ಇವರಿಗೆ ದಿನಾಂಕ: ೨೪.೦೯.೨೦೨೪
ಮಾನ್ಯ ಆಯುಕ್ತರು
ಸಮಾಜ ಕಲ್ಯಾಣ ಇಲಾಖೆ
ಬೆಂಗಳೂರು..ಮಾನ್ಯರೇ,
ವಿಷಯ:- ದಿ|| ಗೌರಮ್ಮ, ನಿವೃತ್ತ ಅಡುಗೆ ಸಹಾಯಕರು, ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ
ಇವರಿಗೆ ಕಮ್ಯೂಟೇಷನ್ ಮೊತ್ತ, ಪಿಂಚಣಿ ಸೌಲಭ್ಯ, ನಿವೃತ್ತಿ ಉಪದಾನವನ್ನು
ಮಂಜೂರು ಮಾಡುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬoಧಿಸಿದoತೆ, ದಿ||ಗೌರಮ್ಮ, ನಿವೃತ್ತ ಅಡುಗೆ ಸಹಾಯಕರು, ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲೆ ಇವರ ಮಕ್ಕಳಾದ ಟಿ.ವೆಂಕಟೇಶ, ಟಿ.ಲಕ್ಷö್ಮಣ, ಟಿ.ಈರಣ್ಣ, ಟಿ.ಯಂಕಪ್ಪ, ಟಿ.ರ್ರಿಸ್ವಾಮಿ ಆದ ನಾವುಗಳು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆoದರೆ, ನಮ್ಮ ತಾಯಿಯವರಾದ ದಿವಂಗತ ಶ್ರೀಮತಿ ಗೌರಮ್ಮ, ಅವರು ಅಡುಗೆ ಸಹಾಯಕರಾಗಿ ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿಯಲ್ಲಿ ದಿನಾಂಕ: ೧೬.೧೨.೧೯೯೩ ರಂದು ಅನುಕಂಪದ ಆಧಾರದ ಮೇಲೆ ಸೇವೆ ಸೇರಿದ್ದರು. ಕಾರಣ ನಮ್ಮ ತಂದೆಯವರಾದ ದಿ|| ತಿಮ್ಮಪ್ಪ ಜಿ. ಅವರು ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಲೇ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದರು. ಆಗ ನಾವೆಲ್ಲವೂ ಪ್ರಾಪ್ತವಯಸ್ಕರಲ್ಲದ್ದರಿಂದ, ನಮ್ಮ ಕುಟುಂಬ ನಿರ್ವಹಣೆಗಾಗಿ ಸರ್ಕಾರವು ನಮ್ಮ ತಾಯಿಯವರಾದ ಶ್ರೀಮತಿ ಗೌರಮ್ಮ ಅವರಿಗೆ ಅಡುಗೆ ಸಹಾಯಕ ಹುದ್ದೆಯನ್ನು ನೀಡಿರುತ್ತದೆ. ಆದರೆ ನಮ್ಮ ತಾಯಿಯವರು ಅನಕ್ಷರಸ್ಥರಾಗಿದ್ದರೂ ಸಹಿ ಮಾಡುವುದನ್ನು ಮಾತ್ರ ಕಲಿತಿದ್ದರು. ದಿನಾಂಕ: ೩೦.೧೧.೨೦೨೨ರಂದು ವಯೋನಿವೃತ್ತಿಯನ್ನು ಹೊಂದಿದ್ದು, ೨೮ ವರ್ಷಗಳು, ೧೧ ತಿಂಗಳು, ೧೪ ದಿವಸಗಳ ಕಾಲ ಸರ್ಕಾರಿ ಸೇವೆಯನ್ನು ಸಲ್ಲಿಸಿರುತ್ತಾರೆ. ನಿವೃತ್ತಿ ವೇತನವು ದಿನಾಂಕ: ೦೧.೧೨.೨೦೨೨ರಿಂದ ನಿವೃತ್ತಿ ವೇತನ ಬಟವಾಡೆ ಪ್ರಾರಂಭವಾಗಬೇಕಿತ್ತು. ರೂ.೪,೫೦,೯೫೦.೦೦ ಉಪದಾನವನ್ನು ನೀಡಬೇಕಾಗಿತ್ತು. ಆದರೆ ಪಿಂಚಣಿಯನ್ನು ನೀಡದೆ, ಕಮ್ಯೂಟೇಷನ್ ಮೊತ್ತವನ್ನು ನೀಡದೇ ನಮ್ಮ ತಾಯಿಯವರಿಗೆ ಸಂಬAಧಿಸಿದ ಜಿಲ್ಲಾ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ಹಾಗೂ ಅವರ ಸಿಬ್ಬಂದಿಯವರು ಅನ್ಯಾಯ ಮಾಡಿದ್ದಾರೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳು ತಮಗೆ ದೊರೆಯಲಿಲ್ಲವೆಂದು ಪ್ರತಿನಿತ್ಯ ಕಚೇರಿಗೆ ಅಲೆದರೂ, ಒಂದು ವರ್ಷ ಕಳೆದರೂ ಸಂಬoಧಿಸಿದ ಅಧಿಕಾರಿಗಳು ಯಾವುದೇ ನಿವೃತ್ತಿ ನಂತರದ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷö್ಯವಹಿಸಿದ್ದರಿಂದ ನಮ್ಮ ತಾಯಿಯವರು ಮನನೊಂದು ಮಾನಸಿಕವಾಗಿ ತೀವ್ರವಾದ ಘಾಸಿಗೊಂಡು ಮಾನಸಿಕ ಆಘಾತದಿಂದ ಸಾವನ್ನಪ್ಪಿರುತ್ತಾರೆ. ಈ ರೀತಿಯ ಮಾನಸಿಕ ಆಘಾತಕ್ಕೆ ಒಳಗಾಗುವಂತೆ ಮಾಡಿರುವ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಷಾಷು, ವಿಷಯ ನಿರ್ವಹಕರಾದ ಉಷಾರಾಣಿ, ಮಮತಾ, ಅವರೇ ಕಾರಣರಾಗಿದ್ದಾರೆ. ನಮ್ಮ ತಾಯಿಯವರಿಗೆ ಬರಬೇಕಾದ ಸೌಲಭ್ಯಗಳಿಗಾಗಿ ನಾವು ಕಛೇರಿಗೆ ಮನವಿ ಮಾಡಲು ಹೋದಾಗ ಅಲ್ಲಿದ್ದ ವಾರ್ಡನ್ ಚಿದಾನಂದ ಎಂಬ ವ್ಯಕ್ತಿಯು ನಮ್ಮ ಮೇಲೆ ದೌರ್ಜನ್ಯ ವೆಸಗಿ ಕಚೇರಿಯಿಂದ ಹೊರತಳ್ಳಿದ್ದಾರೆ. ನಮ್ಮ ತಂದೆ ಮತ್ತು ತಾಯಿಯವರು ಸೇವೆ ಮಾಡಿದ ಕಚೇರಿಯಲ್ಲಿಯೇ ನಮಗೆ ದೌರ್ಜನ್ಯವಾಗಿರುವುದರಿಂದ ನಮಗೆ ಅತ್ಯಂತ ನೋವು ಉಂಟಾಗಿರುತ್ತದೆ. ನಿವೃತ್ತಿ ಹೊಂದಿದವರ ಮಕ್ಕಳಿಗೆ ಮತ್ತು ವಾರಸುದಾರರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೀಡುತ್ತಿರುವ ಗೌರವ ಇದೇನಾ ಎಂದು ಪ್ರಶ್ನಿಸುವಂತೆ ಮಾಡಿದೆ. ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ಎಂಬುವವರಿಗೆ ದೂರು ನೀಡಿದರೂ ಅವರು, ತಮ್ಮ ಕಚೇರಿಗೆ ನಾವು ಉಲ್ಲೇಖಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಕರೆಯಿಸಿ ಸೂಕ್ತ ರೀತಿಯಲ್ಲಿ ಅಡುಗೆ ಸಹಾಯಕಿ ಗೌರಮ್ಮನವರ ಕಡತಗಳನ್ನು ಕಮ್ಯೂಟೇಷನ್ ಸೌಲಭ್ಯ, ಉಪದಾನ, ಮತ್ತು ಪಿಂಚಣಿ ಸೌಲಭ್ಯದ ಕಾಗದ ಪತ್ರಗಳನ್ನು ಕಳುಹಿಸಿ ಎಂದು ಮೌಖಿಕವಾಗಿ ಹೇಳಿದರು. ಆದರೆ ಸತೀಶ್ ಅವರ ಮುಂದೆ ಮಾಡುತ್ತೇವೆ ಎಂದು ಸದರಿ ಸಿಬ್ಬಂದಿಯವರು ಒಪ್ಪಿಕೊಂಡವOತೆ ಮಾಡಿ, ನಂತರ ಕೆಲಸ ಮಾಡದೇ ನಿರ್ಲಕ್ಷö್ಯವಹಿಸುತ್ತಾ ನಮ್ಮ ತಾಯಿಯವರಿಗೆ ಬರಬೇಕಾದ ಸೌಲಭ್ಯಗಳ ಕಡತಗಳನ್ನು ತಪ್ಪು ತಪ್ಪಾಗಿ ಕಳುಹಿಸಿ, ಮತ್ತೆ ಮತ್ತೆ ಎ.ಜಿ. ಕಚೇರಿಯಿಂದ ವಾಪಸ್ ಬರುವಂತೆ ಮಾಡುತ್ತಿದ್ದರು. ಇದರಿಂದಾಗಿ ನಮ್ಮ ತಾಯಿಯವರು ಮನನೊಂದು, ಜೀವನ ನಿರ್ವಹಣೆಗೆ ಯಾವುದೇ ಪಿಂಚಣಿಯ ಬಾರದೆ ಇರುವುದರಿಂದ ಕೊರಗೀ ಕೊರಗಿ, ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿರುತ್ತಾರೆ. ಈ ಸಾವಿಗೆ ಸತೀಶ್ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕಾರಣೀಭೂತರಾಗಿರುತ್ತಾರೆ.
ಮತ್ತೊಂದು ನೋವಿನ ಸಂಗತಿ ಏನೆಂದರೆ, ನಮ್ಮ ತಾಯಿಯವರಿಗೆ ಕೇವಲ ಸಹಿ ಮಾಡಲು ಮಾತ್ರ ಬರುತ್ತಿತ್ತು ಎಂದು ಹೇಳಿದ್ದು, ಆದರೆ ನಮ್ಮ ತಾಯಿಯವರಿಂದ ಕಮ್ಯೂಟೇಷನ್ ಸೌಲಭ್ಯ ಪಡೆಯಲು ಇಚ್ಚಿಸಿರುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿರುವುದು ಕೂಡ ಖಚಿತವಾಗಿದೆ. ಈ ಪತ್ರವನ್ನು ಎ.ಜಿ.ಕಚೇರಿಗೆ ಕಳುಹಿಸಬೇಡಿ ಎಂದು ಹೇಳಿದ್ದರೂ ಸಹ ಸಂಬOಧಿಸಿದ ಅಧಿಕಾರಿಗಳು ಮತ್ತು ವಿಷಯ ನಿರ್ವಹಕರು ತಪ್ಪಾಗಿರುವ ದಾಖಲೆಗಳ ಕಡತಗಳನ್ನು ಎ.ಜಿ.ಕಚೇರಿಗೆ ರವಾನಿಸಿರುತ್ತಾರೆ.
ಅಲ್ಲದೆ ಮಹಾಲೇಖಪಾಲರು, ಬೆಂಗಳೂರು ಇವರು ನಿವೃತ್ತಿ ಸೌಲಭ್ಯಗಳ ಆದೇಶ ಹೊರಡಿಸಿದ್ದು, ಸಿಬ್ಬಂದಿಯವರು ಕಮ್ಯೂಟೇಷನ್ ಪಡೆಯಲು ಇಚ್ಛಿಸದೇ ಇರುವುದರಿಂದ ಕಮ್ಯೂಟೇಷನ್ ಸೌಲಭ್ಯ ಆದೇಶ ನೀಡಲಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ಕಾರಣ ಸಂಬOಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರಣರಾಗಿದ್ದಾರೆ ಎಂದು ಹೇಳಲು ಬಯಸುತ್ತೇವೆ.
