ಶಿವಮೊಗ್ಗ ರಂಗಾಯಣದಲ್ಲಿ ‘ನಾಟಕ ಅವಲೋಕನ ಕಾರ್ಯಾಗಾರ…!!!

Listen to this article

ಶಿವಮೊಗ್ಗ ರಂಗಾಯಣದಲ್ಲಿ ‘ನಾಟಕ ಅವಲೋಕನ ಕಾರ್ಯಾಗಾರ’ವನ್ನು ಇಂದು ದಿನಾಂಕ:24-10-2024 ರಂದು ರಂಗನಿರ್ದೇಶಕರಾದ ಶ್ರೀ ನಟರಾಜ್ ಹೊನ್ನವಳ್ಳಿ ಇವರು ‘ಗುಣಮುಖ’ ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣ, ಶಿವಮೊಗ್ಗದ ನಿರ್ದೇಶಕರಾದ ಶ್ರೀ ಪ್ರಸನ್ನ ಡಿ ಸಾಗರ ಇವರು ವಹಿಸಿದ್ದರು. ಅತಿಥಿಗಳಾಗಿ ಶ್ರೀ.ಕೊಟ್ರಪ್ಪ ಹಿರೇಮಾಗಡಿ, ರಂಗಕರ್ಮಿಗಳು ಹಾಗೂ ನಿಕಟಪೂರ್ವ ಅಧ್ಯಕ್ಷರು, ಕಲಾವಿದರ ಒಕ್ಕೂಟ, ಶಿವಮೊಗ್ಗ ಇವರು ಆಗಮಿಸಿದ್ದರು. ಡಾ.ಶೈಲಜಾ ಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ, ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಪ್ರೊ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಹಾಗೂ ನಿರ್ದೇಶಕರು, ನಾಟಕ ಅವಲೋಕನ ಕಾರ್ಯಾಗಾರ ಮತ್ತು ಡಾ.ಲವ ಜಿ.ಆರ್., ಮುಖ್ಯಸ್ಥರು, ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ ಹಾಗೂ ನಾಟಕ ಅವಲೋಕನ ಕಾರ್ಯಾಗಾರದ ಸಂಚಾಲಕರು ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend