ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೇಕಾಬಿಟ್ಟಿ, ಪರವಾನಿಗೆ ಇಲ್ಲದೆ ಇಟ್ಟುಕೊಂಡಿರುವ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ. ” ಬಜೆಟ್ ಪೂರ್ವಭಾವಿ ಸಬೇಯಲ್ಲಿ ಮನವಿ”ದಿನಾಂಕ 30.11.2024ರಂದು ಸಂಡೂರ್ ಪುರಸಭೆ ಕಾರ್ಯಾಲಯದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಈ ಬಜೆಟ್ ಪೂರ್ವಭಾವಿ ಸಭೆಗೆ ಪ್ರಗತಿಪರ ಸಂಘಟನೆಗಳು ಸಂಘ ಸಂಸ್ಥೆಗಳು ಭಾಗವಹಿಸಿದ್ದು ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಯದ ಜಯಣ್ಣ ಮಾತನಾಡಿ ಪಟ್ಟಣದ ಒಳಗಡೆ ಇರುವ ಪೂರ್ವ ಪ್ರಾಥಮಿಕ ಸಮಸ್ಯೆಗಳ ಬಗ್ಗೆ ಆಲಿಸಿದರು ಸಂಡೂರ ಅಭಿವೃದ್ಧಿಯ ಬಗ್ಗೆ ಮೊದಲು ಬಜೆಟ್ ನಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಮತ್ತು ಪುರಸಭೆಯ ಅಧ್ಯಕ್ಷರಾದಂತಹ ಸಿರಾಜ್ ಹುಸೇನ್ ಮಾತನಾಡಿ ರಸ್ತೆ ಬದಿಯಲ್ಲಿ ಬೇಕಾಬಿಟ್ಟ ಪರವನಿಗೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಅಂಗಡಿಗಳನ್ನ ಇಟ್ಟುಕೊಂಡಿರುವ ಪ್ರತಿಯೊಂದು ಅಂಗಡಿಯನ್ನು ತೆರವುಗೊಳಿಸಬೇಕು. ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗಬಾರದು. ಮತ್ತು ಈ ಹಿಂದೆ ಅರ್ಧಕ್ಕೆ ನಿಲ್ಲಿಸಿರುವ ಪಾರ್ಕಗಳನ್ನ ಈ ಒಂದು ಮುಂದಿನ ಬಜೆಟ್ ನಲ್ಲಿ ಅವುಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಹಾಗೂ ಪಟ್ಟಣದ ಎಲ್ಲಾ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯದ ದಾಯಕ ದುಷ್ಠಿಯಿಂದ, ಪೌರಕಾರ್ಮಿಕರು, ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು, ಎಂದು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ, ಮುಖ್ಯ ಅಧಿಕಾರಿ ಜಯಣ್ಣ, ಅಧ್ಯಕ್ಷರು. ಸಿರಾಜು ಹುಸೇನ್, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಭಾಗವಹಿಸಿದ್ದವು…
ವರದಿ…ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030