ಬ್ರoಧಾವನ ವೈನ್ ಶಾಪ್ ಸಿ ಎಲ್ 02 ಲೈಸೆನ್ಸ್ ಮಾತ್ರ ಆದರೆ ಇವರು ಸಾರಾಯಿ ಮಾರಲು ಇರುವ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಮಾರಾಟ.
ರಬಕವಿ ಬನಹಟ್ಟಿ : ಸರ್ಕಾರಗಳು ಸಾರಾಯಿ ಅಂಗಡಿಗಳಿಗೆ ಲೈಸೆನ್ಸ್ ನೀಡಬೇಕಾದರೆ ಸಾರ್ವಜನಿಕ ಹಿತಾಶಕ್ತಿ ಕಾಪಾಡುವ ಉದ್ದೇಶದಿಂದ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿರುತ್ತದೆ ಆದರೆ ಅಂಗಡಿಕಾರ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಯಲ್ಲಿ ತೂರಿ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಅಕ್ರಮ ಸಾರಾಯಿ ಮಾರಾಟ ಮಾಡತೊಡಗಿದ್ದಾರೆ. ಈ ಅಂಗಡಿ ಮಾಲೀಕನಿಗೆ ಯಾವ ಅಧಿಕಾರಿಗಳ ಭಯವಿಲ್ಲ ಮತ್ತು ಇವರಿಗೆ ಅಕ್ರಮ ದಂಧೆಗಳಿಗೆ ಅಧಿಕಾರಿಗಳು ಕಣ್ಣು ಇದ್ದು ಕಾಣದೆ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರಿಗೆ ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇದು ಎಲ್ಲಿ ಅಂತೀರಾ ಬಾಗಲಕೋಟೆ ಜಿಲ್ಲೆಯ ರಬಕವಿ -ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದಲ್ಲಿ ಬೃಂದಾವನ ವೈನ್ಸ್ ಶಾಪ್ ಈ ಅಂಗಡಿಗೆ ಸರ್ಕಾರವು ನೀಡಿರಿವುದು ಸಿ ಎಲ್ -2 ಲೈಸೆನ್ಸ್ ಮಾತ್ರ ಆದರೆ ಇಲ್ಲಿ ಪ್ರತಿದಿನ ಸರ್ಕಾರದಲ್ಲಿ ಇವರಿಗೆ ಕೊಡೋಕೆ ಲೈಸೆನ್ಸ್ ಯೇ ಇಲ್ಲ ಎನ್ನುವ ರೀತಿಯಲ್ಲಿ ತಮ್ಮ ಸುತ್ತ ಮುತ್ತಲಿನ ಹಳ್ಳಿಗಳಿಗೆ ಜಗದಾಳ, ನಾವಲಗಿ, ಯಲ್ಲಟ್ಟಿ, ಹಲಿಂಗಳಿ, ಮದನಮಟ್ಟಿ. ಕುಳೋಳ್ಳಿ. ಹಿಪ್ಪರಗಿ, ಇನ್ನೂ ಅನೇಕ ಹಳ್ಳಿಗಳಿಗೆ ಪ್ರತಿ ದಿನ 50-60 ಬಾಕ್ಸ್ ಸಾರಾಯಿ ಇವರೇ ನೋಡಿ ಯಲ್ಲನಗೌಡ ಪಾಟೀಲ್ ಮತ್ತು ಮಲೀಕತ್ವಡೆ ವೈನ್ ಶಾಪ್ ತಮ್ಮ ಸ್ವಂತ KA 22 MC 6935.ಮಾರುತಿ ರಿಟ್ಜ್ ವಾಹನದಲ್ಲಿ ಸಾಗಾಟ ಮಾಡುತ್ತಾರೆ.
ಇವರಿಗೆ ಯಾವ ಸರ್ಕಾರ ಮತ್ತು ಅಧಿಕಾರಿಗಳ ಭಯವಿಲ್ಲ ಯಾಕೆಂದರೆ ಇವರಿಗೆ ಸಪೋರ್ಟ್ಗಿಗೆ ದೊಡ್ಡ ದೊಡ್ಡ ರಾಜಕೀಯ ದಂಡೆ ಇದೆ ಅಂತೇ,ಅಷ್ಟೇ ಅಲ್ಲದೆ ಅಧಿಕಾರಿಗಳ ಈ ಸುದ್ದಿಯನ್ನು ನೋಡಿಯಾದರೂ ಇವರಿಗೆ ತಕ್ಕ ಪಾಠ ಕಲಿಸಿ ಇವರ ಅಂಗಡಿಯ ಲೈಸೆನ್ಸ್ ರದ್ದು ಮಾಡುತ್ತಾರೋ ಅಥವಾ ನೋಡಿಯೂ ನೋಡದ ಹಾಗೆ ಇರುತ್ತಾರೊ.
ಕಾದು ನೋಡಬೇಕಾಗಿದೆ ಎಂದು ಅಲ್ಲಿಯ ಸಾರ್ವಜನಿಕರು ಮಾಧ್ಯಮ ಮುಂದೆ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಅಕ್ರಮ ಸಾರಾಯಿ ಮಾರಾಟ ಅಂಗಡಿಯ ಬಗ್ಗೆ ಅಧಿಕಾರಿಗಳಿಗೆ ಬೆಟ್ಟಿ ನೀಡಿ ಸಂಪೂರ್ಣ ಮಾಹಿತಿ ಮುಂದಿನ ಸುದ್ದಿಯಲ್ಲಿ ನಿಮ್ಮ ಮುಂದೆ ಬಿಚ್ಚಿ ಇಡುತ್ತೇವೆ.
ವರದಿ :ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030