ದೇಶಗಳು ಒಗ್ಗಟ್ಟಿನಿಂದ ಮೂಲವೋತ್ಪೋಟನೆಯನ್ನ ಮಾಡಬೇಕು :ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿರಮೇಶ್…!!!

Listen to this article

ಭಯೋತ್ಪಾದನೆಯನ್ನು ವಿಶ್ವದಲ್ಲಿನ ಎಲ್ಲಸಹೋದರ
ದೇಶಗಳು ಒಗ್ಗಟ್ಟಿನಿಂದ ಮೂಲವೋತ್ಪೋಟನೆಯನ್ನ
ಮಾಡಬೇಕು :ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿರಮೇಶ್
ಹಿರಿಯೂರು :
ಜಗತ್ತು ಆಧುನಿಕತೆ ಕಡೆಗೆ ತೆರೆದುಕೊಳ್ಳುವ ಹಾಗೂ ವಿಶ್ವ ಸಹೋದರತ್ವವನ್ನು ಹೊಂದುವ ಕಾಲಘಟ್ಟದಲ್ಲಿ ಧರ್ಮವನ್ನು ಕೇಳಿ ವ್ಯಕ್ತಿಯನ್ನು ಕೊಲ್ಲುವಂತ ಭಯೋತ್ಪಾದನೆಯನ್ನು ವಿಶ್ವದ ಎಲ್ಲ ಸಹೋದರ ದೇಶಗಳು ಒಗ್ಗಟ್ಟಿನಿಂದ ಮೂಲವೋತ್ಪೋಟನೆ ಮಾಡಬೇಕು ಎಂಬುದಾಗಿ ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪಹಲ್ಗಾಂ ನಲ್ಲಿ ಮಡಿದ ಅಮಾಯಕ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಮಂಜುನಾಥ್ ಕಳ್ಳಿಹಟ್ಟಿ, ಭಯೋತ್ಪಾದನೆ ಅಭಿವೃದ್ಧಿಗೆ ಮಾರಕ ಪರಸ್ಪರ ನಂಬಿಕೆಗಳನ್ನು ಮುರಿದು ಹಾಕುವ ಇಂತಹ ಭಯೋತ್ಪಾದನಾ ಕೃತ್ಯಗಳನ್ನು ಸಣ್ಣದರಲ್ಲಿಯೇ ಮುರಿದು ಹಾಕಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ದೊಡ್ಡಘಟ್ಟ ಕುಮಾರ್, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಕಸವನಹಳ್ಳಿ, ಚಿಲ್ಲಹಳ್ಳಿ, ನಿಜಲಿಂಗಪ್ಪ, ಉಷಾ, ವೀಣಾ ಗ್ರಾಮ ಪಂಚಾಯತಿ ಸದಸ್ಯ ಶಶಿಕಲಾ ಹುಲಗಲಕುಂಟೆ, ಸುಮಾ, ಭಾರತಿ , ನಗರ ಸಭೆ ಸದಸ್ಯೆ ಮಮತ. ರಾಜೇಶ್ವರಿ ಹಾಗು ಇತರರು ಉಪಸ್ಥಿತರಿದ್ದರು. ಭಯೋತ್ಪಾದನೆ ನಿಲ್ಲಲಿ ಎಂದು ಶಾಂತಿ ನೆಲೆಸಲಿ ಎಂಬುದಾಗಿ ಬಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend