ಪಾವಗಡ ತಾಲ್ಲೂಕು, ಪೆಂಡ್ಲಿಜೀವಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ,
ವರದಿ; ಕೆ.ಎಂ ನಾಗರಾಜು, ಕ್ಯಾತಗಾನಚೆರ್ಲು, ಪಾವಗಡ
ಪಾವಗಡ ತಾಲ್ಲೂಕು, ನಾಲಮಡಿಕೆ ಹೋಬಳಿ, ಪೆಂಡ್ಲಿಜೀವಿ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ರವರ 134 ನೇ ಹಾಗೂ ಬಾಬಾ ಜಗಜೀವನ ರಾಂ ರವರ 118ನೇ ಜಯಂತಿಯನ್ನು ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನು ಮಾನ್ಯ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ಅನಾವರಣಗೊಳಿಸಿದರು, ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ತುಮುಲ್ ಅಧ್ಯಕ್ಷರು ಹಾಗೂ ತಾಲೂಕಿನ ಮಾನ್ಯ ಶಾಸಕರಾದಂತಹ ಹೆಚ್ ವಿ ವೆಂಕಟೇಶ್ ರವರು ಈ ಕಾರ್ಯಕ್ರಮದ ಕುರಿತು ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ ಈ ವೇದಿಕೆ ಮೇಲೆ ಮೈಕ್ ತಗೊಂಡು ಮಾತನಾಡಲು ಆಗುತ್ತಿರಲಿಲ್ಲ ಈ ಸಂವಿಧಾನ ಮಾರ್ಗದ ಅಡಿಯಲ್ಲಿ ಈ ದೇಶ ನಡೆಯುತ್ತದೆ, ಸಾಮಾಜಿಕ ನ್ಯಾಯವನ್ನು ಒದಗಿಸಿದರು ನಮ್ಮಂತಹ ಸಂವಿಧಾನವು ಪ್ರಪಂಚದಲ್ಲೇ ಇಲ್ಲ ಎಂದರು ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ನೇರಳೆಗುಂಟೆ ನಾಗೇಂದ್ರ ಕುಮಾರ್ ರವರು, ಹೊಸಹಳ್ಳಿ ಮಂಜು ರವರು, ನಾಗಲಮಡಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮರೆಡ್ಡಿ ರವರು, ತಿರುಮಣಿ ಸಿ ಐ ಗಿರೀಶ್ ರವರು, ಯುವಕ ಸಂಘದ ಅಧ್ಯಕ್ಷರಾದ ನಾರಾಯಣ ರವರು, ಕಿಲಾರ್ಲಹಳ್ಳಿ ನವೀನ್ ಕುಮಾರ್, ರಾಪ್ಟೆ ನಾಗರಾಜು, ದವಡಬೆಟ್ಟ ಮದ್ಲೇಟಪ್ಪ, ನಾಗಲಮಡಿಕೆ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಸಂಚಾಲಕರು ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ ನಾಗರಾಜು ರವರು, ಉಪ್ಪಾರಹಳ್ಳಿ ಪಾಳೇನಾಯಕ, ಶ್ರೀ ರಂಗಪುರ ಗಂಗಪ್ಪ, ಚನ್ನಪ್ಪ, ಶ್ರೀರಾಮಪ್ಪ, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030