“ಶಾಸಕರ ಭವನದ ಆವರಣದಲ್ಲಿ, ಅಹಿಂದ ಸಂಘಟನಾ ಚಳುವಳಿ ಸಭೆ ”
ಹೂವಿನ ಹಡಗಲಿ,ಈ ದಿನ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ಅಹಿಂದ ಚಳುವಳಿ ಸಂಘಟನೆಯ
ಸಭೆ ಸೇರಲಾಗಿತ್ತು ಈ ಸಂಘಟನೆ ಕುರಿತು ಅಹಿಂದ ಸಂಘಟನೆ ಸಂಸ್ಥಾಪಕ ಹಾಗೂ ಸಂಚಾಲಕರು ಆದ ಮೂರ್ತಿ, ಎಸ್, ಅವರು ಮಾತನಾಡಿ, ಪೈಗಂಬರ್, ಬುದ್ಧ, ಯೇಸು ಈ ಭೂಮಿಗೆ ತಂದoತ ಶಾಂತಿ, ಬಸವೇಶ್ವರರ ಸಮಾನತೆ, ಗಾಂಧೀಜಿಯ ಅಹಿಂಸಾ ನೀತಿ, ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ,ಈ ಸಂಘಟನೆಯ ತತ್ವ ಸಿದಾoತಗಳ ಆಧಾರದಲ್ಲಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದರು, ಈ ಕಾರ್ಯಕ್ರಮದಲ್ಲಿ ಸಂಘಟನೆ ಮಹತ್ವ ಕುರಿತು ಅಶೋಕ ಕುಮಾರ್ ವಿವರವಾಗಿ ಮಾತನಾಡಿದರು, ತದನಂತರ ಗೋವಿಂದ್ ರಾಜು ಈ ಸಂಘಟನೆ
ಎನ್ನು ಕಟ್ಟಿ ಬೆಳಸೋಣ ನಾವೆಲ್ಲರೂ ಭಾರತೀಯರುನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ತಮ್ಮ ಒಡಲಾಳದ ಮಾತನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ಅಹಿಂದ ಸಂಚಾಲಕರುಗಳಾದ, ನಯಾಜ್ ಪಾಷಾ, ಸಿದ್ದರಾಮಯ್ಯ, ಸಂಪತ್, ಆರ್, ಸುರೇಂದ್ರ, ಲಿಚರ್ಡ್, ಹನುಮಯ್ಯ, ತಾಜ್ ಪಾಷ, ಅರುಣ್ ಕುಮಾರಿ, ಹಾಗೂ ಜಿಲ್ಲಾ ಸಂಚಾಲಕರು, ವಿವಿಧ ತಾಲೂಕಿನ ಸಂಚಾಲಕರು ಉಪಸ್ಥಿತರಿದ್ದರು…
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030