ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯಾಗದೆ
ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ
ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ
ಹಿರಿಯೂರು :
ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯಾಗದೆ ಅಂತರ್ಜಲ ಪಾತಾಳ ಸೇರಿದ್ದು, ಕೊಳವೆಬಾವಿಗಳು ಬತ್ತಿ ಹೋಗಿ ಕಸಬಾ ಹೋಬಳಿ ಮತ್ತು ಜವನಗೊಂಡನಹಳ್ಳಿ ಹೋಬಳಿ ಹಾಗೂ ಇತರೆ ಗ್ರಾಮಾಂತರ ಪ್ರದೇಶಗಳಲ್ಲಿ ಹಳ್ಳಿಗಾಡಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ರೈತ ಸಂಘದ ವತಿಯಿಂದ ಕರೆಯಲಾಗಿದ್ದ ಮಾಸಿಕಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಪಿಡಿಓಗಳು ಟ್ಯಾಂಕರ್ ಮುಖಾಂತರ ಜನ-ಜಾನುವಾರುಗಳಿಗೆ ನೀರು ಸರಬರಾಜು ಮಾಡದೆ ಜಿಲ್ಲಾಡಳಿತ ಹಣ ಕೊಟ್ಟಿರುವುದಿಲ್ಲ, ತಾಲೂಕಿನಲ್ಲಿ ಬರಗಾಲವಿರುವುದರಿಂದ ಹಳ್ಳಿಗಳಲ್ಲಿ ಪಂಚಾಯಿತಿಗೆ ಯಾರು ಕಂದಾಯ ಕಟ್ಟುತ್ತಿಲ್ಲ ಅದಕ್ಕೆ ಹಣವಿಲ್ಲದೆ ಟ್ಯಾಂಕರ್ ಮುಖಾಂತರ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದರಲ್ಲದೆ,
ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರಗಳು ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಜನತೆಗೆ ಕುಡಿಯುವ ನೀರು ಒದಗಿಸದಿದ್ದಲ್ಲಿ, ಇನ್ನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಬೀಗ ಹಾಕಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂಬುದಾಗಿ ಕೆ.ಸಿ.ಹೊರಕೇರಪ್ಪ ಎಚ್ಚರಿಸಿದರು.
ತಾಲೂಕಿನಾದ್ಯಂತ ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಜನತೆಗೆ ನೂರಾರು ಕೋಟಿ ರೂಗಳನ್ನು ಖರ್ಚು ಮಾಡಿ ಜಲ ಜೀವನ್ ಮಿಷನ್ ಯೋಜನೆ ಮುಖಾಂತರ ಕುಡಿಯುವ ನೀರಿಗೆ ಮನೆಮನೆಗೂ ನಲ್ಲಿಗಳನ್ನು ಅಳವಡಿಸಿದ್ದು, ಯೋಜನೆ ಹಳ್ಳ ಹಿಡಿಯುವ ಮುಂಚಿತವಾಗಿ ನೀರು ಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇತ್ತೀಚಿನ ವರ್ಷಗಳಲ್ಲಿ ರೈತರು ತನ್ನ ಬೆಳೆಗಳಿಗೆ ಅತಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಸಿಂಪಡಿಸುತ್ತಿದ್ದು, ಆಹಾರ ಪದಾರ್ಥಗಳು ವಿಷವಾಗಿ ಪರಿವರ್ತನೆಯಾಗಿ ಅವುಗಳನ್ನು ಸೇವಿಸುವ ಜನಗಳಿಗೆ ಅನೇಕ ರೋಗಗಳು ಬರುತ್ತಿದ್ದು, ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ಹಣವ್ಯಯ ಮಾಡಿದರೂ ಜೀವ ರಕ್ಷಿಸಲು ಸಾಧ್ಯವಾಗುತ್ತಿಲ್ಲ
ಸರ್ಕಾರ ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ಗಳ ಮುಖಾಂತರ ಆರ್ಥಿಕ ಸಹಾಯ ಒದಗಿಸಿ ಸಾವಯವ ಕೃಷಿಗೆ ಆದ್ಯತೆ ನೀಡಿ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವಂತೆ ರೈತರಿಗೆ ಸರ್ಕಾರ ಉತ್ತೇಜನ ನೀಡುವಂತೆ ಮತ್ತು ಮಾರುಕಟ್ಟೆ ವ್ಯವಸ್ಥೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರಲ್ಲದೆ, ರೈತರುಗಳು ಸರ್ಕಾರದ ಯೋಜನೆಗಳನ್ನು ಪಡೆಯಲು ಅತಿಹೆಚ್ಚು ಸಂಘಟಿತರಾಗುವ ಮೂಲಕ ರೈತ ಸಂಘದೊಂದಿಗೆ ಕೈಜೋಡಿಸಬೇಕೆಂದು ತಾಲೂಕಿನ ರೈತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಿ.ಓ.ಶಿವಕುಮಾರ್, ಕಾರ್ಯಾಧ್ಯಕ್ಷ ಹೆಚ್.ದಸ್ತಗಿರಿ ಸಾಬ್, ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮಿಕಾಂತ್ , ಎಂ.ಆರ್.ಪುಟ್ಟಸ್ವಾಮಿ, ಬಿ.ಡಿ.ಶ್ರೀನಿವಾಸ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ನೀರಾವರಿ ಹೋರಾಟಗಾರ ಯಾದವರೆಡ್ಡಿ ಜನಶಕ್ತಿ ಸಂಘದ ಶಫಿವುಲ್ಲಾ, ದಲಿತ ಸಂಘರ್ಷ ಸಮಿತಿಯ ಕಾರ್ಯಾಧ್ಯಕ್ಷ ಬೋರನಕುಂಟೆ ಜೀವೇಶ್, ಶ್ರೀಮತಿ ನಿತ್ಯಶ್ರೀ, ಹೆಚ್.ರಂಗಸ್ವಾಮಿ, ಎಚ್.ಎನ್.ಮೂರ್ತಪ್ಪ, ಸಿ.ಎನ್.ಮಾಳಿಗೆ ಲೋಕೇಶ್, ಮಹಲಿಂಗಪ್ಪ, ಎಚ್.ಆರ್.ತಿಪ್ಪೇಸ್ವಾಮಿ, ಮುನಿಸ್ವಾಮಿ, ಸೋಮ ಸುಂದರಂ, ಚಿಕ್ಕ ತಿಮ್ಮಯ್ಯ ಮುಕುಂದಪ್ಪ, ಎಂ ಪಿ ನಾಗರಾಜ್, ವಿವಿ ಪುರ ಮಂಜಣ್ಣ , ಸೋಮೇರಾ ಹಳ್ಳಿ ರಂಗಸ್ವಾಮಿ ಸೋಮೆರಹಳ್ಳಿ ರಂಗಸ್ವಾಮಿ ಸೋಮರಹಳ್ಳಿ ರಂಗಸ್ವಾಮಿ ಇತರೆ ಅನೇಕ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030