ಅಖಿಲ ಕರ್ನಾಟಕ ರೈತ ಸಂಘ ರಾಯಚೂರು ಜಿಲ್ಲಾ ಘಟಕದಿಂದ ವಿಶ್ವ ರೈತ ದಿನಾಚರಣೆ ಆಚರಣೆ…!!!

Listen to this article

ಅಖಿಲ ಕರ್ನಾಟಕ ರೈತ ಸಂಘ ರಾಯಚೂರು ಜಿಲ್ಲಾ ಘಟಕದಿಂದ ವಿಶ್ವ ರೈತ ದಿನಾಚರಣೆ ಆಚರಣೆ…
ರಾಯಚೂರು…
ಅಖಿಲ ಕರ್ನಾಟಕ ರೈತ ಸಂಘ ಬೆಂಗಳೂರು ಹಾಗೂ ರಾಯಚೂರು ಜಿಲ್ಲಾ ಘಟಕದಿಂದ ವಿಶ್ವ ರೈತ ದಿನಾಚರಣೆ ದಿನಾಂಕ 23 ಸೋಮವಾರ ಬೆಳಗ್ಗೆ 11 ಗಂಟೆಗೆ ಏಮ್ಸ್ ಹೋರಾಟ ಸಮಿತಿ ವೇದಿಕೆ, ಜಿಲ್ಲಾ ಕ್ರೀಡಾಂಗಣ ರಾಯಚೂರಿನಲ್ಲಿ ಆಚರಿಸಿದರು.ಇದರ ಅಧ್ಯಕ್ಷತೆಯನ್ನು ಶ್ರೀ ಸಾಜೀದ್ ಹುಸೇನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ರಾಯಚೂರ್ ಜಿಲ್ಲಾಧ್ಯಕ್ಷರು ವಹಿಸಿದ್ದರು. ಈ ಸಂದರ್ಭದಲ್ಲಿ ಏಮ್ಸ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಕಳಸ್, ಅಶೋಕ್ ಕುಮಾರ್ ಜೈನ್ ರೈತ ಮುಖಂಡರಾದ ಶ್ರೀಮತಿ ರೂಪಾ ಶ್ರೀನಿವಾಸ್ ನಾಯಕ್ ಹಾಗೂ ರೈತ ಮುಖಂಡರು ಹಾಜರಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು.
ಬಸವರಾಜ್ ಕಳಸ ಹಾಗೂ ಶ್ರೀಮತಿ ರೂಪ ಶ್ರೀನಿವಾಸ್ ನಾಯಕ ಅವರು ಮಾತನಾಡಿ, ಇಂದಿನ ರೈತರ ಸ್ಥಿತಿಗತಿ ಹಾಗೂ ರೈತರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಮತಿ ರೂಪ ಶ್ರೀನಿವಾಸ್ ನಾಯಕ್, ಶ್ರೀ ಅಶೋಕ್ ಕುಮಾರ್ ಜೈನ್ ಡಾ. ಬಸವರಾಜ್ ಕಳಸ, , ಎಸ್. ಮಾರೆಪ್ಪ ವಕೀಲರು, ಜಗದೀಶ ಪೂರ್ತಿಪಲ್ಲಿ , ಗುರುರಾಜ ಕುಲಕರ್ಣಿ, ಎಸ್. ತಿಮ್ಮಾರೆಡ್ಡಿ, ಜಾನವೆಸ್ಲಿ, ಶಾಂತಗೌಡ ಸುಬೇದಾರ್, ಕಾಮರಾಜ ಪಾಟೀಲ್, ವಿನಯ್ ಚಿತ್ರಗಾರ, ವೆಂಕಯ್ಯ ಶೆಟ್ಟಿ, ರಾಘವೇಂದ್ರ ಗೌಡ್, ಅನ್ವರ್ ಪಾಷಾ, ಅಜೀಜ್, ಸುಲೋಚನಾ ಸಂಘ, ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಸಾಜೀದ ಹುಷೆನ, , ಮಿನಾಕ್ಷಿ ಮುನಿಯಪ್ಪ, ಈರಮ್ಮ, ಮಂಜುಳಾ ಬಡಿಗೇರ್, ಪಲ್ಲವಿ , ಜನಾರ್ಧನ ಗೌಡ, ವೆಂಕಟೇಶ ನಾಯಕ ಅಸ್ಕಿಹಾಳ, ಶಿವಶೇರಣ ಸಾಹುಕಾರ, ಕೀಶನರಾವ, ಮೆಹಬೂಬ್ ಸಾಬ್, ಬಷಿರ್, ಆರೂಣ ರಷಿದ, ಮೌಲಾಸಾಬ, ಜಿಂದಪ್ಪ, ಶಿವಪ್ಪ, ಜಂಗ್ಲಿ ಪಿರ, ಬಾಬು, ನಾಗರಾಜ್ ಗೌಡ,ವಿನಾಯಕ, ಮುಂತಾದವರು ಭಾಗವಹಿಸಿದ್ದರು…

ವರದಿ. ನಾಗರಾಜ್ ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend