ಕೃಪಾಶ್ರಯ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ದೊಡ್ಡ ಬಸಯ್ಯ ನವರ ಕುಟುಂಬದ ವತಿಯಿಂದ ತಮ್ಮ ಮಗಳ ಹುಟ್ಟು ಹಬ್ಬದ ಸವಿ ನೆನಪು…!!!

Listen to this article

ಹೂವಿನಹಡಗಲಿ. ಪಟ್ಟಣದಲ್ಲಿ ಕೃಪಾಶ್ರಯ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ದೊಡ್ಡ ಬಸಯ್ಯ ನವರ ಕುಟುಂಬದ ವತಿಯಿಂದ ತಮ್ಮ ಮಗಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಗುರುವಾರ ಸಂಜೆ ವೃದ್ಧಾಶ್ರಮದ ಮಹಿಳೆಯರಿಗೆ ಪರಿಕರಗಳನ್ನು ವಿತರಣೆ ಮಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿ.ಕೆರ್. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಹೆಚ್ ಎಂ ವಿರೇಶ ನಗರೀಕರಣ, ಪತಿ-ಪತ್ನಿ ಉದ್ಯೋಗ, ಸಂಕುಚಿತ ಮನೋಭಾವ, ವಿಭಕ್ತ ಕುಟುಂಬ ಹೀಗೆ ಅನೇಕ ಕಾರಣಗಳಿಂದ ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದ ತಂದೆ-ತಾಯಿಯರು ವೃದ್ದಾಶ್ರಮದ ಆಸರೆಗೆ ಬರುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ದುರಂತ. ನಮ್ಮ ಮಲ್ಲಿಗೆ ನಾಡಿನಲ್ಲಿ ಸೇವಾ ಮನೋಭಾವನೆಯ ಈ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿರುವುದು ಹಿರಿಯ ಜೀವಗಳಿಗೆ ತುಸು ನೆಮ್ಮದಿ ಎನಿಸಿವೆ ಎಂದರು.ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಹಡಗಲಿ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಇಂದಿನ ದಿನಗಳಲ್ಲಿ ಹೆತ್ತವರು ನಮ್ಮ ಏಕಾಂತಕ್ಕೆ ಅಡ್ಡಿ ತರುತ್ತಾರೆಂದು ಅವರನ್ನೇ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರವೃತಿ ಹೆಚ್ಚಾಗುತ್ತಿದ್ದು. ಇನ್ನು ಆವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ದೂರದ ಮಾತಾಗಿದೆ.

ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಹೆಚ್ಚೆಂದರೆ ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತ ಮಕ್ಕಳ ಏಳಿಗೆ ಬಯಸುತ್ತಾ ಜೀವನ ಸಾಗಿಸಬೇಕು ಎಂಬ ಆಸೆ ಇರುತ್ತದೆ . ಆದರೆ ಈಗ ಹಣ ನೀಡಿ ವೃದ್ಧಾಶ್ರಮಕ್ಕೆ ಬಿಡುವಷ್ಟು ಹೀನ ಮನಸ್ಸಿನ ಮನುಷ್ಯರಿದ್ದು, ಮನುಷ್ಯತ್ವಕ್ಕೆ ಬೆಲೆ ಎಲ್ಲಿದೆ ಹೇಳಿ
ಒಂಬತ್ತು ತಿಂಗಳು ಹೊತ್ತು ಹೊಸ ಜೀವಕ್ಕೆ ಜನ್ಮವಿತ್ತು ತಾನು ಮರುಜನ್ಮ ಪಡೆಯುವವಳು -ತಾಯಿ, ನೋವನ್ನೆಲ್ಲಾ ನುಂಗುತ್ತಾ ನಗುವನ್ನು ಮಾತ್ರ ಮಕ್ಕಳಿಗಾಗಿ ಮೀಸಲಿಡುವುದು-ತಂದೆ ತಾಯಿ ಅವರನ್ನು
ಮರೆತರೆ ಸಮಯ ಬಂದಾಗ ಎಲ್ಲವೂ ಅರಿವಾಗುವುದು, ಹೇಗೆ ನಾವು ಹಿರಿಯರೊಂದಿಗೆ ವರ್ಥಿಸುವೆವೋ ಹಾಗೆಯೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಕೂಡ ಕಳಿತುಕೊಳ್ಳುತ್ತಾರೆ ಎಂದರು. ಅಧ್ಯಕ್ಷತೆಯನ್ನು ಕೃಪಾಶ್ರಯ ಟ್ರಸ್ಟ್ ನ ಫಾಸ್ಟ್ ರ್ ಕೆ. ಹಾಲೇಶ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ್ರ ಕೊಟ್ರುಗೌಡ. ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ,ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದ ಗದಗ ತಾಲೂಕು ಅಭಿವೃದ್ಧಿ ಅಧಿಕಾರಿ ಉದಯಕುಮಾರ ಎಲಿವಾಳ. ಮಾತನಾಡಿದರು.ನಾಗತಿಬಸಾಪುರದ ಕಸ ವಿಲೇವಾರಿ ವಾಹನ ಚಾಲಕಿ ಕೆ. ಸುಧಾ,ಡಿ ಗ್ರೂಪ್ ನೌಕರ ಹೆಚ್ ಗಿರಿರಾಜ, ಪೌರ ಕಾರ್ಮಿಕ ಜಿ ಸೋಮಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕ ಹಡಗಲಿ ಬಸವರಾಜ. ಪತ್ರಕರ್ತ ಹಲಗಿ ಸುರೇಶ. ಬಿ. ಎಂ ದೊಡ್ಡ ಬಸಯ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ನಮ್ರತಾ, ರವಿತೇಜ ಪ್ರಾರ್ಥಿಸಿದರು…

ವರದಿ, ಸಂತೋಷ ಮ್ಯಾಗೇರಿ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend