ಗ್ರಾಮಆಡಳಿತಾಧಿಕಾರಿಗಳ ಬೇರೆ ಕಡೆ ನಿಯೋಜನೆ ರದ್ದುಪಡಿಸಲು: ಯಲ್ಲಪ್ಪ ಉಟಕನೂರು ಆಗ್ರಹ…
ಮಾನ್ವಿ:
ತಾಲೂಕಿನ ತಡಕಲ್ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಕು.ಸುಶೀಲಾ ಮತ್ತು ಉದ್ಘಾಳ್ ಗ್ರಾಮದಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಇವರನ್ನು ಮೂಲ ಕರ್ತವ್ಯದ ಸ್ಥಳದಿಂದ ಏಕಾಏಕಿ ಮೂಲ ಕರ್ತವ್ಯ ಸ್ಥಳದಿಂದ ಬೇರೆ ಕಡೆಗೆ ನಿಯೋಜನೆ ಮಾಡಿದ್ದು ಈ ಕೂಡಲೇ ನಿಯೋಜನೆ ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಸಿ.ಪಿ.ಐ(ಎಂ.ಎಲ್) ಮಾನ್ವಿ ತಾಲೂಕ ಸಮಿತಿ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು ಆಗ್ರಹಿಸಿದ್ದಾರೆ.
ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ನೀಡಿರುವ ಮನವಿಯಲ್ಲಿ ತಡಕಲ್ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಕು.ಸುಶೀಲಾ ಮತ್ತು ಉದ್ಬಾಳ್ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಇವರನ್ನು ಮೂಲ ಕರ್ತವ್ಯದ ಸ್ಥಳದಿಂದ ಬೇರೆಕಡೆ ನಿಯೋಜನೆ ಮಾಡಿದ್ದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಬಹಳ ತೊಂದರೆಯಾಗಿರುತ್ತದೆ.
ಇಬ್ಬರು ಅಧಿಕಾರಿಗಳು ತಮ್ಮಗಳ ವೃತ್ತದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲಕರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇಲೆ ಕರ್ತವ್ಯಲೋಪ ಮತ್ತು ನಿಷ್ಕಾಳಜಿಯ ಆರೋಪಗಳು ಇದುವರೆಗೂ ಇರುವುದಿಲ್ಲ. ಎಲ್ಲರ ಮೆಚ್ಚುಗೆಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳನ್ನು ಬೇರೆ ಕಡೆಗೆ ನಿಯೋಜನೆ ಮಾಡಿದ್ದನ್ನು ಕೂಡಲೇ ರದ್ದುಪಡಿಸಿ, ಈ ಇಬ್ಬರು ಅಧಿಕಾರಿಗಳನ್ನು ಮೂಲಕರ್ತವ್ಯದ ಸ್ಥಳಕ್ಕೆ ನಿಯೋಜನೆ ಮಾಡಿ ಸಾರ್ವಜನಿಕರಿಗೆಮತ್ತು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಇಬ್ಬರು ಅಧಿಕಾರಿಗಳನ್ನು ಮೂಲಕರ್ತವ್ಯದ ಸ್ಥಳಕ್ಕೆ ಮರಳಿ ನಿಯೋಜನೆ ಮಾಡದೇ ಹೋದಲ್ಲಿ ಸಿಪಿಐ ಎಂಎಲ್ ಸಂಘಟನೆವತಿಯಿಂದಪೋತ್ನಾಳ್ ಗ್ರಾಮದ ಸಿಂಧನೂರು ರಾಯಚೂರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ರಸ್ತಾ ರೋಖೋ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಯಲ್ಲಪ್ಪ ಉಟಕನೂರು ಎಚ್ಚರಿಸಿದ್ದಾರೆ.
ಈ ವೇಳೆ ಸಿಪಿಐ ಎಂಎಲ್ ಸದಸ್ಯರಾದ ಪ್ರಕಾಶದೋತರಬಂಡಿ, ಶೇಖರಪ್ಪಖರಾಬದಿನ್ನಿ, ರಾಮಕೃಷ್ಣ ಕರಡಿಗುಡ್ಡ, ಪ್ರಕಾಶ ತಡಕಲ್, ಅಮರಪ್ಪ ಉದ್ಘಾಳ್, ಬಸವಲಿಂಗಪ್ಪ ಉಟ ಕನೂರು, ದುರುಗಪ್ಪ ಬೆಳವಾಟ, ಅಮರಪ್ಪ ಉದ್ದಾಳ, ಅಮರೇಶನಾಯಕ ಸೇರಿದಂತೆ ಇನ್ನಿತರರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030