ಸೈಕಲ್ ತುಳಿಯುವ ವಿಚಾರಕ್ಕೆ ಮುನಿಸಿಕೊಂಡು 11ವರ್ಷದಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣು…!!!

Listen to this article

ಸೈಕಲ್ ತುಳಿಯುವ ವಿಚಾರಕ್ಕೆ ಮುನಿಸಿಕೊಂಡು
11ವರ್ಷದಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣು
ಹಿರಿಯೂರು :
ಸೈಕಲ್ ತುಳಿಯುವ ವಿಚಾರಕ್ಕೆ ಮುನಿಸಿಕೊಂಡ 11 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ 31 ನೇ ವಾರ್ಡ್ ನ ನಾರಿಯ ಮಿಲ್ ರಸ್ತೆಯ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ಹರಿಶ್ಚಂದ್ರ ಘಾಟ್ ನಿವಾಸಿ ರುದ್ರಮ್ಮ ಶ್ರೀನಿವಾಸ್ ಎನ್ನುವವರ ಪುತ್ರಿ ಸ್ಪಂದನ ಮೃತ ಬಾಲಕಿಯಾಗಿದ್ದಾಳೆ. ಜೊತೆಗಿನ ಹುಡುಗಿಯನ್ನು ಸೈಕಲ್ ತುಳಿಯುವುದಕ್ಕೆ ಕೇಳಿ ಅವರು ಕೊಡದಿದ್ದಕ್ಕೆ ಮನೆಗೆ ಓಡಿ ಹೋಗಿ ಬೋಲ್ಟ್ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾಳೆ.
ಆನಂತರ ಬಾಗಿಲು ಒಡೆಯಲಾಯಿತು ಎಂಬುದಾಗಿ ಸ್ಥಳೀಯರು ತಿಳಿಸಿದ್ದು, ಚಿಕ್ಕ ಮಕ್ಕಳ ಮನಸ್ಸಿಗೇ ಆತ್ಮಹತ್ಯೆಯಂತಹ ದುಷ್ಟ ಆಲೋಚನೆಗಳು ಬರುತ್ತಿರುವುದು ನಿಜಕ್ಕೂ ಈ ಸಮಾಜದ ಒಂದು ದುರಂತದ ಸಂಗತಿಯಾಗಿದೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ ಪಿ.ಶಿವಕುಮಾರ್ ಹಾಗೂ ಪಿ.ಎಸ್.ಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿ, ಪರಿಶೀಲನೆನಡೆಸಿದ್ದು, ನಗರಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend