ವಾರ್ಡನಲ್ಲಿ ಸಭೆ ನಡೆಸಿ ಬಜೆಟ್ ತಯಾರಿಸಿ: ಸಾರ್ವಜನಿಕರ ಆಗ್ರಹ
ಗುಳೇದಗುಡ್ಡ: ಪಟ್ಟಣದಲ್ಲಿ ಸುಸಜ್ಜಿತ ಗ್ರಂಥಾಲಯ,
ಮಹಿಳೆಯರಿಗೆ ಮೂತ್ರಾಲಯಗಳ ಕೊರತೆ ಇದ್ದು,
ಮಹಿಳೆಯರಿಗಾಗಿ ಮೂತ್ರಾಲಯ, ಗ್ರಂಥಾಲಯ ನಿರ್ಮಿಸಬೇಕು,
ಬೀದಿದೀಪ ಇಲ್ಲದ ಕಡೆಗಳಲ್ಲಿ ಬೀದಿದೀಪ ಅಳವಡಿಸಬೇಕು, ಪಟ್ಟಣದ
ರಸ್ತೆಗಳನ್ನು ನಿರ್ಮಿಸಬೇಕು ಹಾಗೂ ಬಜೆಟ್ ತಯಾರಿಸುವ
ಮುನ್ನ ವಾರ್ಡಿನ ಸಭೆ ನಡೆಸಿ, ಅವರ ಸಲಹೆ ಸೂಚನೆ ಪಡೆದು ಬಜೆಟ್
ತಯಾರಿಬೇಕು ಎಂದು ಸಾರ್ವಜನಿಕರು ಸಲಹೆಸೂಚನೆ ನೀಡಿದರು.
ಶುಕ್ರವಾರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ೨೦೨೪-೨೫ನೇ
ಸಾಲಿನ ಬಜೆಟ್ ತಯಾರಿಸುವ ಕುರಿತು ಸಾರ್ವಜನಿಕರ ಚರ್ಚಾ ಸಭೆಯಲ್ಲಿ,
ಮಾತನಾಡಿದ ಸಾರ್ವಜನಿಕರು ಪಟ್ಟಣದಲ್ಲಿ ಇದ್ದ ಏಕೈಕ ಉದ್ಯಾನವನ
ಗಾಂಧಿ ಚೌಕನ್ನು ಗಾಂಧಿಭವನ ನಿರ್ಮಿಸುತ್ತೇವೆ ಎಂದು ಕೆಡವಿ
ಉದ್ಯಾನವನ್ನು ಹಾಳು ಮಾಡಿ, ಅರ್ಧಮರ್ಧ ಕಟ್ಟಡ ನಿರ್ಮಿಸಿದ್ದು, ಇದು
ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಸಾಲಿನ ಬಜೆಟ್ನಲ್ಲಿ
ಗಾಂಧೀಭವನ ನಿರ್ಮಾಣಕ್ಕೆ ಹಣ ತಗೆದಿಡಬೇಕು ಎಂದು ಸಾರ್ವಜನಿಕರು
ಆಗ್ರಹಿಸಿದರು.
ಪಟ್ಟಣದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗಾಗಿ ವಿಶ್ರಾಂತಿ
ಪಡೆದುಕೊಳ್ಳಲು ಆಸನದ ವ್ಯವಸ್ಥೆ ನಿರ್ಮಿಸಬೇಕು.
ಗುಳೇದಗುಡ್ಡದಲ್ಲಿ ಈ ಸ್ವತ್ತು ಕಂಪ್ಯೂಟರ್ ಉತಾರ ನೀಡುವಲ್ಲಿ
ಪುರಸಭೆ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ
ಹಾಗೂ ಪುರಸಭೆಯ ಆದಾಯಕ್ಕೂ ತೊಂದರೆಯಾಗುತ್ತಿದೆ. ಅರ್ಜಿ
ಸಲ್ಲಿಸಿದವರಿಗೆ ಕಂಪ್ಯೂಟರ್ ಉತಾರವನ್ನು ಶೀಘ್ರ ತಲುಪಿಸುವ ವ್ಯವಸ್ಥೆ
ಮಾಡಬೇಕು. ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿ
ವರ್ಷಗಳೇ ಆದರೂ ಅವವುಗಳನು ಲೀಲಾವು ಮಾಡಿ ಸಾರ್ವಜನಿಕರಿಗೆ
ಹಸ್ತಾಂತರ ಮಾಡದೇ ಇರುವುದರಿಂದ ಪುರಸಭೆಯ ಆದಾಯಕ್ಕೆ
ಹಾನಿಯಾಗುತ್ತಿದೆ, ಕೂಡಲೇ ಮಳಿಗೆಗಳನ್ನು ಹರಾಜು
ಮಾಡಬೇಕು ಎಂದು ಆಗ್ರಹಿಸಿದರು. ಪಟ್ಟಣದ ಬಸವೇಶ್ವರ
ನಗರದ ಸ್ಮಶಾನದ ಕಾವಲುಗಾರಿನಿಗೆ ಪುರಸಭೆಯಿಂದ ವೇತನ
ನೀಡುವಂತೆ ಸಾರ್ವಜನಿಕರು ಆಗ್ರಹಿಸಿದರು. ಈಗಾಗಲೇ ಈ ಬಗ್ಗೆ
ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪುರಸಭೆ
ಮುಖ್ಯಾಧಿಕಾರಿ ಎ.ಎಚ್. ಮುಜಾವರ ಹೇಳಿದರು.
ಪುರಸಭೆಯ ಬಜೆಟ್ ಸಲಹೆಸೂಚನೆ ಸಭೆಯಲ್ಲಿ
ಪುರಸಭೆಯ ಹಲವಾರು ಸದಸ್ಯರು ಹಾಗೂ ಊರಿನ ಸಾರ್ವಜನಿಕರು
ಗೈರಾಗಿದ್ದು ಎದ್ದು ಕಾಣುತ್ತಿತ್ತು. ಪುರಸಭೆ ಅಧ್ಯಕ್ಷೆ ಜ್ಯೋತಿ
ಗೋವಿನಕೊಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ
ಪುರಸಭೆ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ಸದಸ್ಯರಾದ ಸಂತೋಷ
ನಾಯನೇಗಲಿ, ವಿಠ್ಠಲಸಾ ಕಾವಡೆ, ಕಾಶೀನಾಥ ಕಲಾಲ, ಪ್ರಶಾಂತ ಜವಳಿ,
ಅಮರೇಶ ಕವಡಿಮಟ್ಟಿ, ರಾಜೇಶ್ವರಿ ಉಂಕಿ, ಅಭಿಯಂತರ ಎಂ.ಜಿ.
ಕಿತ್ತಲಿ, ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ. ನಾಗರಾಜ ಕಟ್ಟಿಮನಿ,
ಹಾಗೂ ನಾಮನಿರ್ದೇಶನ ಸದಸ್ಯರು, ಸಾರ್ವಜನಿಕರು ಇದ್ದರು….
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030