ಗಣಿತ ಕಬ್ಬಿಣದ ಕಡಲೆಯಲ್ಲ : ಶಂಕರರಾವ ಕುಲಕರ್ಣಿ…!!!

Listen to this article

ಗಣಿತ ಕಬ್ಬಿಣದ ಕಡಲೆಯಲ್ಲ : ಶಂಕರರಾವ ಕುಲಕರ್ಣಿ
ಗುಳೇದಗುಡ್ಡ : ಗಣಿತ ಹಲವರಿಗೆ ಕಬ್ಬಿಣದ ಕಡಲೆ ಆದರೆ
ಕೆಲವರಿಗೆ ಕಬ್ಬಣಿದ ಜೆಲ್ಲೆ. ಗಣಿತವನ್ನು ಇಷ್ಟ ಪಡುವವರಿಗೆ
ಗಣಿತ ಸಿಹಿಯಾದ ಬೆಲ್ಲ. ಆದರೆ ಶಾಲೆಯಲ್ಲಾಗಲಿ, ಬದುಕಿನಲ್ಲಾಗಿ
ಲೆಕ್ಕಾಚಾರ ಇಲ್ಲ ಎಂದರೆ ಬದುಕು ದುಸ್ಥರ. ಹೀಗಾಗಿ ಗಣಿತ ಎಲ್ಲರಿಗೂ
ಬೇಕು ಎಂದು ಮುಖ್ಯೋಪಾಧ್ಯಾಯ ಶಂಕರರಾವ ಕುಲಕರ್ಣಿ
ಹೇಳಿದರು.
ಅವರು ಸಮೀಪದ ಚಿಕ್ಕಮುಚ್ಚಳಗುಡ್ಡದ ಆದರ್ಶ
ವಿದ್ಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ
ಹಮ್ಮಿಕೊAಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗಣಿತ ಹಾಗೂ
ಲೆಕ್ಕಾಚಾರ ನಮ್ಮ ಬದುಕಿನ ಭಾಗವಾಗಿದೆ. ಶಾಲೆಯಲ್ಲಿ ಗಣಿತವನ್ನು
ಕಲಿಯುವುದರಿಂದ ಹಿಡಿದು ನಮ್ಮ ದೈನಂದಿನ ಬದುಕಿನಲ್ಲಿ
ಗಣಿತವನ್ನು ಅಳವಡಿಸಿಕೊಳ್ಳುವವರೆಗೂ ಗಣಿತವನ್ನು
ನಿರ್ಲಕ್ಷಿಸಲಾಗುವುದಿಲ್ಲ ಎಂದರು.
ಗಣಿತ ಶಿಕ್ಷಕಿ ರೇಣುಕಾ ಶಿಸ್ತಗಾರ ಮಾತನಾಡಿ, ಗಣಿತಕ್ಕೆ
ಭಾರತೀಯರ ಕೊಡುಗೆ ಅಪಾರವಾಗಿದೆ. ಗಣಿತ ಸೂತ್ರ,
ತಂತ್ರಗಳು ಆಸಕ್ತಿದಾಯಕವಾಗಿದ್ದು, ನಮ್ಮ ನಿರಂತರ
ಬದುಕಿನಲ್ಲಿ ಇದನ್ನು ಕಲಿಯುವ ಮಹತ್ವದ ಬಗ್ಗೆ ಅರಿವು ಮೂಡಿಸಲು
ಪ್ರತಿವರ್ಷ ರಾಷ್ಟ್ರೀಯ ಗಣಿತದಿನ ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ರಚಿಸಿದ ಗಣಿತದ ಮಾಡೆಲ್‌ಗಳ ಪ್ರದರ್ಶನವನ್ನು
ಉಪನ್ಯಾಸಕ ಅಶೋಕ ಕೊಡಗಲಿ, ಶಿಕ್ಷಣ ಸಂಯೋಜಕ ಬಸವರಾಜ
ಗೌಡರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಟಿ.ಎಚ್. ಕೀರ್ತಿ ಬಡಿಗೇರ, ರಮೇಶ
ಹಂಜಿ, ರಮೇಶ ಕತ್ತಿಕೈ, ಬಸವರಾಜ ಚಿಕ್ಕಣ್ಣವರ, ಬಸವರಾಜ
ಸಿಂದಗಿಮಠ, ಶ್ರೀನಿವಾಸ ಈಳಗೇರ, ರಂಗನಾಥ ಈಳಗೇರ,
ಅಶೋಕ ಪೂಜಾರಿ, ಎಸ್.ಬಿ. ಮುದೇನಗುಡಿ, ಕೇಶವ ರಘುವೀರ,
ದುರ್ಗಾ ಬಿ, ವೀರೇಶ ಮರಿಗೌಡರ, ಹನಮಂತ ಬಂಡಿವಡ್ಡರ
ಮತ್ತಿತರರ ಇದ್ದರು….

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend