ರಾಹುಕಾಲ ಆರಂಭಕ್ಕೂ ಮೊದಲೇ ಸಿಎಂ ಬಜೆಟ್ ಮಂಡನೆ;ರಾಜ್ಯ ಬಜೆಟ್ ನಿರೀಕ್ಷೆಗಳೇನು…???

Listen to this article

ಬೆಂಗಳೂರು;CM ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 10:15 ಗಂಟೆಗೆ ಆಯವ್ಯಯ ಮಂಡಿಸಲಿದ್ದು, ಬಜೆಟ್ ಗಾತ್ರ ₹4 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. ಕಾಲುನೋವಿನಿಂದ ಬಳಲುತ್ತಿರುವ ಅವರು ವೀಲ್‌ಚೇರ್‌ನಲ್ಲೇ ಕೂತು ಬಜೆಟ್ ಮಂಡಿಸಲಿದ್ದಾರೆ.

ಇದು ಅವರ ವೈಯಕ್ತಿಕ ದಾಖಲೆಯಾಗಿದ್ದು, 16 ಬಾರಿ ಆಯವ್ಯಯ ಮಂಡನೆ ಮಾಡಿದ ಕೀರ್ತಿ ಅವರದಾಗಲಿದೆ. ರಾಜ್ಯದ ಇತಿಹಾಸದಲ್ಲಿ ಇಷ್ಟು ಬಾರಿ ಬಜೆಟ್ ಮಂಡಿಸಿದವರು ಇತರ ಯಾರೂ ಇಲ್ಲ.ಈ ಮಹತ್ವದ ಸಂದರ್ಭದಲ್ಲಿ, ಅವರು ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ, ಇತರ ಹೊಸ ಯೋಜನೆಗಳನ್ನೂ ಜಾರಿಗೆ ತರುವ ನಿರೀಕ್ಷೆಯಿದೆ. ಹಣಕಾಸು ಸಚಿವರಾಗಿದ್ದಾಗ, 1995-96ರಲ್ಲಿ ತಮ್ಮ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಗ್ಯಾರೆಂಟಿಗಳ ಹೊರೆಯಿದ್ದರೂ, ಜನರಿಗೆ ಹೆಚ್ಚಿನ ಭಾರವಾಗದಂತೆ ಜನಪರ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ನಿರೀಕ್ಷೆಯಿದ್ದು, ಈ ಬಾರಿಯ ಬಜೆಟ್ ಜನರ ಪಾಲಿಗೆ ಸಿಹಿಯಾಗುತ್ತಾ? ಕಾದು ನೋಡಬೇಕು.

ಬಜೆಟ್ ಲೈವ್ ಎಲ್ಲಿ ವೀಕ್ಷಿಸಬೇಕು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ರ ಬಜೆಟ್ ಮಂಡನೆ ಮಾಡಲಿದ್ದು, ವಿಧಾನ ಪರಿಷತ್‌ನ ವೆಬ್ ಕಾಸ್ಟ್‌ನಲ್ಲಿ . ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದ ನೇರ ಪ್ರಸಾರ ಇರಲಿದೆ, ಹಾಗು ರಾಜ್ಯದ ವಿವಿಧ ಖಾಸಗಿ ಸುದ್ದಿವಾಹಿನಿಗಳು ಸಿದ್ದರಾಮಯ್ಯ ಬಜೆಟ್ ಭಾಷಣವನ್ನು ನೇರ ಪ್ರಸಾರ ಮಾಡಲಿವೆ.

ರಾಹುಕಾಲ ಆರಂಭಕ್ಕೂ ಮೊದಲೇ ಬಜೆಟ್ ಮಂಡನೆ

ಅಭಿವೃದ್ಧಿ ಕಾರ್ಯ, ಗ್ಯಾರಂಟಿಗಳನ್ನು ಬ್ಯಾಲೆನ್ಸ್ ಮಾಡುವ ದೊಡ್ಡ ಸವಾಲು CM ಮುಂದಿದೆ. ಶುಕ್ರವಾರ ರಾಹುಕಾಲ ಬೆಳಗ್ಗೆ 10:30ಕ್ಕೆ ಆರಂಭವಾಗುತ್ತದೆ. ಇದಕ್ಕೂ ಮೊದಲು ಬೆಳಗ್ಗೆ 10:15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಮಂಡಿ ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಮೊದಲ 10 ನಿಮಿಷ ಮಾತ್ರ ನಿಂತುಕೊಂಡು ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ. ಸಂಪುಟ ಸಹೋದ್ಯೋಗಿಗಳ ಸಲಹೆ ಮೇರೆಗೆ ಸುಮಾರು ಮೂರೂವರೆ ತಾಸು ಮಂಡನೆ ಮಾಡಲಿದ್ದಾರೆ.

ರಾಜ್ಯ ಬಜೆಟ್ ನಿರೀಕ್ಷೆಗಳೇನು?

ಸಾಲದ ಹೊರೆ 7.5 ಲಕ್ಷ ಕೋಟಿ ರೂಪಾಯಿನಿಂದ 8 ಲಕ್ಷ ಕೋಟಿ ತಲುಪುವ ನಿರೀಕ್ಷೆ

ಸಣ್ಣಪುಟ್ಟ ತೆರಿಗೆ ಹೆಚ್ಚಳಕ್ಕೆ ಯತ್ನ ಮಾಡಬಹುದು, ದೊಡ್ಡ ಪ್ರಮಾಣದ ಕರ ಹೆಚ್ಚಳ ಅನುಮಾನ

ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದೆ

ಕಾರಣ ದೊಡ್ಡ ಯೋಜನೆಗಳ ಘೋಷಣೆ ಈ ಸಲವೂ ಕಷ್ಟ ಸಾಧ್ಯ

ಆದರೂ ರಾಜ್ಯದ ಜನರ ಹಿತಕ್ಕಾಗಿ ಕೆಲ ಸಣ್ಣಪುಟ್ಟ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ

ಗ್ಯಾರಂಟಿ ಹೊರೆ ಇದ್ದರೂ ಜನರ ಪರ ಕೆಲವು ಘೋಷಣೆಗಳ ನಿರೀಕ್ಷೆ

ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಕ್ಕೆ ಕ್ರಮ ಸಾಧ್ಯತೆ

ದಲಿತರಿಗೆ ಯುಪಿಎಸ್ಸಿ ತರಬೇತಿ ಯೋಜನೆ ಘೋಷಣೆ ಸಾಧ್ಯತೆ

ಮಕ್ಕಳಿಗಾಗಿ ಸ್ಕಿಲ್ ಟು ಸ್ಕೂಲ್ ಹೊಸ ಯೋಜನೆ ನಿರೀಕ್ಷೆ

ಸ್ಥಗಿತಗೊಂಡಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ, ಪಶುಭಾಗ್ಯಕ್ಕೆ ಮರುಚಾಲನೆ

ಶಾಸಕರಿಗೆ ವಿಶೇಷ ಅನುದಾನ

ವಿವಿಧ ಜಿಲ್ಲೆಗಳಿಗೆ ಹೊಸ ವೈದ್ಯಕೀಯ ಕಾಲೇಜುಗಳ ಘೋಷಣೆ ಸಂಭವ

ಹೊಸ ಜಿಲ್ಲೆ, ಹೊಸ ತಾಲೂಕುಗಳ ಘೋಷಣೆ ಸಾಧ್ಯತೆ

ಮೂಲ ಸೌಕರ್ಯಗಳು, ಕುಡಿಯುವ ನೀರು, ಟ್ರಾಫಿಕ್‌ ಸಮಸ್ಯೆ

ಸುಗಮ ಸಂಚಾರ ವ್ಯವಸ್ಥೆ, ಗುಂಡಿಗಳಿಲ್ಲದ ರಸ್ತೆಗಳು

ಮೆಟ್ರೋ ಕಾಮಗಾರಿ ಚುರುಕುಗೊಳಿಸುವುದು, ಬಿಎಂಟಿಸಿ ಬಸ್‌ ಸಂಚಾರ ಹೆಚ್ಚಳ,

ಸಬ್‌ ಅರ್ಬನ್‌ ರೈಲು ವ್ಯವಸ್ಥೆ ಸೇರಿ ಹಲವು ನಿರೀಕ್ಷೆಗಳಿವೆ

ಈ ಬಾರಿ ಬಜೆಟ್​ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ

ಕಳೆದ ಬಾರಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದರೆ, ಈ ಬಾರಿ ಆರ್ಥಿಕ ಶಿಸ್ತು ಕಾಪಾಡುವಲ್ಲಿ ಹೆಚ್ಚು ಗಮನಹರಿಸಲಿದ್ದಾರೆ. ಬಜೆಟ್ ವಾಸ್ತವಾಧಾರಿತವಾಗಿದ್ದು, ಸಮತೋಲನ ಕಾಪಾಡುವ ದೃಷ್ಟಿಯಿಂದ ಬುದ್ಧಿವಂತಿಕೆ ಪ್ರದರ್ಶಿಸುವ ನಿರೀಕ್ಷೆಯಿದೆ.

ಬಜೆಟ್ ಗಾತ್ರ:ಕಳೆದ ಬಾರಿಯ ಬಜೆಟ್ ಗಾತ್ರ ₹3.71 ಲಕ್ಷ ಕೋಟಿ ಆಗಿತ್ತು.ಈ ಬಾರಿ ಅದು ₹4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ.

ಸಾಲದ ಪ್ರಮಾಣ:

ರಾಜ್ಯವು ₹1.4 ಲಕ್ಷ ಕೋಟಿ ಸಾಲ ಮಾಡುವ ಸಾಧ್ಯತೆ ಇದೆ.ಇದು ಹೊಸ ಬಜೆಟ್‌ನಲ್ಲಿ ಮಹತ್ತರ ವಿಚಾರವಾಗಲಿದೆ.ಅಂದಾಜು ₹1.25 ಲಕ್ಷ ಕೋಟಿ ಸಾಲದ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ…

ಎಚ್ಚರಿಕೆ, ಮಂಜುನಾಥ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend