ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚಂದ್ರಿಬಾಯಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು…!!!

Listen to this article

ಈ ದಿನ ಚಿಕ್ಕಜಾಜೂರು ಯೋಜನಾ ಕಚೇರಿ ವ್ಯಾಪ್ತಿಯ ರಾಮಗಿರಿ ವಲಯದ ಸಿಂಗೇನಹಳ್ಳಿ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯಸದಸ್ಯರದ ಓಂಕಾರಮ್ಮ ಅವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿದ್ದು ಇಂದು ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು…

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚಂದ್ರಿಬಾಯಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀಯುತ ದಿನೇಶ್ ಪೂಜಾರಿ ಅವರು ವಾತ್ಸಲ್ಯ ಕಾರ್ಯಕ್ರಮವು ಮಾತೃಶ್ರೀ ಅಮ್ಮನವರು ಕನಸಿನ ಕಾರ್ಯಕ್ರಮವಾಗಿದ್ದು ಸಮಾಜದಲ್ಲಿರುವ ಅತೀ ದುರ್ಬಲ ನಿರ್ಗತಿಕರನ್ನು ಗುರುತಿಸಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ವಾಸಕ್ಕೆ ಯೋಗ್ಯವಾದ ವಾತ್ಸಲ್ಯ ಮನೆಯನ್ನು ನಿರ್ಮಿಸಿ ಕೊಡುವುದಾಗಿದೆ ಈ ವರ್ಷದಲ್ಲಿ 100 ಮನೆ ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು.. ಓಂಕಾರಮ್ಮನವರ ಮನೆ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು ಇವರ ಸಮಸ್ಯೆಗೆ ಸ್ಪಂದಿಸಿ ಯೋಜನೆ ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹೊಸ ಮನೆಯನ್ನು ಓಂಕಾರಮ್ಮ ನವರಿಗೆ ನಿರ್ಮಿಸಿ ಕೊಡಲಾಗಿದೆ ಇದು 15×10 ಅಡಿ ವಿಸ್ತೀರ್ಣದ ಮನೆಯಾಗಿದ್ದು ಒಟ್ಟು ವೆಚ್ಚ ರೂ 1,15,000 ಗಳಾಗಿರುತ್ತವೆ ಇದರ ಜೊತೆಗೆ ಓಂಕಾರಮ್ಮ ನವರಿಗೆ ಯೋಜನೆಯ ವತಿಯಿಂದ ಪ್ರತಿ ತಿಂಗಳು 1,000 ಮಾಶಾಸನವನ್ನು ಒದಗಿಸಲಾಗುತ್ತಿದೆ ಇಡೀ ರಾಜ್ಯದಂತ 16,000 ಅಸಹಾಯಕರಿಗೆ ಮಾಶಾಸನ್ನು ಒದಗಿಸುತ್ತಿದ್ದು ಹಾಗೂ ಪ್ರತಿ ತಿಂಗಳು ಪೌಷ್ಟಿಕ ಆಹಾರ (ವಾತ್ಸಲ್ಯ ಮಿಕ್ಸ್) ಒದಗಿಸಲಾಗುತ್ತಿದೆ..ಜ್ಞಾನವಿಕಾಸ ಕಾರ್ಯಕ್ರಮಗಳ, ಹಾಗೂ ಯೋಜನೆಯ ಹಲವಾರು ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ಎಂದು ಮಾಹಿತಿ ತಿಳಿಸಿದರು…

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು ವಸಂತ್ ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ ಮಲ್ಲಿಕಾರ್ಜುನ್ ಒಕ್ಕೂಟದ ಅಧ್ಯಕ್ಷರಾದ ಪವಿತ್ರ ಒಕ್ಕೂಟದ ಉಪಾಧ್ಯಕ್ಷರಾದ ಶಶಿಕಲಾ ಮೋಹನ್ ಮೇಸ್ತ್ರಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಂಜಿತಾ ಮೇಲ್ವಿಚಾರಕರಾದ ಚೈತ್ರ ಸೇವಾ ಪ್ರತಿನಿಧಿ ರೇಖಾಮ್ಮ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಊರಿನ ಮುಖಂಡರು/ ಗ್ರಾಮಸ್ಥರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend