ಬೆಳಗಾವಿ : ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಅಶೋಕ ಲೈಲ್ಯಾಂಡ್ ದೋಸ್ತ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಹಣವನ್ನು ಸಾಗಾಣೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಹಣದೊಂದಿಗೆ ಇಬ್ಬರನ್ನು ಪೊಲೀಸರು ವಸಕ್ಕೆ ಪಡೆದಿರುವ ಘಟನೆ ನಿನ್ನೆ ಅಂದರೆ ಶುಕ್ರವಾರ ಸಾಯಂಕಾರ ಬೆಳಗಾವಿಯಲ್ಲಿ ನಡೆದಿದೆ.
ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು(ಕಾ&ಸು) ಹಾಗೂ ಉಪ ಪೊಲೀಸ್ ಆಯುಕ್ತರು(ಅ&ಸಂ) ಬೆಳಗಾವಿ ನಗರ ಅವರ ಮಾಗದರ್ಶನದಲ್ಲಿ ನಗರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ವರ ಕುಂಬಾರ ಹಾಗೂ ಅವರ ತಂಡ ದಾಳಿ ಮಾಡಿ ನಿನ್ನೆ ಸಾಯಂಕಾಲ ವಾಹನವನ್ನು ವಶಕ್ಕೆ ಪಡೆಯಿತು.
ಅಕ್ರಮವಾಗಿ ಹಣ ಸಾಗಾಣೆ ಮಾಡುತ್ತಿದ್ದ ಮಹಾರಾಷ್ಟ್ರದ ಸಾಂಗಲಿಯ ಸಚಿನ್ ಮೇನಕುದಳಿ ಹಾಗೂ ಮಾರುತಿ ಮಾರಗುಡೆ ಇವರನ್ನು ವಶಕ್ಕೆ ಪಡೆದಿರುತ್ತಾರೆ. ಇವರಿಂದ ಒಟ್ಟು ನಗದು ಹಣ ರೂ. 2,73,27,500/- ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಾಣೆ ಮಾಡಲು ವಾಹನದ ಕ್ಯಾಬಿನ್ನಲ್ಲಿ ಮಾರ್ಪಾಡು ಮಾಡಿದ್ದು ಕಂಡು ಬಂದಿದ್ದು, ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಪ್ತದ ಹಣದ ಬಗ್ಗೆ ಕುಲಂಕುಶವಾದ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030