ಲಂಚ  ಸ್ವೀಕರಿಸುವಾಗ ಇಬ್ಬರು ಸರ್ಕಾರಿ ಅಧಿಕಾರಿಗಳು  ರೆಡ್ ಹ್ಯಾಂಡ್ ಆಗಿ ಲೋಕಾ  ಬಲೆಗೆ…!!!

ಬೀದರ್: ಲಂಚ  ಸ್ವೀಕರಿಸುವಾಗ ಇಬ್ಬರು ಸರ್ಕಾರಿ ಅಧಿಕಾರಿಗಳು  ರೆಡ್ ಹ್ಯಾಂಡ್ ಆಗಿ ಲೋಕಾ  ಬಲೆಗೆ ಬಿದ್ದ ಘಟನೆ ಬೀದರ್  ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಪಿಡಿಒ ರಾಹುಲ್, ಜೆಇ ಸಿದ್ರಾಮೇಶ್ವರ್ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ಬಂಧಿತ ಅಧಿಕಾರಿಗಳು 24 ಲಕ್ಷ ರೂಪಾಯಿ ಬಿಲ್‌ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದರಂತೆ 24 ಲಕ್ಷ ರೂಪಾಯಿಗೆ 2.55 ಲಕ್ಷ ರೂಪಾಯಿ ಹಣ ಲಂಚವಾಗಿ ನೀಡಲು ಡಿಮ್ಯಾಂಡ್ ಮಾಡಿದ್ದರಂತೆ. ಈ ಪೈಕಿ ಒಂದು ಲಕ್ಷ ರೂಪಾಯಿ ಹಣವನ್ನ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳನ್ನು ಬಂದಿದ್ದಾರೆ.

ಗುತ್ತಿಗೆದಾರ‌ ಅರವಿಂದ ಭಾಲ್ಕೆ ಎಂಬವರು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರಂತೆ. ನೌಬಾದ್‌ನ ಆಟೋ‌ ನಗರ, ಹಲ್ಬರ್ಗಾ ಬಸ್ ಸ್ಟ್ಯಾಂಡ್ ಬಳಿ ಕಮಿಷನ್ ಪಡೆಯುತ್ತಿದ್ದ ವೇಳೆ ಲೋಕಾ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಡಿಎಸ್ಪಿ‌ ಹನುಮಂತರಾಯ್ ಹಾಗೂ ಇನ್‌ಸ್ಪೆಕ್ಟರ್ ಬಾಬಾಸಾಹೇಬ್ ಪಾಟೀಲ್‌ ನೇತೃತ್ವದಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ದಾಳಿ ನಡೆಸಲಾಗಿದೆ. ದಾಳಿ ವೇಳೆ ಇಬ್ಬರು ಅಧಿಕಾರಿಗಳಿಂದ ಒಂದು ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಸಮ್ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಅರವಿಂದ ಭಾಲ್ಕೆ ನರೇಗಾ ಕೆಲಸ ಮಾಡಿಸುತ್ತಿದ್ದರಂತೆ. ಈ ಬಿಲ್ ಪಾವತಿ ಬಳಿಕ ಗುತ್ತಿಗೆದಾರನ ಬಳಿ ಅಧಿಕಾರಿಗಳು ಕಮಿಷನ್ ಕೇಳಿದ್ದರಂತೆ…

Leave a Reply

Your email address will not be published. Required fields are marked *