ಕಿತ್ತೂರು ಉತ್ಸವದಲ್ಲಿ ಜನರ ರಂಜಿಸಿದ ಶ್ರೀ ಗುರುಪುಟ್ಟ ರಾಜ ತಂಡ
ಗುಳೇದಗುಡ್ಡ: ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ
ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ
ಅ.23ರಿಂದ 25ರ ವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆಯಲಿರುವ
ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ 200ನೇ ವರ್ಷದ ವಿಜಯೋತ್ಸವದ
ಚೆನ್ನಮ್ಮನ ಕಿತ್ತೂರು ಉತ್ಸವ 2024ರ ಕಾರ್ಯಕ್ರಮದಲ್ಲಿ ಪಟ್ಟಣದ
ಶ್ರೀಗುರುಪುಟ್ಟರಾಜ ಸಂಗೀತ ಪಾಠಾಶಾಲೆಯ ಪ್ರಾಚಾರ್ಯ ಬಸವರಾಜ
ಸಿಂದಗಿಮಠ, ವೈಷ್ಣವಿ ಗೂಳಿ, ಮೌನೇಶ ಬಡಿಗೇರ, ಚಂದ್ರಶೇಖರ ಆಲೂರ,
ಬಸವರಾಜಜಿಡಿಗಿ, ಶಂಕರ ಬಸುದೆ ಸುಂದರವಾಗಿ ಸುಗಮ ಸಂಗೀತ ಕಾರ್ಯಕ್ರಮ
ನೀಡಿ, ಜನರನ್ನು ರಂಜಿಸಿದರು. ನಂತರ ಸಂಗೀತ ಕಲಾವಿದರಿಗೆ ಜಿಲ್ಲಾಡಳಿತದ
ವತಿಯಿಂದ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ ಮೋಹನ
ಭಸ್ಮೆ, ನವೀನ ಮಡಿವಾಳರ ಸೇರಿದಂತೆ ಇತರರು ಇದ್ದರು..
ವರದಿ.. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030