ಅನ್ಯ ಭಾಷಿಗರಿಗೆ ಕನ್ನಡವನ್ನು ಕಳಿಸಿ. ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು…!!!

Listen to this article

ಅನ್ಯ ಭಾಷಿಗರಿಗೆ ಕನ್ನಡವನ್ನು ಕಳಿಸಿ. ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು…
ಮಾನವ ಜಾತಿ ತಾನೊಂದೇ ವಲಂ ಎಂಬ ಪಂಪ ಕವಿಯ ವಾಣಿಯಂತೆ ರಾಜ್ಯದಲ್ಲಿ ನೂರಾರು ಉಪಜಾತಿಗಳು ಇದ್ದರು ಎಲ್ಲ ಸಮುದಾಯಗಳು ಒಂದೇ ನೆಲದಲ್ಲಿ ವಾಸಿಸುವ ಮೂಲಕ ಹೊಂದಾಣಿಕೆ ಭಾವೈಕ್ಯತೆ, ಸಮಗ್ರತೆಯಿಂದ ಬೇರೆ ಕಡೆಯಿಂದ ಬಂದಂತಹ ಅನ್ಯ ಭಾಷಿಕರಿಗೆ ಕನ್ನಡ ಭಾಷೆಯನ್ನು ಕಳಿಸುವ ಶ್ರೀಮಂತ ಗೊಳಿಸಬೇಕು ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕರಿಯಪ್ಪ ಮಾಳಿಗೆ ಮಾತನಾಡಿದರು
ಹೊಳಲ್ಕೆರೆ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮತ್ತು ಕನ್ನಡ ವಿಭಾಗ, ಹಾಗೂ ಐಕ್ಯೂ ಎಸಿ ಸಹಯೋಗದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಜಾನಪದ ಸಾಹಿತ್ಯದ ಸಮೃದ್ಧತೆ,ಗ್ರಾಮೀಣರ ಭಾಷಾ ಶ್ರೀಮಂತಿಕೆ ಕುರಿತು ಮಾತನಾಡುತ್ತಾ ನಿಜವಾದ ಕನ್ನಡ ಹಳ್ಳಿಗಳಲ್ಲಿದೆ ಹಾಗೂ ಹಳ್ಳಿಗಳನ್ನ ಪ್ರೀತಿಸಿ ತಾಯಿಯ ಭಾಷೆ ಎದೆಯ ಭಾಷೆಯಾದ ಕನ್ನಡ ಉಳಿಯಬೇಕಾದರೆ ಗ್ರಾಮೀಣ ಭಾಗದಲ್ಲಿರುವ ಅಪ್ಪ-ಅಮ್ಮಂದಿರಗಳನ್ನ ಅವರ ಸಂಸ್ಕಾರವನ್ನ ಪ್ರೀತಿಸಿ ಅಲ್ಲಿ ನಿಜವಾದ ಕನ್ನಡ ಬೆಳೆಯುತ್ತದೆ ಕರ್ನಾಟಕದಲ್ಲಿ ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕೃತಿ ಸಂಸ್ಕಾರದಿಂದ ವಿಶ್ವಕ್ಕೆ ಕರ್ನಾಟಕ ಮಾದರಿ ರಾಜ್ಯವಾಗಿದೆ ಎಂದು ಯುವ ಜನತೆಗೆ ಕರೆ ನೀಡಿದರು,
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ, ಶಿವಮೂರ್ತಿ ನಾಯ್ಕ್ ರವರು ಮಕ್ಕಳು ಹೆಚ್ಚು ವಿದ್ಯಾವಂತರಾದರೆ ಗ್ರಾಮದ,ನಾಡಿನ,ರಾಷ್ಟ್ರದ ಬದಲಾವಣೆ ಮಾಡಲು ಸಾಧ್ಯ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಹಿಂದೆ ಬೀಳಬಾರದು ಕನ್ನಡ ನಾಡು ಕಟ್ಟಲು ಅನೇಕ ಮಹನೀಯರ ತ್ಯಾಗ ಬಲಿದಾನ ಮಾಡಿದ್ದಾರೆ ಹಾಗೆಯೇ ಸಂತರು ಕವಿಗಳು ಶರಣರು ಅವರದೇ ಆದ ಕೊಡುಗೆ ನೀಡಿದ್ದಾರೆ ಕನ್ನಡ ನೆಲದಲ್ಲಿ ಏನೆಲ್ಲಾ ವಿಫಲ ಸಂಪತ್ತುಇದೆ ವಿದ್ಯಾವಂತರಾದ ನಾವುಗಳು ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು,
ಕನ್ನಡ ವಿಭಾಗದ ಮುಖ್ಯಸ್ಥರಾದ ಟಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಮನೆಯ ಹಬ್ಬವಾಗಬೇಕು ಸದಾಕಾಲ ಕನ್ನಡದ ವಾತಾವರಣ ದೊರೆಯುವಂತೆ ನಮ್ಮ ಬದುಕಿನ ಜೀವನದ ಬಾವದ ಭಾಗ ಕನ್ನಡವನ್ನು ಸಾರುವ ಹಬ್ಬ ನಮ್ಮೆಲ್ಲರ ಸಂಭ್ರಮ ಆಗಬೇಕು.
ಕನ್ನಡ ಸಪ್ತಾಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಸುಮಾರು 60 ವಿದ್ಯಾರ್ಥಿಗಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್,ಶಿವಮೂರ್ತಿ ಪದಕ, ಪ್ರಶಸ್ತಿ ಪತ್ರ,ಪುಸ್ತಕಗಳನ್ನು ನೀಡಿ ಗೌರವಿಸಿದರು ಮುಂದಿನ ದಿನಗಳಲ್ಲಿ ನಾಡು ನುಡಿ ಭಾಷೆ ಪರಂಪರೆ ಕನ್ನಡ ಕೈoಕರ್ಯಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಯುವಕ ಯುವತಿಯರು ಉತ್ತುಗಕ್ಕೆ ಕೊಂಡೊಯ್ಯಬೇಕು ಸಾಹಿತ್ಯ ಉಳಿಯುವುದೇ ಇಂದಿನಯುವ ಪೀಳಿಗೆಯಿಂದ ಎಂದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಅಧ್ಯಾಪಕರುಗಳಾದ ಡಾ,ಎಲ್ ರಮೇಶ್, ಡಾ.ಮದನಾಯ್ಕ ಇವರಿಗೆ ಬೀಳ್ಕೊಡಲಾಯಿತು.
ಕನ್ನಡ ವಿಭಾಗದ ಡಾ. ಸಂತೋಷ್ ಸ್ವಾಗತಿಸಿದರು, ಡಾ. ಶಿವಣ್ಣ ವಂದಿಸಿದರು, ಡಾ. ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಪ್ರಣತಿ ಪ್ರಾರ್ಥಿಸಿದರು
ಕಾರ್ಯಕ್ರಮದಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಜಿ.ಎ ದೇವರಾಜಯ್ಯ.ಪಾವಗಡ ಶಿವಣ್ಣ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend