನ್ನು ಮಾಡಬಹುದು, ದೇವಸ್ಥಾನದ ಸುತ್ತಮತ್ತಲೂ ಸ್ವಚ್ಚತೆ ರಸ್ತೆ, ಕುಡಿಯುವ ನೀರು ಇನ್ನೀತರೆ ಮೂಲಭೂತ ಸೌಕರ್ಯಗಳನ್ನು ಪ್ರತು ವರ್ಷದಂತೆ ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಈ ಜಾತ್ರೆಯ ವಿಶೇಷವೆನೆಂದರೆ ಚಿಕ್ಕ ಮಕ್ಕಳಿಗೆ ದಡಾರ, ಸಿಡುಬು, ಮತ್ತೀರ ರೋಗ ರುಜಿನಗಳ ಖಾಯಿಲೆಗಳು ಕಂಡುಬಂದಲ್ಲಿ ಸ್ವಾಮಿಯ ದರ್ಶನ ಪಡೆದರೆ ಎಲ್ಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಸ್ವಾಮಿಗೆ ಪೂಜೆ ಮಾಡಿಸಿ ದುಗ್ಗಲ ಹೊತ್ತು ಭಕ್ತರು ರಾಜ್ಯದ ನಾನಾ ಭಾಗಗಳಿಂದ ಬಂದು ಹರಕೆ ತೀರಿಸುತ್ತಾರೆ. ಗ್ರಾಮದ
ಸುತ್ತಮುತ್ತಲಿನ ಹತ್ತಾರು ಕಿ.ಮೀ ವ್ಯಾಪ್ತಿಯಲಿರುವ ಹನುಮಲಿ, ಮಲ್ಲಾಡಿಹಳ್ಳಿ, ಶಿವಪುರ, ರಾಮಗಿರಿ, ತಾಳೀಕಟ್ಟೆ, ರಂಗಾಪುರು, ಬಸಾಪುರ, ದುಮ್ಮಿ ದೊಗ್ಗನಾಳ್, ಕಾಲ್ಕೆರೆ, ಕಾಲ್ಕೆರೆ ಲಂಬಾಣಿಹಟ್ಟಿ, ಅಂಜಿನಾಪುರ, ಚೆನ್ನಪ್ಪನಹಟ್ಟಿ, ಹೆಚ್.ಡಿ.ಪುರ, ಅಮೃತಾಪುರ, ಚೆನ್ನಗಿರಿ ತಾಲ್ಲೂಕಿನ ವಿವಿಧ ಭಾಗಗಳಿಂದ ಮಾದಪುರ, ಹೆಬ್ಬಳಿಗೆರೆ, ಗೊಪೇನಗಳ್ಳಿ, ಕುಂಚಿಗನಾಳ್, ಪಾಂಡೋಮಟ್ಟಿ, ಚಿತ್ರದುರ್ಗ, ಹೊಸದರ್ಗ, ಹೊಳಲ್ಕೆರೆ, ಚಿಕ್ಕಜಾಜೂರು, ಚನ್ನಗಿರಿ, ದಾವಣಗೆರೆ ಹಾಗೂ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಂದಿಗೂ ಎತ್ತಿನಬಂಡಿ ಟ್ಯಾಕ್ಟರ್, ಕಾರುಗಳು, ಹಾಗೂ ಕಾಲು ನಡಿಗೆಯಲ್ಲಿ ಬರುವುದು ಜಾತ್ರೆಯ ವಿಶೇಷವಾಗಿರುತ್ತದೆ. ಜಾತ್ರೆಯಲ್ಲಿ ದುಗ್ಗಳಸೇವೆ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ ದುಗ್ಗಳದ ಅಂಚಿನಲ್ಲಿ ಕೆಂಡವನ್ನು ಕೊಬ್ಬರಿ ಹಾಗೂ ಊದುಭತ್ತಿ, ಲೋಭಾನ ಹಾಕುತ್ತಾರೆ ಸುವಾಸನೆ ಭರಿತ ಹೊಗೆ ಸೂಸುವ ಈ ಉರಿಯ ಹೆಂಚನ್ನು ತಲೆಯಮೇಲೆ ಭಕ್ತರು ಹೊತ್ತು ದೇವಾಲಯದ ಸುತ್ತ ಮೂರು ಬಾರಿ ಪ್ರದಕ್ಷಣೆ ಹಾಕುತ್ತಾರೆ, ಹೀಗೆ ದುಗ್ಗಳ ಹೋರುವುದರಿಂದ ತಮ್ಮೆಲ್ಲಾ ಕಷ್ಟಗಳು ಪರಿಹಾರ ವಾಗುತ್ತವೆ, ಮನೆಮಕ್ಕಳ ವಿದ್ಯಾಭ್ಯಾಸವು, ಮದುವೆ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂಭ ನಂಬಿಕೆ ಭಕ್ತರಲ್ಲಿ ಇಂದಿಗೂ ಇದೆ, ಸುಗ್ಗಿಕಾಲದಲ್ಲಿ ರಾಗಿ ಜೋಳ, ಮತ್ತೀತರ ಬೆಳೆಗಳನ್ನು ಕಟಾವು ಮಾಡುವಾಗ ಹಾವು, ಚೇಳು, ಉಳಹುಪ್ಪಟೆಗಳು ಕಣ್ಣಿಗೆ ಬೀಳುವುದಿಲ್ಲ,ಕಚ್ಚುವುದಿಲ್ಲ ತಲತಲಾಂತರದಿಂದಲೂ ಈ ಸಂರ್ಪದಾಯವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಕಷ್ಟ ನಿವಾರಕನೆಂದೆ ನಂಬಿರುವ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಜುಂಜಪ್ಪ ಸ್ವಾಮಿ ಗೊಲ್ಲ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ ರಾಜ್ಯದ ನಾನ ಭಾಗಗಳಿದ ವಿವಿಧ ಜನಾಂಗದ ಭಕ್ತರು ಇಲ್ಲಿಗೆ ಬರುತ್ತಾರೆ, ಜಿಲ್ಲಿಯಲ್ಲಿನ ಇದು ೨ನೇ ಅತೀದೊಡ್ಡ ಜಾತ್ರೆಯಾಗಿದ್ದರೂ , ಇಲ್ಲಿ ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆಗಳು ಇಲ್ಲ, ಮತ್ತು ಮೂಲಭೂತ ಸೌಕರ್ಯಗಳಿಲ್ಲ ಗ್ರಾಮಸ್ಥರೇ ನೇತೃತ್ವ ವಹಿಸಿ ಜಾತ್ರೆಯನ್ನು ನಡೆಸುತ್ತಿದ್ದಾರೆ. ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಭಕ್ತರಿಗೆ ವಸತಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಭಕ್ತರು ನೆರವು ನೀಡಬೇಕೆಂದು ತಾಲ್ಲೂಕು ಕಾಡುಗೊಲ್ಲ ಸಮುಧಾಯದ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎ ಚಿತ್ತಪ್ಪ ಯಾದವ್ ತಿಳಿಸಿದ್ದಾರೆ.
ಜುಂಜಪ್ಪ ಸ್ವಾಮಿ ದೇವರಿಗೆ ಹರಕೆ ಹೊತ್ತರೆ ಹಾವು, ಚೇಳು ಕಡಿಯುವುದಿಲ್ಲ ಎಂಬ ನಂಭಿಕೆ ಇದೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುವಾಗ ಹಾವು, ಚೇಳುಗಳು ಕಡಿಯುವುದು ಭಯ ಹುಟ್ಟಿಸುವುದು ಸಾಮಾನ್ಯ ಹೀಗಾಗಿ ಜುಂಜಪ್ಪಸ್ವಾಮಿಗೆ ಹರಕೆ ತೀರಿಸಿದರೆ ಸರಿಸೃಪಗಳ ತೊಂದರೆಯಿoದ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ.
ಗ್ರಾಮದ ಮುಖಂಡರಾದ ಶ್ರೀ ತಿರುವಲ ಜುಂಜಪ್ಪ ಸ್ವಾಮಿ ಟ್ರಸ್ಟಿನ ಅಧ್ಯಕ್ಷರಾದ ಜಿ.ಕುಬೇಂದ್ರಪ್ಪ, ಉಪಾಧ್ಯಕ್ಷರಾದ ಚಿತ್ತಪ್ಪ, ಕಾರ್ಯದರ್ಶಿ ಎನ್.ರವಿ ಕಜಾಂಚಿ ಅಂಗಡಿ ಸಿದ್ದಪ್ಪ, ಗೌರವಾಧ್ಯಕ್ಷರಾದ ಎಸ್.ನಾಗರಾಜಪ್ಪ, ಓಂಕಾರಪ್ಪ ಗೋವಿಂದಪ್ಪ, ಸಿದ್ದಪ್ಪ ಮತ್ತಿತರ ಪದಾಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಜಾತ್ರಾ ಮಹೋತ್ಸವಕ್ಕೆ ಸಹಕರಿಸಬೇಕೆಂದು ತಿಳಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030