ಪ್ರಯಾಗ ರಾಜ್ ಕುಂಭ ಮೇಳದಲ್ಲಿ ಬೆಳಗಾವಿಯ ನಾಲ್ವರು ಸಾವು ಪ್ರಕರಣ : ಬೆಳಗಾವಿ ಡಿಸಿ ಹೇಳಿದ್ದೇನು?
ಪ್ರಯಾಗ ರಾಜ್ ಕುಂಭ ಮೇಳದಲ್ಲಿ ಬೆಳಗಾವಿಯ ನಾಲ್ವರು ಸಾವು ಪ್ರಕರಣ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿಕೆ ಕಾಲ್ತುಳಿದಲ್ಲಿ ಪ್ರಯಾಗ ರಾಜನಲ್ಲಿ ಬೆಳಗಾವಿ ನಾಲ್ವರು ಸಾವನ್ನಪ್ಪಿದ್ರು ನಿನ್ನೆ ರಾತ್ರಿಯೇ ಆಂಬ್ಯಲೇನ್ಸ್ ಮೂಲಕ ಮೃತದೇಹಗಳನ್ನ ದೆಹಲಿಗೆ ಶಿಫ್ಟ್ ಮಾಡಿದ್ದೇವೆ.
ಕರ್ನಾಟಕ ಭವನ ಮೂಲಕ ಮರಣೋತ್ತರ ಪರೀಕ್ಷೆ ಸಿದ್ಧತೆ ಮಾಡಲಾಗಿದೆ ದೆಹಲಿಯಿಂದ 3.30ಕ್ಕೆ ಪ್ಲೈಟ್ ಇದೆ, 5.30ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ್ದಾರೆ ಜಿಲ್ಲಾಡಳಿತದಿಂದಲೇ ಸ್ವಾಗತ ಮಾಡಿಕೊಳ್ಳಲು ತಿಳಿಸಿದ್ದಾರೆ.
ಜೊತಗೆ ಮೃತರ ಕುಟುಂಬಗಳಿಗೆ ಪರಿಹಾರದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಇಂದು ನಡೆಯುವ ಸಚಿವ ಸಂಪುಟದಲ್ಲಿ ಪರಿಹಾರ ಘೋಷಣೆ ಮಾಡಬಹುದು ಸಮಯದ ಅಭಾವದಿಂದ ಮರಣೋತ್ತರ ಪರೀಕ್ಷೆ ಕ್ಯಾನ್ಸಲ್ ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯಬೇಕಿದ್ದ ನಾಲ್ವರು ಮೃತದೇಹ ಮರಣೋತ್ತರ ಪರೀಕ್ಷೆ ಬಹುತೇಕ ಕ್ಯಾನ್ಸಲ್ ಆಗಲಿದೆ. ಹಾಗಾಗಿ ಬೆಳಗಾವಿಯಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಿಕೊಳ್ಳಲು ಸಿದ್ಧತೆ ಮಾಡಿದ್ದೇವೆ ಎಂದು ಡಿಸಿ ಮಹಮ್ಮದ್ ರೋಷನ್ ತಿಳಿಸಿದ್ದಾರೆ…
ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030