ವಕೀಲರು ಸದಾ ಅಧ್ಯಯನಶೀಲರಾಗಬೇಕು: ನ್ಯಾ. ಬಸಾಪೂರ
ಗುಳೇದಗುಡ್ಡ : ವಕೀಲರು ಸದಾ ಅಭ್ಯಾಸದಲ್ಲಿ
ತೊಡಗಿರಬೇಕು. ಹೊಸಹೊಸ ಕಾನೂನುಗಳ ಬಗ್ಗೆ ತಿಳುವಳಿಕೆ
ಹೊಂದಿರಬೇಕು. ವಕೀಲು ಕೋರ್ಟಿನ ಸಮಯ ವ್ಯರ್ಥ
ಮಾಡಬಾರದು. ಕಕ್ಷಿದಾರರಿಗೆ ಅವಮಾನವಾಗವ ರೀತಿ ವಕೀಲರು
ಎಂದು ನಡೆದಕೊಳ್ಳಬಾರದು. ತಮ್ಮ ಕಕ್ಷಿದಾರರಿಗೆ ಗೌರವ
ನೀಡಬೇಕು. ವಕೀಲಿ ವೃತ್ತಿಗೆ ವಯಸ್ಸಿನ ಮಿತಿ ಇಲ್ಲ. 60ವರ್ಷ
ಮೀರಿದವರು ವಕೀಲ ವೃತ್ತಿ ಮಾಡಬಹುದು ಎಂದು
ಬಾಗಲಕೋಟೆಯ ಜಿಲ್ಲಾಗ್ರಾಹಕರ ನ್ಯಾಯಾಲಗಳ ಅಧ್ಯಕ್ಷ
ಡಿ.ವೈ. ಬಸಾಪೂರ ಹೇಳಿದರು.
ಅವರು ಪಟ್ಟಣದ ವಕೀಲರ ಸಂಘದ ಸಭಾಭವನದಲ್ಲಿ
ಮಂಗಳವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಿರಿಯ ವಕೀಲರು ನ್ಯಾಯಾಲದ
ಕಲಾಪಗಳನ್ನು ವೀಕ್ಷಿಸಿ, ಅನುಭವ ಪಡೆದುಕೊಳ್ಳಬೇಕು.
ದೇಶದಲ್ಲಿ ನಡೆಯುವತ್ತಿರುವ ಮಹತ್ವದ ಪ್ರಕರಣಗಳಬಗ್ಗೆ
ಅಧ್ಯಯನ ಮಾಡುವ ಮೂಲಕ ವೃತ್ತಿಕೌಶಲ್ಯ
ಹೆಚ್ಚಿಸಿಕೊಳ್ಳಬೇಕು. ಹಿರಿಯ ವಕೀಲರಿಂದ ಸಲಹೆ ಪಡೆಯಬೇಕು,
ಅವರಿಗೆ ಗೌರವ ನೀಡಬೇಕು. ನ್ಯಾಯಾಲಯದ ಕಲಾಪದ ವೇಳೆ
ನ್ಯಾಯವಾದಿಗಳು ಕಲಾಪದಿಂದ ಹೊರಗೆ ಹೋಗುವುದು,
ಬರುವುದು ಮಾಡಬಾರದು. ನ್ಯಾಯಾಲಯಕ್ಕೆ ಗೌರವ ನೀಡುವ ರೀತಿ
ಅವರ ವರ್ತನೆ ಇರಬೇಕು ಎಂದರು.
ವಕೀಲರು ತಮ್ಮ ಪ್ರಕರಣಗಳನ್ನು ಸರಿಯಾಗಿ
ಅಧ್ಯಯನ ಮಾಡಿ, ಕಾಲಹರಣ ಮಾಡದೇ ಶೀಘ್ರದಲ್ಲಿ ತಮ್ಮ
ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡವ ಕೆಲಸಮಾಡಬೇಕು.
ಇದರಿಂದ ವಕೀಲರು ತಮ್ಮ ಕಕ್ಷಿದಾರರ ನಂಬಿಕೆ
ಉಳಿಸಿಕೊಳ್ಳುತ್ತಾರೆ ಅಲ್ಲದೇ ಇದರಿಂದ ನ್ಯಾಯಾಲಯದ ಬಗ್ಗೆ
ಜನರಲ್ಲಿ ಗೌರವ ಹೆಚ್ಚುತ್ತದೆ ಎಂದರು ಹೇಳಿದರು.
ತಹಶೀಲ್ದಾರ ಮಂಗಳಾ ಎಂ, ಗುಳೇದಗುಡ್ಡದ ಜೆಎಂಎಫ್ಸಿ
ಸಂಚಾರಿನ್ಯಾಯಾಲಯದ ಪ್ರಧಾನ ದಿವಾಣಿ ನ್ಯಾಯಾಧೀಶ
ಸಂಜುಕುಮಾರ ಪಾಶ್ಚಾಪುರೆ, ಹೆಚ್ಚುವರಿ ನ್ಯಾಯಾಧೀಶ
ಸಹಾಯಕ ಸರಕಾರಿ ಅಭಿಯೋಜಕ ಮಧುಸೂದನ, ವಕೀಲರ
ಸಂಘದ ಅಧ್ಯಕ್ಷ ಎಸ್.ಆರ್. ಬರಹಾಣಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರ
ಬಾದಾಮಿಯ ಎಸ್.ಎಸ್. ಮಿಠ್ಠಲಕೋಡ, ನ್ಯಾಯವಾದಿಗಳಾದ ಎಸ್.ವೈ.
ಹೊಸಮನಿ, ಕೆ.ಆರ್. ರಾಯಚೂರ, ಜೆ.ಐ. ಮೇಟಿ, ಅರೂಣ ಉದ್ನೂರ,
ಕೃಷ್ಣಸಾ ಪವಾರ, ಗಂಗಾಧರ ರಾಂಪೂರ, ಶಕೀಲ ಕಂಟ್ರಾಕ್ಟರ್,
ತಮ್ಮಣ್ಣೆಪ್ಪ ಬೆನಕಟ್ಟಿ, ಆರ್. ಎಂ. ಅಲದಿ, ಎಂ.ಎಂ. ಎಣ್ಣಿ, ಜಿ.ಎಸ್. ಕೊರ್ತಿ,
ಎಲ್.ಎಂ. ಗೌಡರ, ಎನ್.ಆರ್. ಅಂಕದ, ಪುಂಡಲೀಕ ಬಡಿಗೇರ
ಮತ್ತಿತರರು ಇದ್ದರು…
ವರದಿ, ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030