ಹೊಳಲ್ಕೆರೆ. ಪಟ್ಟಣದ ಪುರಸಭೆ ಕಚೇರಿಯಲ್ಲಿ ನೂತನ ಪುರಸಭೆಯ ಅಧ್ಯಕ್ಷರಾದ ವಿಜಯಸಿಂಹ ಖಾಟ್ರೋತ್ ಹಾಗೂ ಉಪಾಧ್ಯಕ್ಷರಾದ ಹೆಚ್. ಆರ್. ನಾಗರತ್ನ ವೇದಮೂರ್ತಿ ಹಿರಿಯ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಸೋಮವಾರ ಅಧಿಕಾರ ಸ್ವೀಕರಿಸಿ ಹೊಳಲ್ಕೆರೆ ಹೊಸದುರ್ಗ ಮಾರ್ಗದಲ್ಲಿರುವ ಬೀದಿ ದ್ವೀಪಕ್ಕೆ ಚಾಲನೆ ನೀಡುವ ಮೂಲಕ ಸೇವೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷರಾದ ವಿಜಯಸಿಂಹ ಖಾಟ್ರೋತ್ ಪಟ್ಟಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇವೆ 72 ಗಂಟೆಯ ಒಳಗೆ ಹೊಳಲ್ಕೆರೆ ಪಟ್ಟಣದಲ್ಲಿ ಇರುವ ಎಲ್ಲ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಮೊದಲು ಚಾಲನೆ ನೀಡುತ್ತಿದ್ದೇವೆ, ಈ ಮೂಲಕ ಪಟ್ಟಣದ ಜನರಿಗೆ ಶುದ್ದ ನೀರನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸ್ವಚ್ಚತೆಯನ್ನು ಕಾಪಾಡುತ್ತೇವೆ. ಯಾವ ವಾರ್ಡ್ ಗಳಲ್ಲಿ ಏನೇನು ಸಮಸ್ಯೆ ಇದೆ ಆ ಸ್ಥಳಗಳಿಗೆ ಖುದ್ದು ಸದಸ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಒತ್ತು ನೀಡಲಾಗುವುದು. ನಮ್ಮ ಅಧಿಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಯೇ ನಮ್ಮ ಮೂಲ ದ್ಯೇಯ ಎಂದು ಭಾವಿಸಿದ್ದೇವೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ
ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷ ಹೆಚ್.ಆರ್. ನಾಗರತ್ನ ವೇದಮೂರ್ತಿ, ಸದಸ್ಯರಾದ ಕೆ.ಸಿ
ರಮೇಶ್, ಬಿ.ಎಸ್.ರುದ್ರಪ್ಪ, ಸಯೀದ್ ಸಜೀಲ್, ಮನ್ಸೂರ್, ಮಲ್ಲಿಕಾರ್ಜುನ ಪಿ.ಅರ್, ವಸಂತರಾಜ್, ಸವೀತನರಸಿಂಹ ಖಾಟ್ರೋತ್, ಮಮತ ಜಯಸಿಂಹ, ಪೂರ್ಣಿಮಾ ಬಸವರಾಜ್, ಖಾಟ್ರೋತ್, ಪಿ. ಹೆಚ್. ಮುರುಗೇಶ್, ನಾಮನಿರ್ದೇಶಕ ಸದಸ್ಯರಾದ ಮಜರೂಲ್ಲ ಖಾನ್, ಬಸವರಾಜ್, ಮಂಜುನಾಥ, ಮುಖ್ಯಾಧಿಕಾರಿ ದೇಸಾಯಿ, ಮತ್ತಿತರರು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030