ಒಳ ಮೀಸಲಾತಿ ಜಾರಿಗೊಳಿಸುವಂತೆ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ದ್ವನಿಯತ್ತುವಂತೆ ತಮಟೆ ಚಳುವಳಿ
ಹೂವಿನ ಹಡಗಲಿ
ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕನಲ್ಲಿ ಪರಿಶಿಷ್ಟ ಜಾತಿಯವರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವಂತೆ ಸದ್ಯ ನಡೆಯುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಮಾದಿಗ ಜಾತಿಯ ಪರವಾಗಿ ಶೀಘ್ರದಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಮತ್ತು ವಿವಿಧ ಇಲಾಖೆಯ ಎಲ್ಲಾ ನೇಮಕಾತಿಗಳನ್ನು ಒಳಮೀಸಲಾತಿ ಜಾರಿ ಆಗುವವರೆಗೂ ತಡೆ ಹಿಡಿಯಬೇಕೆಂದು ಒಳಮೀಸಲಾತಿ ಪರವಾಗಿ ಸದನದಲ್ಲಿ ದ್ವನಿಯತ್ತುವಂತೆ ತಮಟೆ ಚಳುವಳಿ ಮುಖಾಂತರ ಸನ್ಮಾನ್ಯ ಶ್ರೀ ಕೃಷ್ಣ ನಾಯ್ಕ್ ಶಾಸಕರಿಗೆ ಮನವಿಯನ್ನು ನೀಡಲಾಯಿತು.ಇಂದು ಒಳ ಮೀಸಲಾತಿಯನ್ನು ಯಾತವತ್ತಾಗಿ ಜಾರಿಗೊಳಿಸಲು ರಾಜ್ಯದ್ಯOತ ಎಲ್ಲಾ ತಾಲ್ಲೂಕಿನ ಶಾಸಕರ ಮನೆ ಮುಂದೆ ತಮಟೆ ಚಳುವಳಿ ಯನ್ನು ಹಮ್ಮಿ ಕೊಳ್ಳಲಾಯಿತು.ಹೂವಿನ ಹಡಗಲಿ ತಾಲ್ಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಾದಿಗ ಸಮುದಾಯದ ಸಾವಿರಾರು ಜನರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೇರಿಕೊಂಡು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣಾ ಮಾಡಿ ಅಲ್ಲಿಂದ ಶಾಸ್ತ್ರಿ ವೃತ್ತದ ಮೂಲಕ ಮುಖ್ಯ ಬಿದಿಯಲ್ಲಿ ತಮಟೆ ಬಾರುಸುತ್ತ ಹಾಗೂ ಘೋಷಣೆ ಕೂಗುತ್ತಾ ಹೊರಟು ಮೊದಲಘಟ್ಟ ಸರ್ಕಲ್ ಮೂಲಕ ಅಲ್ಲಿಂದ ಕೊಯಿಲಾರಗಟ್ಟಿ ತಾಂಡಾದ ಶಾಸಕರ ನಿವಾಸದ ಮನೆ ಮುಂದೆ ಒಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರು ಕೆ ಹುಚೆ0ಗೇಪ್ಪ.ಸದಸ್ಯರಾದ ಎಚ್ ಪೂಜಪ್ಪ.ಕೆ ಪುತ್ರೆಶ್. ಜೆ ಶಿವರಾಜ್. ಟಿ ದೇವೇಂದ್ರಪ್ಪ.ನಾಗರಾಜ್, ಎಂಟಮನಿ ಬರಮಪ್ಪ. ಪಿ ವಿಜಯಕುಮಾರ್. ವಿ ಮರಿಯಪ್ಪ. ವಿಲ್ಸನ್ ಸ್ವಾಮಿ.ಹಲಗಿ ಸುರೇಶ.ಮಕರಬ್ಬಿ ಗೊಣೆಪ್ಪ.ಬಿ ಆನಂದ , ಈ ಗುಡದೇಶ , ಮಹಾಂತೇಶ, ಹನುಮಂತಪ್ಪ, ದಡರಪ್ಪ,ಇನ್ನು ಅನೇಕ ಮುಖಂಡರು ಮತ್ತು ಸಾವಿರಾರು ಸಮುದಾಯದವರ ಸಮ್ಮುಖದಲ್ಲಿ ಪೂಜಾಪ್ಪನವರು ಮನವಿ ಓದಿ ಮಾನ್ಯ ಕೃಷ್ಣ ನಾಯ್ಕ್ ಶಾಸಕರ ಆಪ್ತ ಕಾರ್ಯದರ್ಶಿ ಯಾದ ಮಲ್ಲಿಕಾರ್ಜುನರವರಿಗೆ ಮನವಿ ಸಲ್ಲಿಸಲಾಯಿತು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030