ನಾಲ್ಕು ವರ್ಷ ಮುಖ್ಯ ಗುರುಗಳಾಗಿ ಸೇವೆ. ಹಳೆಯ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳ ಮನದಾಳದ ಮಾತು…!!!

Listen to this article

ಶ್ರೀ ಹನುಮಂತಪ್ಪ ಎಸ್ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮಲಗುಂಡ ಗ್ರಾಮದಲ್ಲಿ ಸುಮಾರು 4 ವರ್ಷ ತಮ್ಮ ಶಿಕ್ಷಕ ವೃತ್ತಿಯನ್ನು ಸಹ ಶಿಕ್ಷಕರಾಗಿ ಮತ್ತು ಪ್ರಭಾರಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸಿದ್ದು 2024ನೇ ಸಾಲಿನಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಡೂರು ತಾಲ್ಲೂಕಿನ ಹಳೇ ದರೋಜಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು 04 ಡಿಸೆಂಬರ್ 2024 ರಂದು ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ನೂರುಲ್ಲಾ ಕೆ ಹಾಗೂ SDMC ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಬೊಮ್ಮಲಗುಂಡ ಗ್ರಾಮದ ದೈವಸ್ಥರು , ಹಿರಿಯರು ಕಿರಿಯರು ಹಾಗೂ ಶಾಲಾ ಮುದ್ದು ಮಕ್ಕಳು, ಯುವಕರೆಲ್ಲರೂ ಸೇರಿ ಶ್ರೀ ಹನುಮಂತಪ್ಪ ಎಸ್ ಇವರನ್ನು ದುಃಖದಿಂದ ತಮ್ಮ ಮುಂದಿನ ಶಿಕ್ಷಕ ವೃತ್ತಿ ಜೀವನ ಚೆನ್ನಾಗಿರಲೆಂದು ಬೀಳ್ಕೊಟ್ಟರು.

* *ಹಳೆ ವಿದ್ಯಾರ್ಥಿ ಹರೀಶ್ ನಾ ಮನದಾಳದ ಮಾತು.*
ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯ ಮನದಾಳದ ಮಾತು….
ನಮ್ಮ ಶಾಲೆಯನ್ನು ನೀವು ಬಿಟ್ಟು ಹೋಗುತ್ತಿರುವುದು ನಮಗೆ ತುಂಬ ದುಃಖ್ಖದ ವಿಷಯ ಸರ್,”ನಿಮ್ಮ ಬಗ್ಗೆ ನನ್ನ ಅನಿಸಿಕೆಗಳು ಸರ್,ಮೃಧುಮನಸ್ಸಿನ” ಗುಣದವರು,ಹೃದಯವಂತಿಕೆ, ಎಲ್ಲಾ ವಿದ್ಯಾರ್ಥಿಗಳು ಒಂದೇ ಎನ್ನುವ ಭಾವನೆ, (ಪ್ರತಿಯೊಬ್ಬ ವಿದ್ಯಾರ್ಥಿಗೂ ನನ್ನ ಶಿಕ್ಷಣ ಅಮೂಲ್ಯವಾಗಬೇಕು ಎನ್ನುವ ಒಂದು ಸಂದೇಶ), ಚಿಕ್ಕ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳು, ಪ್ರತಿಭಕಾರಂಜಿ ಸ್ಪರ್ದಿಗಳು, ಇನ್ನಿತರೇ ಕಾರ್ಯಕ್ರಮವನ್ನು ಮಕ್ಕಳಿಗೆ ಪ್ರೇರಣೆಯನ್ನು ನೀಡಿ ಅವರ ಸೃಜನಶೀಲತೆಯನ್ನು ಹೆಚ್ಚಿಸುವುದು,ಗ್ರಾಮಸ್ಥರಿಗೆ ಗೌರವ ಕೊಡುವುದು, ಅನಕ್ಷರಸ್ತರು ಯಾವುದಾದರು ಒಂದು ವಿಷಯದ ಬಗ್ಗೆ ಕೇಳಿದಾಗ ಅದಕ್ಕೆ ಪ್ರತಿಯುತ್ತರ ನೀಡುವುದು,ನಮ್ಮ ಶಾಲೆಗೆ ಕರ್ತವ್ಯಕ್ಕೆ ಬರುವ ಸಮಯದಲ್ಲಿ ನಮಸ್ತೆ ಮಾಡಿದರೆ ಅದಕ್ಕೆ ತಲೆ ಬಾಗಿ ನಮಸ್ತೆ ಪ ಅಂತ ಹೇಳುವುದು,ಅತಿಥಿ ಶಿಕ್ಷಕರಿಗೂ & ಅಡುಗೆ ಸಿಬ್ಬಂದಿಯವರಿಗೆ ಕಾಳಜಿಯನ್ನು ತೋರುವುದು, ಇವೆಲ್ಲ ಸವಿನೆನಪುಗಳು ನಮ್ಮಲ್ಲಿ ಸಧಾ ಚಿರಋಣಿ ಸರ್
“ನಿಮ್ಮ ಜೀವನದ ಮುಂದಿನ ಕರ್ತವ್ಯದಲ್ಲೂ ಸಹ,ನಿಮಗೆ ಯಾವುದೇ ಅಡೆತಡೆಗಳಾಗದೆ, ಆ ಗ್ರಾಮಸ್ಥರು ಕೂಡ ನಿಮಗೆ ಗೌರವ ಕೊಟ್ಟು ಕೈಜೋಡಿಸಿ ಹೊಂದಿಕೊಂಡು ಹೋಗಲಿ,, ಅಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶಕರಾಗಲಿ,ಎಂದು ನಾನು ಭಾವಿಸುತ್ತೇನೆ ಸರ್
ಇಂತಿ ತಮ್ಮ ಬೊಮ್ಮಲಾಗುಂಡ ಶಾಲೆಯ ಹಳೆಯ ವಿದ್ಯಾರ್ಥಿ…

ಹರೀಶ… ಕಾಶಪ್ಪ ಸಂಡೂರು ಗ್ರಾಮಾಂತರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend