ಹೊನ್ನಾಳಿ ಅವಳಿ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಹಾಲ ಸ್ವಾಮೀಜಿ ಮುಳ್ಳು ಗದ್ದಿಗೆ ಮಹೋತ್ಸವ ನಡೆಸಲಾಯಿತು…
ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಗುರುವಾರ ರಾತ್ರಿ ಸಾವಿರಾರು ಭಕ್ತ ಗಣದ ಜಯ ಘೋಷಗಳ ಮಧ್ಯೆ ಹಾಲಸ್ವಾಮೀಜಿ ಮುಳ್ಳುಗದ್ದುಗೆ ಮಹೋತ್ಸವ ವೈಭವದಿಂದ ಜರುಗಿತು.
ಪುರಾಣ ಪ್ರಸಿದ್ಧವಾದ ಹಾಲಸ್ವಾಮೀಜಿ ಮುಳ್ಳುಗದ್ದುಗೆ ಉತ್ಸವ ಕಳೆದ ಹಲವಾರು ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ, ಮಠದ ಪರಂಪರೆಯಂತೆ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯವರು ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಗ್ನಿಕುಂಡ ಪ್ರವೇಶಿಸಿ, ಮುಳ್ಳುಗದ್ದುಗೆಯನ್ನು ಏರಿದರು. ಈ ವೇಳೆಯಲ್ಲಿ ನಾಡಿನ ನಾನಾ ಭಾಗಗಳಿಂದ ನೆರೆದಿದ್ದ ಜನಸಾಗರದ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಬಂದಿದ್ದ ಭಕ್ತ ಸಮೂಹ ಉತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿಯವರಿಗೆ ಹೂವಿನ ಹಾರ ಅರ್ಪಿಸಿ, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ಮುಳ್ಳುಗದ್ದಿಗೆ ಉತ್ಸವು ತೇಜಿ(ಮಠದ ಕುದುರೆ ಗ್ರಾಮದ ಮನೆಗಳಿಗೆ ಪ್ರತಿಯೊಂದು ಪೂಜೆ ಹೋಗಿ ಪಡೆದುಕೊಂಡು ಬಂದ ನಂತರ ಈ ಉತ್ಸವ ಪ್ರಾರಂಭವಾಗುತ್ತದೆ. ಮಠದ ಆವರಣದಲ್ಲಿ ಮುಳ್ಳಿನ ಗದ್ದುಗೆಗೆ ಪೂಜೆನೆರವೇರಿಸಿದ ನಂತರ ಅಗ್ನಿಕುಂಡದ ಕೆಂಡವನ್ನು ತುಳಿದು ಬಾಳೆ ಎಲೆಯಿಂದ ಮಾಡಿದ ಕೌಪೀನ ಧರಿಸಿದ ಹಾಲಸ್ವಾಮೀಜಿ ಮುಳ್ಳುಗದ್ದುಗೆಯನ್ನು ಏರಿ ಜಾಲಿಮುಳ್ಳಿನ ಗದ್ದುಗೆಯ ಮೇಲೆ ಹಾರಿ ಹಾರಿ ಕುಣಿಯುವ ದೃಶ್ಯನೋಡುಗರ ಮೈನವಿರೇಳಿಸಿತು, ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮುಳ್ಳುಗದ್ದುಗೆ ಉತ್ಸವದಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀಮಠದ ಮೂಲ ಶ್ರೀಹಾಲಸ್ವಾಮೀಜಿಯ ಪಾದುಕೆ, ಗ್ರಾಮ ದೇವತೆಗಳಾದ ಲಕ್ಷ್ಮೀನರಸಿಂಹಸ್ವಾಮಿ, ಶ್ರೀಆಂಜನೇಯ ಸ್ವಾಮಿ, ಶ್ರೀಶಕ್ತಿ ಕಾಳಿಕಾಂಬದೇವಿ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ತಮಟೆವಾದ್ಯ ಸೇರಿದಂತೆ ಹಲವು ಹತ್ತು ಮೇಳಗಳೊಂದಿಗೆ ಸಾಗಿತು. ಗುರುವಾರ ರಾತ್ರಿ 10. 30 ಗಂಟೆಗೆ ಪ್ರಾರಂಭವಾದ ಉತ್ಸವ ಶುಕ್ರವಾರ ಬೆಳಗಿನ(12.45)ರ ಜಾವ ಶ್ರೀಮಠ ತಲುಪಿತು.
ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಮಠದ ಇತಿಹಾಸ, ಪರಂಪರೆಯನ್ನು ಭಜನೆಯ ಮೂಲಕ ಹಾಡುತ್ತ ತಮ್ಮ ಭಕ್ತಿ ಸೇವೆಯನ್ನು ಸಮರ್ಪಿಸಿದರು. ಉತ್ಸವಕ್ಕೂ ಮುಂಚೆ ಗ್ರಾಮದ ಯುವಕರು, ಭಕ್ತರು ಪಟಾಕಿ, ಹೂ ಬಾಣಗಳನ್ನು ಸಿಡಿಸಿದರು.
(ಭವ್ಯ ಮೆರವಣಿಗೆ
ನಾಲ್ಕು ಅಡಿ ಅಗಲ, ನಾಲ್ಕು ಅಡಿ .ಎತ್ತರದ ಅಳತೆಯಲ್ಲಿ ಹಸಿಜಾಲಿ ಮುಳ್ಳುಗಳಿಂದ ನಿರ್ಮಾಣವಾದ ಮುಳ್ಳುಗದ್ದುಗೆಯ ಮಂಟಪದಲ್ಲಿ ವಿರಾಜಮಾನವಾಗುವ ಸ್ವಾಮೀಜಿಯ ಭವ್ಯ ಮೆರವಣಿಗೆಯಲ್ಲಿ ಭಕ್ತರ ಕಷ್ಟಗಳ ನಿವಾರಣೆಗೆ ತಾಮ್ರದ ತಗಡಿನ ಮೇಲೆ ಅಂತ್ರವನ್ನು ಬರೆಯುತ್ತಿದ್ದರು. ದಾವಣಗೆರೆ, ಶಿವಮೊಗ್ಗ, ಹಾವೇರಿ ಹಲವಾರು ಜಿಲ್ಲೆಗಳಿಂದ ಭಕ್ತ ಸಾಗರ ಸಾಕ್ಷಿಯಾದರು.)..
ವರದಿ ಪ್ರಭಾಕರ್ ಡಿ ಎಂ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030