956ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ ಸತ್ಯಾಗ್ರಹ…!!!

Listen to this article

ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 956ನೇ ದಿನಕ್ಕೆ ಕಾಲಿಟ್ಟಿದೆ…
ಇಂದು ರಾಷ್ಟ್ರ ರೈತ ದಿನಾಚರಣೆ ಅಂಗವಾಗಿ ವಿವಿಧ ರೈತಪರ ಸಂಘಟನೆಗಳು ಏಮ್ಸ್ ಹೋರಾಟ ವೇದಿಕೆಯಲ್ಲಿ ಸಮಾವೇಶಗೊಳ್ಳಲಾಗಿತ್ತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಾಜಿದ್ ರೂಪ ಶ್ರೀನಿವಾಸ್ ನಾಯಕ್ ಮುಂತಾದವರು ರೈತರನ್ನು ಉದ್ದೇಶಿಸಿ ಪ್ರಸ್ತುತ ರೈತರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು.
ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ 1000 ದಿನ ಸಮೀಪಿಸುತ್ತಿದ್ದ ಏಮ್ಸ್ ಹೋರಾಟಕ್ಕೆ , ಗಮನ ನೀಡದ ಕೇಂದ್ರ ಸರ್ಕಾರವು ಕುಂಭಕರ್ಣ ನಿದ್ದೆಯಲ್ಲಿದ್ದೆ. ರಾಜ್ಯ ಸರಕಾರವು ರಾಯಚೂರಿನಲ್ಲೆಯೇ ಏಮ್ಸ್ ಸ್ಥಾಪಿಸಲು ಶಿಫಾರಸು ಪತ್ರಗಳನ್ನು ನೀಡಿದರು, ಉತ್ತರಿಸದ ಕೇಂದ್ರ ಸರ್ಕಾರದ ನೀಲುವನ್ನು ಖಂಡಿಸಿ, ರಾಯಚೂರಿನಲ್ಲಿಯೇ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ. ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಎಸ್. ಮಾರೆಪ್ಪ ವಕೀಲರು, ಜಗದೀಶ ಪೂರ್ತಿಪಲ್ಲಿ , ಗುರುರಾಜ ಕುಲಕರ್ಣಿ, ಎಸ್. ತಿಮ್ಮಾರೆಡ್ಡಿ, ಜಾನವೆಸ್ಲಿ, ಶಾಂತಗೌಡ ಸುಬೇದಾರ್, ಕಾಮರಾಜ ಪಾಟೀಲ್, ವಿನಯ್ ಚಿತ್ರಗಾರ, ವೆಂಕಯ್ಯ ಶೆಟ್ಟಿ, ರಾಘವೇಂದ್ರ ಗೌಡ್, ಅನ್ವರ್ ಪಾಷಾ, ಅಜೀಜ್, ಸುಲೋಚನಾ ಸಂಘ, ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಸಾಜೀದ ಹುಷೆನ, ರೂಪಾ ಶ್ರೀನಿವಾಸ ನಾಯಕ, ಮಿನಾಕ್ಷಿ ಮುನಿಯಪ್ಪ, ಈರಮ್ಮ, ಮಂಜುಳಾ ಬಡಿಗೇರ್, ಪಲ್ಲವಿ , ಜನಾರ್ಧನ ಗೌಡ, ವೆಂಕಟೇಶ ನಾಯಕ ಅಸ್ಕಿಹಾಳ, ಶಿವಶೇರಣ ಸಾಹುಕಾರ, ಕೀಶನರಾವ, ಮೆಹಬೂಬ್ ಸಾಬ್, ಬಷಿರ್, ಆರೂಣ ರಷಿದ, ಮೌಲಾಸಾಬ, ಜಿಂದಪ್ಪ, ಶಿವಪ್ಪ, ಜಂಗ್ಲಿ ಪಿರ, ಬಾಬು ಕಸ್ತೂರಿ ಕರ್ನಾಟಕ ಯುವ ಕಾರ್ಮಿಕ ಸೇನೆ (ರಿ) ಜಿಲ್ಲಾಧ್ಯಕ್ಷರಾದ ನಾಗರಾಜ್ ಗೌಡ,ವಿನಾಯಕ, ಮುಂತಾದವರು ಭಾಗವಹಿಸಿದ್ದರು…

ವರದಿ. ನಾಗರಾಜ್ ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend