ದೋತರಬಂಡಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಉಟಕನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ದೋತರಬಂಡಿ ಗ್ರಾಮದ ಬಸಲಿಂಗಪ್ಪ ದೇವರ್ ಇವರ ಮನೆಯಿಂದ ಹಳೆಯ ಕುಡಿಯುವ ನಿರಿನ ಟ್ಯಾಂಕ ವರೆಗೆ ಮಸೀದ ಮುಖಾಂತರ ಹಾಯ್ದು ಹೋಗುವ ರಸ್ತೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದSCP/TSP ಯೋಜನೆಯಡಿ ಸಿ.ಸಿ ರಸ್ತೆಯು ಮಂಜೂರಾತಿಯಾಗಿದ್ದು ಸದಲ ರಸ್ತೆಯನ್ನು ಈಗಾಗಲೇ ಕೆ.ಆರ್.ಐ.ಡಿ.ಎಲ್ ಸಂಸ್ಥೆಯವರು ಕಾಮಗಾರಿಯನ್ನು ಪ್ರಾರಂಭಿಸಿರುತ್ತಾರೆ ಸದಲ ರಸ್ತೆಯ ಮಧ್ಯದಲ್ಲಿ ಬರುವ ಮಸೀದಿ ಹತ್ತಿರ ಬರುವ ದ್ಯಾವಪ್ಪ ತಂದೆ: ಸಿದ್ದಪ್ಪ ಕುರುಬರು ಹಾಗೂ ಬಾಬುಸಾಬ್ ತಂದೆ: ಮೋದೀನ್ ಸಾಬ್ ಇವರು ಸದರಿ ಸಾರ್ವಜನಿಕರ ರಸ್ತೆಯನ್ನು ಅತಿಕ್ರಮಣ ಪ್ರವೇಶ ಮಾಡಿ ಸಾರ್ವಜನಿಕ ತಿರುಗಾಡುವ ರಸ್ತೆಯಲ್ಲಿ ಕಾಂಪೌಂಡ್ (ರಕ್ಷಣಾ ಗೋಡೆ) ಮತ್ತು ದನದ ಷಡ್ನ್ನು ನಿರ್ಮಾಣ ಮಾಡಿದ್ದಾರೆ ಈ ರಸ್ತೆಯ ಮಾರ್ಗವಾಗಿ ಸಾರ್ವಜನಿಕರು ತಮ್ಮ ಜಮೀನುಗಳಿಗೆ ತಿರುಗಾಡುವ ಬಳಕೆ ಮಾಡುದ ಅತಿ ಮುಖ್ಯ ರಸ್ತೆಯಾಗಿರುತ್ತದೆ ಈ ರಸ್ತೆಯ ಮಾರ್ಗವಾಗಿ ಟ್ರ್ಯಾಕ್ಟರ್, 200円 ಕೃಷಿ ಚಟುವಟಿಕೆಗೆ ಕುಂಟೆ ಇನ್ನಿತರ ವಾಹನಗಳು ಸಂಚರಿಸಲು ಅತಿ ಮುಖ್ಯರಸ್ತೆಯಾಗಿರುತ್ತದೆ ಅಲ್ಲದೆ ಈಗ ರಸ್ತೆಯ ಮಧ್ಯದಲ್ಲಿ ಬರುವ ಮಸೀದಿ ಹತ್ತಿರ ಬರುವ ದ್ಯಾವಪ್ಪ ತಂದೆ: ಸಿದ್ದಪ್ಪ ಕುರುಬರು ಹಾಗೂ ಬಾಬುಸಾಬ್ ತಂದೆ: ಮೋದೀನ್ ಸಾಬ್ ಇವರನ್ನು ಗ್ರಾಮದ ಗಣ್ಯರು ಮುಖಂಡರು ಹಿರಿಯರು ಕರೆಯಿಸಿ ಗ್ರಾಮದಲ್ಲಿ ರಾಜಿ ಪಂಚಾಯತಿ ಮಾಡಿದಾಗ ನಾವು ಸದರಿ ರಸ್ತೆಯಲ್ಲಿ ನಿರ್ಮಾಣ
ಮಾಡಿದ ರಕ್ಷಣಾಗೋಡೆ, ಮತ್ತು ದನದಷಡ್ನ್ನು ತೆರೆವುಗೊಳಿಸುತ್ತೇವೆಂದು ಅಶ್ವಶನೆ ನೀಡಿದ್ದರು ನಂತರ ಮಾತಿಗೆ ಬದ್ಧರಾಗಿರದೆ ನಾವು ತೆರವುಗೊಳಿಸುವುದಿಲ್ಲ ಯಾರು ಏನು ಮಾಡುತ್ತಾರೆ ನಾವು ಕೋಡಿಕೊಳುತೇವೆಂದು ದೌರ್ಜನ್ಯ ಗುಂಡಾಪ್ಯವೃತ್ತಿ ಯಿಂದ ವರ್ತಿಸುತ್ತಾ ಸದರಿ ಸಾರ್ವಜನಿಕರ ರಸ್ತೆಯನ್ನು. ಅತಿಕ್ರಮಣ ಪ್ರವೇಶ ಮಾಡಿ ಸಾರ್ವಜನಿಕ ತಿರುಗಾಡುವ ರಸ್ತೆಯಲ್ಲಿ ಕಾಂಪೌಂಡ್ (ರಕ್ಷಣಾ ಗೋಡೆ) ಮತ್ತು ದನದ ಷಡ್ನ್ನು ನಿರ್ಮಾಣ ಮಾಡಿದ್ದಾರೆ ಈ ಕುರಿತು ಉಲ್ಲೇಖ(1)ರ ಅನ್ವಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಉಟಕನೂರು ಇವರಿಗೆ ಗ್ರಾಮಸ್ಥರು ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಿದ ಸಾರ್ವಜನಿಕರ ರಸ್ತೆಯನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಾಣ ಮಾಡಿದ ದನದ ಷಡ್ ಮತ್ತು ರಕ್ಷಣಾಗೋಡೆಯನ್ನು ಗ್ರಾಮ ಸ್ವರಾಜ್ ಪಂಚಾಯತ ರಾಜ್ ಅಧಿನಿಯಮ 1993ರ ಅನ್ವಯ ಸಾರ್ವಜನಿಕರ ರಸ್ತೆಯನ್ನು ಒತ್ತುವರಿ ಮಾಡಿದ್ದು ಕಂಡುಬಂದಲ್ಲಿ ತಕ್ಷಣದಲ್ಲಿ ತೆರವುಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯತಿಗೆ ಇರುತ್ತದೆ ಆದರೆ ಸದರಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾಧ ಶ್ರೀಮತಿ ಶ್ವೇತಾ ಕುಲಕರ್ಣಿ ಇವರು ಉಡಾಫೆ ಉತ್ತರ ನೀಡುತ್ತಾ ನಾನು ಹತ್ತು ದಿನಕ್ಕೆ ಒಂದು ಬಾರಿ ನೋಟಿಸನ್ನು ಜಾರಿ ನಂತರ ಅಂತಿಮ ನೋಟಿಸ್ ಜಾರಿಗೊಳಿಸಿ ತರುವಾಯ ತೆರವುಗೊಳಿಸುತ್ತೇನೆಂದು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ ಈ ಮಧ್ಯಂತರದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಕೆ.ಆರ್.ಐ.ಡಿ.ಎಲ್ ಸಂಸ್ಥೆಯವರು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕಾಮಗಾರಿಯನ್ನು ನಿರ್ವಹಣೆ ಮಾಡಲು ಮುಂದಾಗಿದ್ದಾರೆ ಅಲ್ಲದೆ ಗ್ರಾಮದಲ್ಲಿ ಸುಮಾರು ನಾಲೈದು ಕಡೆ ಅದುಅಲ್ಲದೆ ವಿಶೇಷವಾಗಿ ತಿಪ್ಪೆಯ ಕೆಳಗಡೆಗೆ ಪೈಪಲೈನ್ ಲೀಕೇಜ್ ಇದ್ದು ಕರೆಂಟ್ ಹೋದ ಸಮಯದಲ್ಲಿ ಸಂಪೂರ್ಣ ಮಲೀನ ನೀರು ನಲ್ಲಿ ಕೊಳಾಯಿ ಮೂಲಕ ಬರುತ್ತಿದ್ದು ಇದರಿಂದ ಗ್ರಾಮದಲ್ಲಿ ಮಾರಕ ಸಾಂಕ್ರಾಮಿಕ ರೋಗ ಹರಡುತ್ತಿದೆ. ಈ ಎಲ್ಲಾ ಮೂಲ ಭೂತ ಸಮಸ್ಯೆಗಳನ್ನು ನಮ್ಮ ಅರ್ಜಿ ಸ್ವೀಕೃತಗೊಂಡ ಎಳೂದಿನಗಳೊಳಗಾಗಿ ಧರಣಿ ಸತ್ಯಾಗೃಹ ಹಮ್ಮಿಕೊಂಡು ತಹಶೀಲ್ದಾರ್ ಮಾನವಿ ಇವರಿಗೆ ಮನವಿ ಪತ್ರ ಸಲ್ಲಿಸಿದರು .. ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರರು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು….
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಯಲ್ಲನಗೌಡ,ಗೋವಿಂದಪ್ಪ,ಮಾಳಪ್ಪ,ಪ್ರಕಾಶ್,ಗಿರಿಯಪ್ಪ ,ವೀರೇಶ್ ಅಂಗಡಿ ,ರಮೇಶ್ ನಾಯಕ್, ದೊಡ್ಡ ಯಲ್ಲಪ್ಪ ,ಮರಿಯಪ್ಪ, ಆದಪ್ಪ ಸಾಹುಕಾರ್, ಅಮರಣ್ಣ ಸಾಹುಕಾರ್,ಮತ್ತು ದೋತರ್ಬಂಡಿ ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030