ಹಿರಿಯೂರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹೆಸರು ಸೇನೆ ಡಾಕ್ಟರ್ ವಾಸುದೇವ್ ಮೇಟಿ ಬಣದಿಂದ ಹಿರಿಯೂರಿನಲ್ಲಿ ಶನಿವಾರ ನಡೆದ ರೈತ ಜನ ಜಾಗೃತಿ ಸಮಾವೇಶವನ್ನು ಹಿರಿಯೂರು ತಾಲೂಕ್ ಅಧ್ಯಕ್ಷರಾದ ಜಿ ವಿ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಈ ಸಭೆಯಲ್ಲಿ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ವಾಸುದೇವ್ ಮೇಟಿ ಮಾತನಾಡಿ ರೈತರ ವಿದ್ಯುತ್ ಉಪಕರಣಗಳ ಬಗ್ಗೆ ಮಾತನಾಡಿ ರೈತರಿಗೆ ಈಗಿನ ಸರ್ಕಾರ ಬಹಳ ಅನ್ಯಾಯ ಮಾಡುತ್ತಿದೆ ಇದನ್ನು ಶೀಘ್ರದಲ್ಲಿ ಪ್ರೇರಿಸಬೇಕು ಮತ್ತು ರೈತರ ಜೀವನಕ್ಕಾಗಿ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಶೀಘ್ರದಲ್ಲಿ ಸಾಗುವಳಿ ಕೊಡಬೇಕು ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ತಿಳಿಸಿದರು ಸರ್ಕಾರ ಆದೇಶ ಮಾಡಿದರು ಇಲ್ಲಿನ ಅಧಿಕಾರಿಗಳು ನಮ್ಮ ರೈತರಿಗೆ ಮೋಸ ಮಾಡಲಿದ್ದಾರೆ ಇದನ್ನು ಶೀಘ್ರದಲ್ಲಿ ಸರಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಪಡಿಸಿದರು ಮತ್ತು ರೈತರು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಹಿರಿಯೂರಿನ ಜೆಡಿಎಸ್ ಮುಖಂಡರಾದ ದೇವೇಂದ್ರಪ್ಪನವರು ಮಾತನಾಡಿ ರೈತರಿಗೆ ಯಾವುದೇ ತೊಂದರೆ ಬಂದರೂ ಪಕ್ಷತೀತವಾಗಿ ರೈತ ಜೊತೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಲಕ್ಷ್ಮಿಕಾಂತ್ ಹೊಳಲ್ಕೆರೆ ತಾಲೂಕ್ ಅಧ್ಯಕ್ಷರಾದ ಪಿ ನಾಗರಾಜ್ ಲೋಲಾಕ್ಷಮ್ಮ ಶಶಿಕಲಾ ಪವಿತ್ರ ಜಯಲಕ್ಷ್ಮಿ ರಾಜ್ಯ ಸಮಿತಿ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030