ಇದು ಕಣ್ತಪ್ಪಿನಿಂದಾಗಿ ನಾವು ಸರಿ ಮಾಡಿ, ಮತ್ತೆ ಕಮ್ಯೂಟೇಷನ್ ಸೌಲಭ್ಯ ಬರುವಂತೆ ಮಾಡುತ್ತೇವೆ ಎಂದು ಪ್ರತಿ ಸಲವೂ ನಾವು ಭೇಟಿಯಾದಾಗ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಸಬೂಬು ಹೇಳುತ್ತಾ ಬಂದರು. ಇದರ ಪರಿಣಾಮ ನಮ್ಮ ತಾಯಿಯವರು ದಿನನಿತ್ಯ ಮಾನಸಿಕವಾಗಿ ನೊಂದುಕೊಳ್ಳುತ್ತಾ ಹೋದರು. “ನಾನು ಮಾಡಿದ ಕಚೇರಿಯಲ್ಲಿ ನನಗೆ ನ್ಯಾಯ ಸಿಗಲಿಲ್ಲ’’ ಎನ್ನುತ್ತಿದ್ದರು. ಹೀಗೆ ಪ್ರತಿನಿತ್ಯ ನೋವು ಅನುಭವಿಸುತ್ತಲೇ ಅನಾರೋಗ್ಯದಿಂದ ಬಳಲಿ ದಿನಾಂಕ: ೧೫.೦೯.೨೦೨೩ರಂದು ನಿಧನರಾದರು ಹೇಳಲು ವಿಷಾದಿಸುತ್ತೇವೆ. ನಮ್ಮ ತಾಯಿಯವರು ನಿಧನರಾದ ಮೇಲೆ ದಿನಾಂಕ: ೨೫.೦೬.೨೦೨೪ರಂದು ಬಳ್ಳಾರಿಯ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೆಶಕರು ಗ್ರೇಡ್-೧ ಇವರು ಮಹಾಲೇಖಪಾಲರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ “ಸದರಿ ನೌಕರರು ಅನಾರೋಗ್ಯದಿಂದ ಬಳಲುತ್ತಿದ್ದು, ಆರ್ಥಿಕವಾಗಿ ತುಂಬಾ ತೊಂದರೆ ಉಂಟಾಗಿರುವುದರಿOದ ಸದರಿ ಮೊತ್ತವನ್ನು ಸರ್ಕಾರದ ಹಂತದಲ್ಲಿಯೇ ಮನ್ನಾ ಮಾಡಲು ಅವಕಾಶವಿದ್ದಲ್ಲಿ ಮನ್ನಾ ಮಾಡಿ ಕಮ್ಯೂಟೇಷನ್ ಮೊತ್ತವನ್ನು ಮಂಜೂರು ಮಾಡಲು ಕೋರಲಾಗಿತ್ತು’’ ಎಂದು ಹೇಳಿದ್ದು, ನೋಡಿದರೆ ಒಬ್ಬ ನೌಕರರು ಮೃತಪಟ್ಟನಂತರವೂ ಪತ್ರವ್ಯವಹಾರದಲ್ಲಿ ಇನ್ನೂ ಬದುಕಿದ್ದಾರೆ. ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿದ್ದಾರೆ ಎಂದು ಹೇಳಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ನಮ್ಮ ತಾಯಿಯವರು ನಿಧನರಾದ ನಂತರವೂ ಸಂಬOಧಿಸಿದ ಅಧಿಕಾರಿಗಳು ಮತ್ತು ವಿಷಯ ನಿರ್ವಹಕರು ಕೆಲವು ಪತ್ರಗಳಲ್ಲಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಗೌರಮ್ಮನವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಪತ್ರವ್ಯವಹಾರ ಮಾಡಿರುತ್ತಾರೆ. ಹೀಗೆ ಸಂಬOಧಿಸಿದ ಅಧಿಕಾರಿಗಳು ನಮ್ಮ ತಾಯಿಯವರಿಗೆ ಈ ರೀತಿ ಅನ್ಯಾಯ ಮಾಡಲು ನಮ್ಮ ತಾಯಿಯವರು ಮಾಡಿದ ಅಪರಾಧವಾದರೂ ಏನು? ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಬಡ ಮಕ್ಕಳಿಗೆ ಅಡುಗೆ ಮಾಡಿ, ಊಟ ಬಡಿಸಿದ್ದು ತಪ್ಪೇ? ಹೇಳಿ ಸಾರ್. ನಮ್ಮ ತಾಯಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾವು ಲಕ್ಷಾಂತರ ರೂ.ಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಖರ್ಚು ಮಾಡಿದೆವು. ಎಲ್ಲಿಯೂ ನಮಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯ ಸಹಕಾರ ದೊರೆಯಲಿಲ್ಲ. ನಮ್ಮ ತಾಯಿ ಸರ್ಕಾರದಲ್ಲಿ ಕೆಲಸ ಮಾಡಿದ್ದು ತಪ್ಪೇ ಎಂದೆನಿಸುತ್ತದೆ. ನಮ್ಮ ತಾಯಿಯವರಿಗೆ ಆದ ಈ ರೀತಿಯ ಅನ್ಯಾಯ, ನಿರ್ಲಕ್ಷö್ಯ ಯಾರಿಗೂ ಆಗಬಾರದು. ಆದ್ದರಿಂದ ಈಗ ನಮ್ಮ ತಾಯಿಯವರಿಗೆ ಕಮ್ಯೂಟೇಷನ್ ಸೌಲಭ್ಯದ ಮೊತ್ತ, ಉಪದಾನ, ಪಿಂಚಣಿ ಸೌಲಭ್ಯವನ್ನು ನೀಡಲು ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪು ಮಾಡಿರುವ ಅಧಿಕಾರಿಗಳು ಮತ್ತು ವಿಷಯ ನಿರ್ವಹಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕೆಂದು ಹಾಗೂ ಇದುವರೆಗೆ ತಡೆ ಹಿಡಿದಿರುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಿಕೊಡಬೇಕೆಂದು ಕೋರುತ್ತೇವೆ. ಇಲ್ಲವಾದಲ್ಲಿ ನಾವೋ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಸಹ ತಮ್ಮ ಅವಗಾಹನೆಗೆ ತರಬಯಸುತ್ತೇವೆ.
ವಂದನೆಗಳೊOದಿಗೆ,
ತಮ್ಮ ವಿಶ್ವಾಸಿಗಳು: ಪತ್ರವ್ಯವಹಾರಕ್ಕಾಗಿ ವಿಳಾಸ:
ಟಿ.ಲಕ್ಷö್ಮಣ ತಂದೆ ದಿ|| ತಿಮ್ಮಪ್ಪ ಜಿ.
೨೨ನೇ ವಾರ್ಡ್, ಭಗತ್ ಸಿಂಗ್ ನಗರ,
ರಾಜೀವ್ ಗಾಂಧಿ ಮಾರ್ಗ,
ಕಾಲುವೆ ಹತ್ತಿರ, ತಾಳೂರು ರಸ್ತೆ,
ಬಳ್ಳಾರಿ ೫೮೩೧೦೩, ಮೊ.೮೯೫೧೮೫೭೭೦೦
ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿ ಈ ಕೆಳಗಿನ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಮಾನ್ಯ ಶ್ರೀ ಹೆಚ್.ಸಿ. ಮಹಾದೇವಪ್ಪ
ಸನ್ಮಾನ್ಯ ಸಮಾಜಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು
ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು.
ಮಾನ್ಯ ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬಳ್ಳಾರಿ
ಮಾನ್ಯ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತರು, ಬಳ್ಳಾರಿ ಜಿಲ್ಲೆ. *ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆ ಇಂದ ಹಿಡಿದು ಪ್ರತಿಯೊಂದು ಇಲಾಖೆಗಳಿಗೆ ದೂರು ನೀಡಿದರು ಉತ್ತರ ಸಿಗದ ಕಾರಣ, ನಾವು ನಮ್ಮ ತಾಯಿಯ ಮರಣದ ದುಃಖವನ್ನು ನಿಮ್ಮ ಮುಂದೆ ವ್ಯಕ್ತಪಡಿಸುತಿದ್ದೇವೆ. ದಯವಿಟ್ಟು ನನಗೆ ನ್ಯಾಯ ಕೊಡಿ, 29 ವರ್ಷಗಳ ಕಾಲ ಅಡಿಗೆ ಸಹಾಯಕಿಯಾಗಿ ಸೇವೆ ಮಾಡಿದ್ದಾರೆ. ನಿವೃತ್ತಿ ಹೊಂದಿದ ದುಡ್ಡಿನ ಆಸೆಯ ಕಟ್ಟಿಕೊಂಡು ನಮ್ಮ ತಾಯಿ ಜೀವವನ್ನೇ ಬಿಟ್ಟಿದ್ದಾಳೆ. ಎಂದು ಟಿ ಲಕ್ಷ್ಮಣ್ ಅವರು ಮಾಧ್ಯಮ ರೊಟ್ಟಿಗೆ ಹಂಚಿಕೊಂಡಿದ್ದಾರೆ….
ವರದಿ..ಕಾಶಪ್ಪ ಸಂಡೂರು ಗ್ರಾಮಾಂತರ**
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030