ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ರೈತ ದಿನಾಚರಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ, ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ (ರಿ), ಭದ್ರಾವತಿಯಲ್ಲಿ ದಿನಾಂಕ 23/12/2024 ರ ಸೋಮವಾರದಂದು ರೈತ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶ್ರೀಯುತ. ಎ. ಪ್ರಕಾಶ್. ಅರಳಿಹಳ್ಳಿ ಹಾಗೂ ಶ್ರೀಯುತ. ಜಿ. ಗೋಪಾಲ್ ತಳ್ಳಿಕಟ್ಟೆ, ಭದ್ರಾವತಿ ಇವರುಗಳಿಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸಿದ್ಬಸಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ ರೈತರು ಬೆಳೆಗಳನ್ನ ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸನ್ಮಾನವನ್ನು ಸ್ವೀಕರಿಸಿದ ಶ್ರೀಯುತ. ಪ್ರಕಾಶ್ ರವರು ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದ್ದು ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಪಶು ಪಕ್ಷಿ ಮನುಜ ಕುಲಕ್ಕೆ ಎಂದು ತಿಳಿಸಿದರು. ಇನ್ನೋರ್ವ ಸನ್ಮಾನಿತರಾದ ಶ್ರೀಯುತ. ಗೋಪಾಲ್ ರವರು ಕೃಷಿ ಚಟುವಟಿಕೆಯ ನೈಜ ಚಿತ್ರಣವನ್ನು ಕಟ್ಟಿಕೊಟ್ಟು ಕೃಷಿಯಲ್ಲಿನ ಶ್ರಮ, ಕಷ್ಟ ಸಾಧ್ಯತೆಗಳನ್ನು ಒತ್ತಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಬಿ. ಎಲ್.ರಂಗಸ್ವಾಮಿ ರವರು ವಹಿಸಿಕೊಂಡಿದ್ದರು. ದಿನದ ವಿಶೇಷತೆಯನ್ನ ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ. ಎಸ್. ಕೆ. ಮೋಹನ್, ಹಾಗೂ ನಿರ್ದೇಶಕರುಗಳಾದ ಶ್ರೀಯುತ. ಚೆನ್ನಯ್ಯ ಮತ್ತು ಶ್ರೀಯುತ. ಪುಟ್ಟಲಿಂಗ ಮೂರ್ತಿ ಮಾತನಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀಯುತ. ರಮೇಶ್, ಶ್ರೀಯುತ. ಜನಾರ್ದನ್, ಶ್ರೀಯುತ. ಶ್ರೀನಿವಾಸ ಬಾಗೋಡಿ, ಶ್ರೀಯುತ. ರಮೇಶ್, ಆಡಳಿತ ಅಧಿಕಾರಿಗಳಾದ ಡಾ. ರಾಕೇಶ್. ಎಸ್. ಪಿ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ. ಶಿವಲಿಂಗೇಗೌಡ ಹಾಗೂ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಹೇಮಾವತಿ, ಶ್ರೀಯುತ ರೇಣುಕಪ್ಪ, ಶ್ರೀಮತಿ ಚೈತ್ರ, ಶ್ರೀಯುತ ಕಿರಣ್ ಕುಮಾರ್ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ನೇತ್ರಾವತಿ ಸರ್ವರನ್ನ ಸ್ವಾಗತಿಸಿದರು, ಶ್ರೀಮತಿ ರೇವತಿ ಅತಿಥಿಗಳನ್ನು ಪರಿಚಯಿಸಿದರು, ಶ್ರೀಯುತ ರೇಣುಕಪ್ಪ ನಿರೂಪಿಸಿದರು, ಶ್ರೀಯುತ. ಅಲಿಮಿಯ ಎಲ್ಲರನ್ನು ವಂದಿಸಿದರು….
ವರದಿ, ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030