ಎಲ್ಲಡೆ ಬಿಜೆಪಿ ಪರವಾದ ಅಲೆ ಬೀಸುತಿದೆ, ಈ ಬಾರಿ ಬದಲಾವಣೆ ಖಚಿತ.
ಸಂಡೂರು ಉಪಚುನಾವಣೆ ಪ್ರಯುಕ್ತ ಇಂದು , ತುಮಟಿ ತಾಂಡಾ, ಡಿ.ಅಂತಾಪುರ ಹಾಗೂ ಕೊರಚರಹಟ್ಟಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಮಾತನಾಡಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸುವಂತೆ ವಿನಂತಿಸಿಕೊಳ್ಳಲಾಯಿತು.
ಸಮರ್ಪಕ ರಸ್ತೆಗಳಿಲ್ಲದೆ ಹಳ್ಳಿಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ನಮ್ಮ ತಾಲೂಕಿನ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ, ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ಅವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಕಲ್ಪನೆಯನ್ನು ಸಂಡೂರಿನಲ್ಲಿ ಸಾಕಾರಗೊಳಿಸಲು ಬಿಜೆಪಿ ಗೆಲ್ಲಬೇಕಿದೆ ಎಂದು ಜನತೆಯ ಬಳಿ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾರ್ಗದರ್ಶಕರು, ಶಾಸಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿ, ಮಾರ್ಗದರ್ಶಕರು, ಮಾಜಿ ಸಚಿವರಾದ ಶ್ರೀ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ಶ್ರೀ ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್.ದಿವಾಕರ್, ಹಿರಿಯರಾದ ಶ್ರೀ ಟಿ.ಕೃಷ್ಣಪ್ಪ, ಮಂಡಲದ ಅಧ್ಯಕ್ಷರಾದ ಶ್ರೀ ನಾನಾಸಾಹೇಬ್ ನಿಕ್ಕಂ, ಪ್ರಮುಖರಾದ ಶ್ರೀ ಪ್ರಲ್ಹಾದ, ತುಮಟಿ ಮತ್ತು ತುಮಟಿ ತಾಂಡಾದ ಪ್ರಮುಖರಾದ ಶ್ರೀ ಪಾಲಾಕ್ಷಿ ನಾಯ್ಕ, ಶ್ರೀ ರಮೇಶ ನಾಯ್ಕ, ಶ್ರೀ ವಿನಯ, ಶ್ರೀ ಠಾಕೂರ್ ನಾಯ್ಕ, ಶ್ರೀ ಕೃಷ್ಣ ನಾಯ್ಕ, ಶ್ರೀ ಸಂಜು ನಾಯ್ಕ, ಡಿ.ಅಂತಾಪುರ ಗ್ರಾಮದ ಪ್ರಮುಖರಾದ ಶ್ರೀ ವೀರಭದ್ರಪ್ಪ, ಶ್ರೀ ಜಂಭುನಾಥ, ಶ್ರೀ ಕೆ.ಎಸ್.ಬಸಪ್ಪ, ಶ್ರೀ ಬಸವರಾಜ, ಶ್ರೀ ಹೊನ್ನುರಪ್ಪ, ಶ್ರೀ ಸ್ವಾಮಿ, ಶ್ರೀ ಅಗಲೂರಪ್ಪ, ಶ್ರೀ ಗವಿಸಿದ್ಧ, ಕೊರಚರಹಟ್ಟಿ ಗ್ರಾಮದ ಪ್ರಮುಖರು ಸೇರಿದಂತೆ ಗ್ರಾಮಗಳ ಹಿರಿಯರು, ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು, ತಾಯಂದಿರು ಮತ್ತು ಯುವಕಮಿತ್ರರು ಉಪಸ್ಥಿತರಿದ್ದರು….
ವರದಿ. ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030