ಪಾರಂಪರಿಕ ಆಡುಗೆಯ ಅವಿಭಾಜ್ಯ ಅಂಗ ಎನಿಸಿರುವ ತೆಂಗಿನ ‘ಕಾಯಿಗೆ ಒಮ್ಮೆಲೇ ಎಲ್ಲಿಲ್ಲದ ಬೇಡಿಕೆ ಬಂದಿದೆ!!!

Listen to this article

ಪಾರಂಪರಿಕ ಆಡುಗೆಯ ಅವಿಭಾಜ್ಯ ಅಂಗ ಎನಿಸಿರುವ ತೆಂಗಿನ ‘ಕಾಯಿಗೆ ಒಮ್ಮೆಲೇ ಎಲ್ಲಿಲ್ಲದ ಬೇಡಿಕೆ ಬಂದಿದೆ! ಎಷ್ಟರ ಮಟ್ಟಿಗೆ ಎಂದರೆ, ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ತೆಂಗಿನ ಕಾಯಿ ಈಗ ಸುಲಭವಾಗಿ ಖರೀದಿಗೆ ಸಿಗುವುದಿಲ್ಲ. ಸಿಕ್ಕಿದರೂ, ಮಧ್ಯಮ ಗಾತ್ರದ ಒಂದು ತೆಂಗಿನ ಕಾಯಿಗೆ ಸುಮಾರು ರು.40 ರಿಂದ 50ರ ತನಕ ಬೆಲೆ ಇದೆ. ‘ಪ್ರತಿ ದಿನ ತೆಂಗಿನ ಕಾಯಿಯನ್ನು ಅಡುಗೆಗೆ ಬಳಸುವವರು, ಒಮ್ಮೆಗೇ ಮೇಲೇರಿದ ಈ ಬೆಲೆಯಿಂದಾಗಿ, ತಮ್ಮ ಅಡುಗೆಯ ಪದ್ಧತಿಯನ್ನು ತಾತ್ಕಾಲಿಕವಾಗಿ ಬದಲಿಸುವ ಆನಿವಾರ್ಯತೆಗೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ

ವಿಚಾರಿಸಿದಾಗ, ತೆಂಗಿನ ಕಾಯಿಯ ಬೆಲೆ ಏರಿಕೆಗೆ ನಿರ್ದಿಷ್ಟ ಕಾರಣ ದೊರಕುತ್ತಿಲ್ಲ. ಬದಲಿಗೆ, ಹಲವು ಸಂಯುಕ್ತ ಕಾರಣಗಳು ಮುನ್ನೆಲೆಗೆ ಬರುತ್ತವೆ. ಕಳೆದ ಒಂದು ದಶಕದಿಂದ ನಮ್ಮ ರಾಜ್ಯದಾದ್ಯಂತ ತೆಂಗಿನ ಮರಗಳನ್ನು ಕಾಡಿದ ನುಸಿ ರೋಗವು ಒಂದು ಪ್ರಮುಖ ಕಾರಣವಾಗಿ ಬಿಂಬಿತವಾಗಿದೆ. ನಿರಂತರವಾದ ನುಸಿ ರೋಗ ಮತ್ತು ನೀರಿನ ಅಲಭ್ಯತೆಯಿಂದಾಗಿ, ಹಲವು ಪ್ರದೇಶಗಳಲ್ಲಿ ತೆಂಗಿನ ಮರಗಳು ದುರ್ಬಲವಾದವು ಜತೆಗೆ, ನುಸಿ ರೋಗದಿಂದಾಗಿ ಇಳುವರಿ ಕಡಿಮೆಯಾದ ಸಾವಿರಾರು ತೆಂಗಿನ ಮರಗಳನ್ನು ಕೃಷಿಕರು ಕಡಿದುಹಾಕಬೇಕಾಯಿತು. ಎಳನೀರಿಗೆ ಅಧಿಕ ಬೇಡಿಕೆ ಇರುವುದರಿಂದಾಗಿ, ‘ಅಷ್ಟರ ಮಟ್ಟಿಗೆ ತೆಂಗಿನಕಾಯಿಗಳ ಅವಕ ಕಡಿಮೆಯಾಗುತ್ತಿದೆ.

ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಹಲವು ಪ್ರದೇಶಗಳಿಗೆ ಮತ್ತು ಬೇರೆ ದೇಶಗಳಿಗೆ ನಮ್ಮ ರಾಜ್ಯದ ಮತ್ತು ಕೇರಳದ ತೆಂಗಿನ ಕಾಯಿಗಳು ರವಾನೆಯಾಗುತ್ತಿರುವದರಿಂದಾಗಿ, ಸ್ಥಳೀಯವಾಗಿ ತೆಂಗಿನ ಕಾಯಿಯ ಲಭ್ಯತೆ ಕಡಿಮೆಯಾಗಿದೆ. ಇನ್ನು ಕೆಲವು ತಿಂಗಳುಗಳ ಕಾಲ ತೆಂಗಿನ ಕಾಯಿಯ ಬೆಲೆಯು ದುಬಾರಿಯಾಗಿಯೇ ಮುಂದುವರಿಯಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ ಆದ್ದರಿಂದ, ಅಷ್ಟರ ತನಕ ನಮ್ಮ ರಾಜ್ಯದ ಗೃಹಿಣಿಯರು ತೆಂಗಿನ ಬಳಕೆಗೆ ಮಿತಿ ಹೇರಬೇಕಾದೀತು!…

ವಿಶೇಷ ವರದಿ ಡಿ ಎಂ ಪ್ರಭಾಕರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend