ಇಂದು ಡೊಣಮರಡಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆ..
ಮಸ್ಕಿ: ತಾಲೂಕಿನ ಡೋಣಮರಡಿ ಗ್ರಾಮದಲ್ಲಿ ಪರಮಪೂಜ್ಯ ಸಿದ್ದರಾಮನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಡೊಣಮರಡಿ ಗ್ರಾಮದ ಗ್ರಾಮಸ್ಥರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು. ಈ ಸಭೆಯಲ್ಲಿ
ಕನಕಗುರುಪೀಠ ತಿಂಥಣಿ ಬ್ರಿಜ್ ನಲ್ಲಿ ನಡೆಯಲಿರುವ ಹಾಲುಮತ ಸಂಸ್ಕೃತಿ ವೈಭವ 2025 ಜನವರಿ 12, 13 & 14 ರ ಕಾರ್ಯಕ್ರಮದಲ್ಲಿ ಒಂದು ದಿನ ದಾಸೋಹ ಸೇವೆ ಡೊಣಮರಡಿ ಗ್ರಾಮದ
ಹಾಲುಮತ ಬಂಧುಗಳು ನಡೆಸಿಕೊಡಲು ಒಪ್ಪಿಕೊಂಡು, ಪರಮ ಪೂಜ್ಯ ಸಿದ್ದರಾಮಾನಂದ ಮಹಾಸ್ವಾಮಿಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು, ಈ ಒಂದು ಧಾರ್ಮಿಕ ಸಭೆಯಲ್ಲಿ ಬಸವರಾಜ್ ಪಾಟೀಲ್ ವಕೀಲರು ಅಧ್ಯಕ್ಷರು ತಾಲೂಕ ಕುರುಬರ ಸಂಘ ಮಸ್ಕಿ, ಮಂಜುನಾಥ್ ಪಾಟೀಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಲ್ಲದಗುಡ್ಡ, ಬಸವರಾಜ್ ಕಡಬುರ್, ತಿಪ್ಪಣ್ಣ ಪಾಟೀಲ್, ಮಲ್ಲಪ್ಪ ಪೂಜಾರಿ, ಶಿವಣ್ಣ ಪೊಲೀಸ್ ಪಾಟೀಲ್, ಮಲ್ಲಯ್ಯ ಹಣಿಗಿ ಹನುಮಂತ ಪೋಸ್ಟ್, ತಿಪ್ಪಣ್ಣ ಗ್ರಾಮ ಪಂಚಾಯತ್ ಸದಸ್ಯರು, ಪ್ರಕಾಶ್ ಗೌಡ ಗ್ರಾಮ ಪಂಚಾಯತಿ ಸದಸ್ಯರು, ಶಿವರಾಜ್ ಕೆಎಸ್ಆರ್ಟಿಸಿ, ನಿಂಗಪ್ಪ ಕವಿತಾಳ, ಸಣ್ಣ ಅಮರಪ್ಪ, ಕೆಂಚನಗೌಡ ಪಾಟೀಲ್, ಲಕ್ಷ್ಮಿಪತಿ ಪಾಟೀಲ್, ಮೈಬೂಬ್ ಬಾಷಾ, ಮೌನೇಶ್ ಮಾಲಿಪಾಟೀಲ್, ಇನ್ನಿತರ ಉಪಸ್ಥಿತರಿದ್ದರು….
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030