ಸಂಡೂರು :: ಅಭಿನಂದನಾ ಸಮಾವೇಶದಲ್ಲಿ ಬಳ್ಳಾರಿಯಲ್ಲಿ ಕಳಪೆ ಗ್ಲುಕೋಸ್ನಿಂದ ಸಾವನ್ನಪ್ಪಿದ, ಬಾಣತಿಯರ ವಾರಸ್ದಾರರಿಗೆ 5 ಲಕ್ಷ ಪರಿಹಾರ ಘೋಷಣೆ ಸಿಎಂ….!!!

Listen to this article

ಸಂಡೂರು :: ಅಭಿನಂದನಾ ಸಮಾವೇಶದಲ್ಲಿ ಬಳ್ಳಾರಿಯಲ್ಲಿ ಕಳಪೆ ಗ್ಲುಕೋಸ್ನಿಂದ ಸಾವನ್ನಪ್ಪಿದ, ಬಾಣತಿಯರ ವಾರಸ್ದಾರರಿಗೆ 5 ಲಕ್ಷ ಪರಿಹಾರ ಘೋಷಣೆ ಸಿಎಂ…. ತಂಡೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ, ಬಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ, ಶಿಗ್ಗಾವಿ, ಚನ್ನಪಟ್ಟಣ, ವಿಶೇಷವಾಗಿ ಸಂಡೂರು, ಮತದಾರಿಗೋಸ್ಕರ ಅಭಿನಂದನೆ ತಿಳಿಸಲು ಸಂಡೂರಿನಲ್ಲಿ ಅಭಿನಂದನ ಸಮಾವೇಶ ನಡೆಯಿತು ಈ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿ. ಸಂಡೂರು ಮತದಾರರು ನಮ್ಮನ್ನು ಆಶೀರ್ವಾದ ಮಾಡಿದ್ದೀರಿ ನಾನು ನಿಮಗೆ ಕೊಡುವ ಗಿಫ್ಟಿನೆಂದರೆ ನಾನು ನಿಮಗೆ ನೀಡಿರುವ 5 ಗ್ಯಾರಂಟಿಗಳನ್ನು ನಿಲ್ಲಿಸದೆ ನನ್ನ ಸರ್ಕಾರದ ಆಡಳಿತ ಅವಧಿಯವರೆಗೆ ಮುಂದುವರಿಸುತ್ತೇನೆ. ಒಂದು ವೇಳೆ 2028ಕ್ಕೆ ಮತ್ತೆ ನಿಮಗೆ ಆಶೀರ್ವಾದ ಮಾಡಿದ್ದೆ ನಿಜ ಆದರೆ ಆಡಳಿತ ನದಿಯಲ್ಲೂ ಗ್ಯಾರಂಟಿಗಳ ಸುರಿಮಳೆ ಸುರಿಸುವುದು ಕೂಡ ಗ್ಯಾರಂಟಿಯಾಗಿದೆ. ಎಂದು ಮುಂದಿನ ಭವಿಷ್ಯ ನುಡಿದರು ಹಾಗೂ ಈ ಸಂದರ್ಭದಲ್ಲಿ ದುಃಖದ ವಿಷಯ ಏನೆಂದರೆ ಬಳ್ಳಾರಿಯಲ್ಲೇ ಸಾವನ್ನಪ್ಪಿದ ಬಾಣತಿಯರು, ಇದರಿಂದ ಬಹಳ ದುಃಖ ಪಟ್ಟಿದ್ದೇನೆ ಮತ್ತು ಇದು ಒಂದು ದುಃಖದ ಸಂಗತಿ ಆಗಿದೆ ನಾನು ಈಗಾಗಲೇ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದೇನೆ. ಆದರೆ ಸಾವನಪ್ಪಿದ ಬಾಣತಿಯರ ವಾರಸ್ದಾರರು ನಮಗೆ ಇನ್ನೂ ಹೆಚ್ಚಿನ ಪರಿಹಾರ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನಾನು ಈ ಕಾರ್ಯಕ್ರಮದಲ್ಲಿ, ಅವರಿಗೆ ಐದು ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡುತ್ತಿದ್ದೇನೆ. ಎಂದು ನುಡಿದು ಭಾಷಣ ಮುಕ್ತಾಯಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸಂತೋಷ S ಲಾಡ್, ಭೀಮನಾಯಕ್, ಸಮೀರ್ ಅಹ್ಮದ್ ಖಾನ್, ಸಂಡೂರು ಎಂಎಲ್ಎ ಅನ್ನಪೂರ್ಣ ತುಕಾರಾಂ, ಹಾಗೂ ಅವರ ಪತಿ ತುಕಾರಾಂ, ಇನ್ನು ಹಲವಾರು ರಾಜಕೀಯ ನಾಯಕರು ಭಾಗವಹಿಸಿದ್ದರು…

ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend