ಸಂಡೂರು ತಾಲ್ಲೂಕು ಕುರೇಕುಪ್ಪ ಗ್ರಾಮದಲ್ಲಿ ಪಾಡ್ಯದಂದು ಸರ್ವಜ್ಞ ಕುಂಬಾರ ಸಂಘವನ್ನು ರೇಣುಕಾಶ್ರಮ ಕುರೇಕುಪ್ಪ ಇವರುಗಳ ದಿವ್ಯ ಸಾನಿಧ್ಯದಲ್ಲಿ ಯಶಸ್ವಿ ಕಾರ್ಯಕ್ರಮ…!!!

Listen to this article

ಸಂಡೂರು ತಾಲ್ಲೂಕು ಕುರೇಕುಪ್ಪ ಗ್ರಾಮದಲ್ಲಿ ದಿನಾಂಕ:- 30-03-2025 ರ ಯುಗಾದಿ ಪಾಡ್ಯದಂದು ಸರ್ವಜ್ಞ ಕುಂಬಾರ ಸಂಘವನ್ನು ಅಧಿಕೃತವಾಗಿ ಶ್ರೀಶ್ರೀಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು ಕುಂಬಾರ ಗುರುಪೀಠ ಚಿತ್ರದುರ್ಗ ಇವರು ಹಾಗೂ ಶ್ರೀ ವೇದಮೂರ್ತಿ ಶರಣಬಸವಯ್ಯ ತಾತನವರು ಶ್ರೀ ರೇಣುಕಾಶ್ರಮ ಕುರೇಕುಪ್ಪ ಇವರುಗಳ ದಿವ್ಯ ಸಾನಿಧ್ಯದಲ್ಲಿ, ಕುರೇಕುಪ್ಪ ಪುರಸಭೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಹಾಗೂ ಗ್ರಾಮದ ಸಕಲ ಗುರುಹಿರಿಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನಂತರದಲ್ಲಿ ಕವಿ ಸರ್ವಜ್ಞರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಶರಣರು ಕುಂಬಾರ ಸಮುದಾಯವು ಬಹಳ ಹಿಂದೆ ಉಳಿದಿದ್ದು, ಇದಕ್ಕೆ ಮೂಲಕಾರಣ ಕುಂಬಾರಿಕೆಯು ನಶಿಸಿ ಹೋಗಿದ್ದು, ಆದ್ದರಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಈ ಸಮುದಾಯವು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಎರಿಸ್ವಾಮಿ ಆಲ್ ಇಂಡಿಯನ್ ಕುಂಬಾರ್ ಕುಂದಲ್ ಪ್ರಜಾಪತಿ ಫೆಢರೇಷನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಗುರುರಾಜ ನಾಮನಿರ್ದೇಶನ ಸದಸ್ಯರು ಮಹಾನಗರ ಪಾಲಿಕೆ ಬಳ್ಳಾರಿ ಸಂಘಟನೆ ಬಗ್ಗೆ ಕುರಿತು ಮಾತನಾಡಿದರು. ಸರ್ವಜ್ಞ ಕುಂಬಾರ ಸಂಘದ ಗೌರವಾಧ್ಯಕ್ಷರಾದ ಯಂಕಪ್ಪ, ಅಧ್ಯಕ್ಷರಾದ ಕೆ.ದೇವಣ್ಣ ಹಾಗೂ ಸಂಘದ ಸರ್ವ ಸದಸ್ಯರು, ಸಮುದಾಯದ ಯುವಕರು, ಮಾತೆಯರು ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend