ಹೊಳಲ್ಕೆರೆ : ಪೊಲೀಸ್ ಇಲಾಖೆ ಬಗ್ಗೆ ಸಮಾಜದಲ್ಲಿ ಇರುವ ಭಯದ ವಾತಾವರಣ ಹೋಗಲಾಡಿಸುವ ನಿಟ್ಟಿನಲ್ಲಿ ಇಲಾಖೆಯು ಹೊಸದಾಗಿ ‘ ತೆರೆದ ಮನೆ ‘ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ಪಿಎಸ್ಐ ಕಾಂತರಾಜ್ ತಿಳಿಸಿದರು .ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ಗುರವಾರ ಭೇಟಿ ನೀಡಿದ ಚಿತ್ರಹಳ್ಳಿ ಗೇಟ್ ಶರಣಬಸವೇಶ್ವರರ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ತೆರದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪೊಲೀಸರ ಬಗ್ಗೆ ಅನಗತ್ಯ ಭಯ ಬೇಡ. ನಾವು ಕಾನೂನು ಪಾಲಕರಾಗಿದ್ದು, ಕಾನೂನು ಪಾಲಿಸುವವರ ಪರವಾಗಿ ನಿಲ್ಲುತ್ತೇವೆ.ಸಮಾಜದ ಪ್ರತಿಯೊಂದು ಹಂತದಲ್ಲೂ ಪೊಲೀಸ್ ಇಲಾಖೆಯ ಸಹಭಾಗಿತ್ವ ಇರುತ್ತದೆ. ಎಲ್ಲಾ ಆಗುಹೋಗುಗಳು ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅದ್ದರಿಂದ ಇಲಾಖೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು. ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಭೇಟಿ ಮಾಡಿಸಿ ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ.ಕಾನೂನು ಮತ್ತು ಸುವ್ಯವಸ್ಥೆ ವಿಭಾಗ.ಅಪರಾಧ ವಿಭಾಗ.ತನಿಖಾಧಿಕಾರಿ ವಿಭಾಗ.ಕಂಪ್ಯೂಟರ್ ವಿಭಾಗ .ಠಾಣಾ ಬರಹಗಾರರ ವಿಭಾಗ.ಠಾಣಾ ದಿನಚರಿ . ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಾಯಿತು. ಸಮಸ್ಯೆ ಇದ್ದಲ್ಲಿ 112 ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಭರತ್ ಇತರೆ ಶಿಕ್ಷಕರು ಹಾಗೂ ಠಾಣೆಯ ಸಿಬ್ಬಂದಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030