ವಿಶೇಷ ಚೇತನ ಮಕ್ಕಳಲ್ಲಿಯೂ ಸಹ ಒಂದು ಪ್ರತಿಭೆ ಇರುತ್ತದೆ
ಸರ್ಕಾರಿನೌಕರರಸಂಘದಖಜಾಂಚಿಯಾದ ಬಿ.ಆರ್.ಶ್ರೀನಿವಾಸ್
ಹಿರಿಯೂರು :
ವಿಶೇಷ ಚೇತನ ಮಕ್ಕಳಲ್ಲಿಯೂ ಸಹ ಒಂದು ಪ್ರತಿಭೆ ಇರುತ್ತದೆ. ಅದನ್ನು ಸೂಕ್ತ ಅವಕಾಶ ನೀಡಿ ಹೊರತೆಗೆಯಬೇಕಾಗಿದೆ ಹಾಗೂ ಅಂತಹ ಮಕ್ಕಳು ಸಹ ಕ್ರೀಡೆಯಲ್ಲಿ ಭಾಗವಹಿಸಿ ಸಾಮಾನ್ಯ ಮಕ್ಕಳಂತೆ ಬೆಳೆಯಬೇಕು ಎಂಬುದಾಗಿ ಸರ್ಕಾರಿ ನೌಕರರ ಸಂಘದ ಖಜಾಂಚಿ ಬಿ.ಆರ್.ಶ್ರೀನಿವಾಸ್ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ ಸ್ಟಾಂಡ್ ಶಾಲೆಯಲ್ಲಿ ತಾಲ್ಲೂಕಿನ ಜೆಜಿಹಳ್ಳಿ ವ್ಯಾಪ್ತಿಯ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನ ಮಕ್ಕಳ ಕ್ರೀಡೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿ.ಆರ್.ಪಿಗಳಾದ ಹೆಚ್.ಇ.ನಿಜಗುಣಮೂರ್ತಿ ಮಾತನಾಡಿ, ವಿಶೇಷ ಚೇತನ ಮಕ್ಕಳು ವಿಶೇಷವಾದ ಹಾರೈಕೆ ಹಾಗೂ ಅವಕಾಶ ಕೊಡಬೇಕು ಹಾಗೂ ಬೆಂಗಳೂರಿನಲ್ಲಿ ಎ ಪಿ ಡಿ ಅಂದರೆ ಅಸೋಷಿಯೇಷನ್ ಆಪ್ ಪೀಪಲ್ ಫಾರ್ ಡಿಸೆಬಿಲಿಟೀಸ್ ಸಂಸ್ಥೆಯ ಪರಿಚಯ ಮಾಡಿಕೊಟ್ಟರು ಅಲ್ಲಿ ಸುಮಾರು 365 ಮಕ್ಕಳು 21 ಬಗೆಯ ನ್ಯೂನತೆ ಹೊಂದಿರುವ ಮಕ್ಕಳು ಕಲಿಯುತ್ತಿದ್ದೂ ಅಗತ್ಯವಿರುವವರು ಅಲ್ಲಿ ಉಚಿತವಾಗಿ ಸೌಲಭ್ಯ ಪಡೆಯಬಹುದು ಎಂಬುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚರಣ್ ರಾಜ್ ರವರು ಮಕ್ಕಳು ದೀರ್ಘಕಾಲ ಮೊಬೈಲ್ ಬಳಸುವುದರಿಂದ ಆಗುವ ದುಷ್ಪರಿಣಾಮಗಳನ್ನು ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಹಾಗೂ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಸ್.ಫಯಾಜ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಅನಸೂಯಮ್ಮ, ಬಿಆರ್ ಪಿ ಪ್ರಸನ್ನಕುಮಾರ್ , ಸಿ ಆರ್ ಪಿಗಳಾದ ಯೋಗೇಶ , ರಂಗಸ್ವಾಮಿ ಮಂಜುನಾಥ, ಬಿ ಐ ಇ ಆರ್ ಟಿ ಗಳಾದ ಶ್ರೀ ಬಸವರಾಜ , ಹನುಮಪ್ಪ ಎಸ್ ಹಾಗೂ ಚಂದ್ರಶೇಖರ್ ಆರ್ ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030