ಕೊನೆಗೂ ಯತ್ನಾಳಗೆ ಸೋಕಾಸ್ ನೋಟಿಸ್ ನೀಡಿದ ಬಿಜೆಪಿ ಕೇಂದ್ರ ಶಿಸ್ತು ಸಮಿತಿ…
ನವದೆಹಲಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೇ ನಿನ್ನೆ ರಾತ್ರಿ ಕೇಂದ್ರ ಬಿಜೆಪಿ ಶೀಸ್ತು ಸಮಿತಿ ನೋಟಿಸ್ ನೀಡಿದೆ. ಹತ್ತು ದಿನಗಳ ಒಳಗೆ ಈ ನೋಟೀಸ್ಗೆ ಯತ್ನಾಳ್ ಉತ್ತರ ನೀಡಬೇಕಾಗಿದೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪನವರ ಬಗ್ಗೆ ಯತ್ನಾಳ್ ಹಾಗೂ ಸಂಗಡಿಗರು ದಿನ ಬೆಳಗಾದರೇ ಟೀಕಿಸುತ್ತಿದ್ದರು. ಇದರಿಂದ ಬಿಜೆಪಿ ಪಕ್ಷಕ್ಕೆ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ತಲೆ ನೋವಾಗಿ ಪರಿಣಮಿಸಿತ್ತು, ಸುಖ ಸುಮ್ಮನೆ ಈ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದಂತ ಧೀಮಂತ ನಾಯಕ ಬಡವರ ಬಂಧು ಬಿಎಸ್ ಯಡಿಯೂರಪ್ಪನವರ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡುತ್ತಿದ್ದ. ಹಾಗೂ ಬಿ ವೈ ವಿಜಯೇಂದ್ರ ಅವರು ತಮ್ಮ ಸ್ವಾಮರ್ಥ್ಯದಿಂದ ಅಧ್ಯಕ್ಷ ಪದವಿ ಅಲಂಕರಿಸಿದರು. ವಿನಾ ತಮ್ಮ ತಂದೆಯ ಹೆಸರು ಹೇಳಿಕೊಂಡು ಅವರು ಅಧ್ಯಕ್ಷ ಪದವಿಯನ್ನು ಪಡೆದಿಲ್ಲ ಬಿಜೆಪಿ ಹೈಕಮಾಂಡ್ ಬಿ ವೈ ವಿಜಯೇಂದ್ರ ಅವರ ಸಂಘಟನಾ ಚತುರತೆ ಹಾಗೂ ಕೆಲವು ಗೆಲ್ಲದಂತ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಇದನ್ನೆಲ್ಲಾ ಅರಿತ ಕೇಂದ್ರ ಬಿಜೆಪಿಯು ವಿಜಯೇಂದ್ರ ಅವರಿಗೆ ಅಧ್ಯಕ್ಷ ಪದವಿಯನ್ನು ನೀಡಿದೆ.ಇದನ್ನು ಅರಿಯದೇ ಯತ್ನಾಳ್ ಸುಖ ಸುಮ್ಮನೆ ಆದಿ ಬೀದಿಯಲ್ಲಿ ಟೀಕೆಯನ್ನು ಮಾಡುತ್ತಿದ್ದರು.ಇದನ್ನೆಲ್ಲಾ ಗಮನಿಸುತ್ತಿದ್ದ ಬಿಜೆಪಿ ಹೈಕಮಾಂಡ್ ಯತ್ನಾಳ್ ಗೇ ನೋಟಿಸ್ ನೀಡಿದೆ…
ವರದಿ, ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030