ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭ
ಗುಳೇದಗುಡ್ಡ ಪಟ್ಟಣದಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕೋಟೆಕಲ್ಲ ಹಾಗೂ ಗುಳೇದಗುಡ್ಡ ಖಣ ಕೈಮಗ್ಗ ನೇಕಾರರ ಉತ್ಪಾದಕರ ಸಂಘ ಗುಳೇದಗುಡ್ಡ ಇವರ ಸಹಭಾಗಿತ್ವದಲ್ಲಿ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭೋತ್ಸವ ಹಾಗೂ ನೇಕಾರರ ಸೇವಾ ಕೇಂದ್ರ ಬೆಂಗಳೂರು ಇವರ ಆಶ್ರಯದಲ್ಲಿ 10ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಯಿತು…
ಪಟ್ಟಸಾಲಿ ನೇಕಾರರ ಗುರು ಪೀಠದ ಪೂಜ್ಯ 1008 ಜಗದ್ಗುರು ಗುರುಶಿದ್ದೇಶ್ವರ ಪಟ್ಟದ್ದಾರ್ಯ ಬಸವರಾಜ ಸ್ವಾಮೀಜಿ, ಪೂಜ್ಯ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನ ಮಠ ಸ್ವಾಮೀಜಿ , ಪೂಜ್ಯ ಶ್ರೀ ಗುರುಬಸವ ದೇವರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ , ಬಾಗಲಕೋಟೆ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೈಮಗ್ಗ ನೇಕಾರಿಕೆ ಮಾಡುವ ನೇಕಾರರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಜವಳಿ ಇಲಾಖೆ ಅಧಿಕಾರಿಗಳು, ಪಿ.ಕೆ.ಪಿ.ಎಸ್ ಸದಸ್ಯರು, ನೇಕಾರ ಮುಖಂಡರುಗಳು ಭಾಗವಹಿಸಿದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030